<p>ಚನ್ನರಾಯಪಟ್ಟಣ: ಪಟ್ಟಣದ ಸಾಹಿತಿ, ಕಲಾವಿದ ಚಂದ್ರು ಕಾಳೇನಹಳ್ಳಿ ರಚಿಸಿದ ಗಂಧವತಿ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2024ರ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ ಮಾಡಿದೆ.</p>.<p>‘ಗಂಧವತಿ’ ನಾಟಕ ಹೊಯ್ಸಳರ ಅರಸ ವಿಷ್ಣುವರ್ಧನ ಮತ್ತು ಶಾಂತಲೆಯ ಜೀವನಾಧರಿತ ನಾಟಕವಾಗಿದೆ. 10ನೇ ಶತಮಾನದಲ್ಲಿನ ಕೋಮು ಸಾಮರಸ್ಯವನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹಾಗೂ ಜನಪದರಂಗ ಮಾಧ್ಯಮದ ಅಧ್ಯಕ್ಷರು ಆಗಿರುವ ಚಂದ್ರು ಕಾಳೇನಹಳ್ಳಿ, ಈವರೆಗೆ 10 ನಾಟಕಗಳನ್ನು ರಚಿಸಿದ್ದಾರೆ.</p>.<p>ಜಾನಪದ ಕ್ಷೇತ್ರದಲ್ಲಿ ಸೋಲಿಗರ ಸಂಸ್ಕೃತಿ ಸಂಶೋಧನಾ ಪ್ರಬಂಧ, ಜಾನಪದ ಪ್ರವೇಶ ಮತ್ತು ನಗರ ಜಾನಪದ ಕೃತಿ ರಚಿಸಿದ್ದಾರೆ. ಮೂಡಲಪಾಯದ ಪುನಶ್ಚೇತನಕ್ಕೆ ಒತ್ತು ನೀಡಲಾಗಿದ್ದು, ಈಗಾಗಲೇ ಹಲವು ಕಡೆ ಭೀಮಾರ್ಜುನ ಕಾಳಗ ಯಕ್ಷಗಾನವನ್ನು ಇವರ ನೇತೃತ್ವದಲ್ಲಿ ಕಲಾವಿದರು ಪ್ರದರ್ಶಿಸಿದ್ದಾರೆ.</p>.<p>‘ಬುಧವಾರ ಸಂಜೆ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಚಾರ ತಿಳಿಸಿದಾಗ ಸಂತಸವಾಯಿತು. ಈ ಕ್ಷೇತ್ರದಲ್ಲಿ ಇನ್ನು ಸಾಧನೆ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ. ಹೊಯಳ್ಸರ ಸಾಮ್ರಾಜ್ಯ ಕುರಿತು ಇನ್ನೊಂದು ಕೃತಿ ರಚಿಸಲಾಗುವುದು’ ಎಂದು ಚಂದ್ರು ಕಾಳೇನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-36-1475531719</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನರಾಯಪಟ್ಟಣ: ಪಟ್ಟಣದ ಸಾಹಿತಿ, ಕಲಾವಿದ ಚಂದ್ರು ಕಾಳೇನಹಳ್ಳಿ ರಚಿಸಿದ ಗಂಧವತಿ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2024ರ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ ಮಾಡಿದೆ.</p>.<p>‘ಗಂಧವತಿ’ ನಾಟಕ ಹೊಯ್ಸಳರ ಅರಸ ವಿಷ್ಣುವರ್ಧನ ಮತ್ತು ಶಾಂತಲೆಯ ಜೀವನಾಧರಿತ ನಾಟಕವಾಗಿದೆ. 10ನೇ ಶತಮಾನದಲ್ಲಿನ ಕೋಮು ಸಾಮರಸ್ಯವನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹಾಗೂ ಜನಪದರಂಗ ಮಾಧ್ಯಮದ ಅಧ್ಯಕ್ಷರು ಆಗಿರುವ ಚಂದ್ರು ಕಾಳೇನಹಳ್ಳಿ, ಈವರೆಗೆ 10 ನಾಟಕಗಳನ್ನು ರಚಿಸಿದ್ದಾರೆ.</p>.<p>ಜಾನಪದ ಕ್ಷೇತ್ರದಲ್ಲಿ ಸೋಲಿಗರ ಸಂಸ್ಕೃತಿ ಸಂಶೋಧನಾ ಪ್ರಬಂಧ, ಜಾನಪದ ಪ್ರವೇಶ ಮತ್ತು ನಗರ ಜಾನಪದ ಕೃತಿ ರಚಿಸಿದ್ದಾರೆ. ಮೂಡಲಪಾಯದ ಪುನಶ್ಚೇತನಕ್ಕೆ ಒತ್ತು ನೀಡಲಾಗಿದ್ದು, ಈಗಾಗಲೇ ಹಲವು ಕಡೆ ಭೀಮಾರ್ಜುನ ಕಾಳಗ ಯಕ್ಷಗಾನವನ್ನು ಇವರ ನೇತೃತ್ವದಲ್ಲಿ ಕಲಾವಿದರು ಪ್ರದರ್ಶಿಸಿದ್ದಾರೆ.</p>.<p>‘ಬುಧವಾರ ಸಂಜೆ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಚಾರ ತಿಳಿಸಿದಾಗ ಸಂತಸವಾಯಿತು. ಈ ಕ್ಷೇತ್ರದಲ್ಲಿ ಇನ್ನು ಸಾಧನೆ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ. ಹೊಯಳ್ಸರ ಸಾಮ್ರಾಜ್ಯ ಕುರಿತು ಇನ್ನೊಂದು ಕೃತಿ ರಚಿಸಲಾಗುವುದು’ ಎಂದು ಚಂದ್ರು ಕಾಳೇನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-36-1475531719</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>