<p>ದಾವಣಗೆರೆ: ‘ವೃತ್ತಿ ರಂಗಭೂಮಿಯನ್ನು ನಂಬಿಕೊಂಡು ಜೀವನ ನಡೆಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ವೃತ್ತಿ ರಂಗಭೂಮಿಯು ಹೊಸತನದೊಂದಿಗೆ ನದಿಯಂತೆ ಹರಿಯುತ್ತಲೇ ಇದೆ’ ಎಂದು ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಂಗೋತ್ಸವದ ಅಂಗವಾಗಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ‘ಕೊಂಕಣ ಪರಿಸರದ ವೃತ್ತಿ ರಂಗಭೂಮಿ’ ಕುರಿತು ವಿಷಯ ಮಂಡಿಸಿದರು.</p>.<p>‘10ನೇ ಶತಮಾನದಲ್ಲಿ ಕಲೆಯಾಗಿ ಪ್ರಾರಂಭವಾದ ವೃತ್ತಿ ರಂಗಭೂಮಿ ಈಗ ಹೊಸ ಆಯಾಮ ಪಡೆದುಕೊಂಡಿದೆ. ತಂತ್ರಜ್ಞಾನದ ನೆರವಿನಿಂದ ಹೊಸ ಪ್ರೇಕ್ಷಕರನ್ನೂ ತಲುಪುತ್ತಿದೆ’ ಎಂದರು.</p>.<p>‘ದೀರ್ಘವಾದ ಪರಿಕಲ್ಪನೆಯೊಂದಿಗೆ ಸಮಾಜದ ಗಂಭೀರ ವಿಚಾರಗಳನ್ನು ಪ್ರಸ್ತುತಪಡಿಸುವುದಕ್ಕೆ ನಾಟಕಗಳು ಪ್ರಖ್ಯಾತಿಯಾಗಿದ್ದವು. ಆಸಕ್ತಿ ಮೂಡಿಸುವಂತಹ ಕಿರುಚಿತ್ರಗಳು, ವೆಬ್ ಸೀರಿಸ್ಗಳ ಮೂಲಕವೂ ರಂಗಭೂಮಿ ಮತ್ತೆ ಹೊಸ ಹುಮ್ಮಸ್ಸಿನೊಂದಿಗೆ ಜೀವಂತವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕೊಂಕಣಿ ಭಾಷೆ ಮತ್ತು ರಂಗಭೂಮಿಯು ದೇಶದಾದ್ಯಂತ ಗಾಢವಾದ ಪ್ರಭಾವ ಬೀರಿದೆ. ಕೊಂಕಣವು ಭಾರತದ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪ್ರದೇಶವಾಗಿದೆ. ಇದು ಮಹಾರಾಷ್ಟ್ರ, ಗೋವಾ, ಕರಾವಳಿ ಕರ್ನಾಟಕ ಮತ್ತು ತುಳುನಾಡನ್ನು ಒಳಗೊಂಡಿದೆ’ ಎಂದರು.</p>.<p>ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಅಂಕಣಕಾರ ಬಿ. ಚಂದ್ರೇಗೌಡ ಸಮಾರೋಪ ಭಾಷಣ ಮಾಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ದೇವಸೇನಾ ಡಿ.ಎಸ್. ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-43-2012593637</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ‘ವೃತ್ತಿ ರಂಗಭೂಮಿಯನ್ನು ನಂಬಿಕೊಂಡು ಜೀವನ ನಡೆಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ವೃತ್ತಿ ರಂಗಭೂಮಿಯು ಹೊಸತನದೊಂದಿಗೆ ನದಿಯಂತೆ ಹರಿಯುತ್ತಲೇ ಇದೆ’ ಎಂದು ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಂಗೋತ್ಸವದ ಅಂಗವಾಗಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ‘ಕೊಂಕಣ ಪರಿಸರದ ವೃತ್ತಿ ರಂಗಭೂಮಿ’ ಕುರಿತು ವಿಷಯ ಮಂಡಿಸಿದರು.</p>.<p>‘10ನೇ ಶತಮಾನದಲ್ಲಿ ಕಲೆಯಾಗಿ ಪ್ರಾರಂಭವಾದ ವೃತ್ತಿ ರಂಗಭೂಮಿ ಈಗ ಹೊಸ ಆಯಾಮ ಪಡೆದುಕೊಂಡಿದೆ. ತಂತ್ರಜ್ಞಾನದ ನೆರವಿನಿಂದ ಹೊಸ ಪ್ರೇಕ್ಷಕರನ್ನೂ ತಲುಪುತ್ತಿದೆ’ ಎಂದರು.</p>.<p>‘ದೀರ್ಘವಾದ ಪರಿಕಲ್ಪನೆಯೊಂದಿಗೆ ಸಮಾಜದ ಗಂಭೀರ ವಿಚಾರಗಳನ್ನು ಪ್ರಸ್ತುತಪಡಿಸುವುದಕ್ಕೆ ನಾಟಕಗಳು ಪ್ರಖ್ಯಾತಿಯಾಗಿದ್ದವು. ಆಸಕ್ತಿ ಮೂಡಿಸುವಂತಹ ಕಿರುಚಿತ್ರಗಳು, ವೆಬ್ ಸೀರಿಸ್ಗಳ ಮೂಲಕವೂ ರಂಗಭೂಮಿ ಮತ್ತೆ ಹೊಸ ಹುಮ್ಮಸ್ಸಿನೊಂದಿಗೆ ಜೀವಂತವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕೊಂಕಣಿ ಭಾಷೆ ಮತ್ತು ರಂಗಭೂಮಿಯು ದೇಶದಾದ್ಯಂತ ಗಾಢವಾದ ಪ್ರಭಾವ ಬೀರಿದೆ. ಕೊಂಕಣವು ಭಾರತದ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪ್ರದೇಶವಾಗಿದೆ. ಇದು ಮಹಾರಾಷ್ಟ್ರ, ಗೋವಾ, ಕರಾವಳಿ ಕರ್ನಾಟಕ ಮತ್ತು ತುಳುನಾಡನ್ನು ಒಳಗೊಂಡಿದೆ’ ಎಂದರು.</p>.<p>ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಅಂಕಣಕಾರ ಬಿ. ಚಂದ್ರೇಗೌಡ ಸಮಾರೋಪ ಭಾಷಣ ಮಾಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ದೇವಸೇನಾ ಡಿ.ಎಸ್. ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-43-2012593637</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>