‘ಕನ್ನಡ ಕೋಗಿಲೆ’ ಮೊದಲನೇ ಆವೃತ್ತಿಯ ಫೈನಲ್ ಸುತ್ತಿನ ಸ್ಪರ್ಧಿಗಳಾದಪುತ್ತೂರಿನ ಅಖಿಲಾ ಪಜಿಮಣ್ಣು, ರಾಯಚೂರಿನ ಕರಿಬಸವ ಹಾಗೂ ಎರಡನೇ ಆವೃತ್ತಿಯ ರನ್ನರ್ ಅಪ್ಗಳಾದಶಿವಮೊಗ್ಗದ ಪಾರ್ಥ ಚಿರಂತನ್ ಮತ್ತು ಬೆಂಗಳೂರಿನ ನೀತೂ ಸುಬ್ರಹ್ಮಣ್ಯಂ ಅವರು ಪ್ರಶಸ್ತಿಗಾಗಿ ಮತ್ತೊಮ್ಮೆ ಹೋರಾಡಲಿದ್ದಾರೆ. ಇವರಲ್ಲದೆ,ಮನೋಜವಂ ಆತ್ರೇಯ, ಪುರುಷೋತ್ತಮ, ಸ್ಪರ್ಶ ಆರ್.ಕೆ., ನಿಹಾರಿಕಾ, ನಿತಿನ್ ರಾಜಾರಾಂ ಶಾಸ್ತ್ರಿ, ದರ್ಶಿನಿ ಶೆಟ್ಟಿ, ಅನಂತರಾಜ್ ಮಿಸ್ತ್ರಿ, ಅರುಂಧತಿ ವಸಿಷ್ಠ, ಅದಿತಿ ಮತ್ತು ತನುಷ್ ರಾಜ್ ಕೂಡಾ ಸೆಣಸಾಡಲಿದ್ದಾರೆ. ತೀರ್ಪುಗಾರರಾಗಿ ಸಾಧು ಕೋಕಿಲಾ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಇರಲಿದ್ದಾರೆ. ಸಿರಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.