<p>ಚಿತ್ರದುರ್ಗ: ‘ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ನಟನೆ, ಕಲಾ ಕೌಶಲ ನಶಿಸುತ್ತಿವೆ. ರಂಗಕಲೆ ಉಳಿಸಿ ಬೆಳೆಸುವ ಹೊಣೆ ಕಲಾ ಪ್ರೇಮಿಗಳ ಮೇಲಿದೆ’ ಎಂದು ರಂಗಭೂಮಿ ಕಲಾವಿದ ರಾಮುಭೋದೆ ತಿಳಿಸಿದರು.</p>.<p>ನಗರದ ವೆಸ್ಟರ್ನ್ ಹಿಲ್ಸ್ ವಿದ್ಯಾಲಯದಲ್ಲಿ ಶುಕ್ರವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆಲವರಿಗೆ ಕಲೆಗೆ ತಕ್ಕ ಅವಕಾಶಗಳು ಸಿಕ್ಕರೂ ಕೆಲವೊಮ್ಮೆ ಅರ್ಹತೆಯುಳ್ಳ ಪ್ರತಿಭೆಗಳು ಮುನ್ನೆಲೆಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<p>‘ಇತ್ತೀಚಿನ ದಿನಗಳಲ್ಲಿ ನಾಟಕಗಳು ತೆರೆಮರೆಗೆ ಸರಿಯುತ್ತಿವೆ. ಚುಟುಕು ಸಿನಿಮಾ, ರೀಲ್ಸ್ ಹಾಗೂ ಮೊಬೈಲ್ ಭರಾಟೆಯಲ್ಲಿ ರಂಗಭೂಮಿ ಕಲೆ ವಿನಾಶದ ಅಂಚಿನಲ್ಲಿವೆ. ಈ ಹಿಂದೆ ಹಬ್ಬ ಹರಿದಿನಗಳಲ್ಲಿ ರಾತ್ರಿಯಿಡೀ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಆದರೆ ಆ ಸಂಸ್ಕೃತಿ ದೂರವಾಗುತ್ತಿದೆ’ ಎಂದು ಪತ್ರಕರ್ತ ಸಿದ್ದರಾಜು ತಿಳಿಸಿದರು.</p>.<p>ಪ್ರಾಂಶುಪಾಲೆ ಡಿ.ಮಂಜುಳಾ, ಗಾಯಕ ಪ್ರಜ್ವಲ್, ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-44-934913257</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ನಟನೆ, ಕಲಾ ಕೌಶಲ ನಶಿಸುತ್ತಿವೆ. ರಂಗಕಲೆ ಉಳಿಸಿ ಬೆಳೆಸುವ ಹೊಣೆ ಕಲಾ ಪ್ರೇಮಿಗಳ ಮೇಲಿದೆ’ ಎಂದು ರಂಗಭೂಮಿ ಕಲಾವಿದ ರಾಮುಭೋದೆ ತಿಳಿಸಿದರು.</p>.<p>ನಗರದ ವೆಸ್ಟರ್ನ್ ಹಿಲ್ಸ್ ವಿದ್ಯಾಲಯದಲ್ಲಿ ಶುಕ್ರವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆಲವರಿಗೆ ಕಲೆಗೆ ತಕ್ಕ ಅವಕಾಶಗಳು ಸಿಕ್ಕರೂ ಕೆಲವೊಮ್ಮೆ ಅರ್ಹತೆಯುಳ್ಳ ಪ್ರತಿಭೆಗಳು ಮುನ್ನೆಲೆಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<p>‘ಇತ್ತೀಚಿನ ದಿನಗಳಲ್ಲಿ ನಾಟಕಗಳು ತೆರೆಮರೆಗೆ ಸರಿಯುತ್ತಿವೆ. ಚುಟುಕು ಸಿನಿಮಾ, ರೀಲ್ಸ್ ಹಾಗೂ ಮೊಬೈಲ್ ಭರಾಟೆಯಲ್ಲಿ ರಂಗಭೂಮಿ ಕಲೆ ವಿನಾಶದ ಅಂಚಿನಲ್ಲಿವೆ. ಈ ಹಿಂದೆ ಹಬ್ಬ ಹರಿದಿನಗಳಲ್ಲಿ ರಾತ್ರಿಯಿಡೀ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಆದರೆ ಆ ಸಂಸ್ಕೃತಿ ದೂರವಾಗುತ್ತಿದೆ’ ಎಂದು ಪತ್ರಕರ್ತ ಸಿದ್ದರಾಜು ತಿಳಿಸಿದರು.</p>.<p>ಪ್ರಾಂಶುಪಾಲೆ ಡಿ.ಮಂಜುಳಾ, ಗಾಯಕ ಪ್ರಜ್ವಲ್, ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-44-934913257</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>