ಬೆಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ದೇಶವ್ಯಾಪಿ ಲಾಕ್ಡೌನ್ ಆಗಿರುವ ಹೊತ್ತಲ್ಲಿ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಅವರು ಕೊರೊನಾ ಜಾಗೃತಿ ಗೀತೆಯೊಂದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
'ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ,
ಅದಕೆ ನಾವೇ ಈಗ ದಾರಿಯಾಗದಿರೋಣ
ಕಾಲ ಬುಡಕೆ ಬರುವನಕ ಕಾಯದಿರೋಣ
ನಾವೆ ಇಂದು ನಮಗೊಂದು ಅವಕಾಶ ಕೊಡೋಣ' ಎಂಬ ಈ ಹಾಡಿಗೆ ಸ್ವತಃ ಎಸ್ಪಿಬಿಯವರೇ ಸ್ವರ ಸಂಯೋಜನೆ ಮಾಡಿದ್ದಾರೆ. ಹಾಡಿನ ಸಾಹಿತ್ಯ ಜಯಂತ್ ಕಾಯ್ಕಿಣಿಯವರದ್ದು.