ನಟನೆ, ನಿರ್ದೇಶನ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆ ಇರುವ ಸ್ವಘೋಷಿತ ಬುದ್ಧಿಜೀವಿಗಳಲ್ಲಿ ಒಬ್ಬನಾದ ಎಚ್.ಬಿ.ಆರ್ ಎನ್ನುವ ಸಾಹಿತಿಯ ಕತೆ ‘ದಹನ’. ಹೆಣ್ಣಿನ ಮನಸ್ಸಿನೊಳಗೆ ಇಳಿದು ಆಕೆಯ ಅಂತರಾಳದ ನೋವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ ಬರೆಯುವ ಈತನಿಗೆ, ಅಕ್ಷತಾ ಎನ್ನುವ ಅಭಿಮಾನಿಯೊಬ್ಬಳು, ತನ್ನ ಸಮಸ್ಯೆ ಹೇಳಿಕೊಳ್ಳಬೇಕು, ಮನೆಗೆ ಬರುವಿರಾ? ಎಂದು ಬರುವ ಪೋನ್ ಕರೆಯಿಂದ ಶುರುವಾಗುವ ಕಥಾವಸ್ತು ಮುಂದೆ ಅನೇಕ ತಿರುವುಗಳನ್ನು ಪಡೆಯುತ್ತದೆ.