<p>ಹೂವಿನಹಡಗಲಿ: ‘ದೂರದರ್ಶನ, ಮೊಬೈಲ್ ಹಾವಳಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬಯಲಾಟ ಕಲೆ ಬಡವಾಗಿದೆ’ ಎಂದು ಹಿರಿಯ ದೊಡ್ಡಾಟ ಕಲಾವಿದೆ ಎ.ಎಂ. ಹಾಲಯ್ಯ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಸಾಂಸ್ಕೃತಿಕ ದೊಡ್ಡಾಟ ಸಂಘ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಜಾನಪದ ರಂಗ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರ ಕೊರತೆ ಇದೆ. ಯುವಕರು ರಂಗಭೂಮಿಯ ಒಲವು ಬೆಳೆಸಿಕೊಂಡಿದ್ದು, ಈ ಕ್ಷೇತ್ರವನ್ನು ಕೂಡ ಬೆಳೆಸಬೇಕು’ ಎಂದು ತಿಳಿಸಿದರು.</p>.<p>ಮುಖಂಡ ಎಂ.ಬಿ.ಬಸವರಾಜ ಮಾತನಾಡಿ, ನಾಟಕ, ಬಯಲಾಟಗಳು ಜನರಿಗೆ ಮನರಂಜನೆ ಒದಗಿಸುವ ಜತೆಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಗ್ರಾಮೀಣ ಭಾಗದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ರಂಗಭೂಮಿಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.</p>.<p>ಹಿರಿಯ ಕಲಾವಿದ ಮಲ್ಲಯ್ಯ ಗವಾಯಿ ಮಾತನಾಡಿದರು. ಕಲಾವಿದರಾದ ದೂಪದ ಕೊಟ್ರಪ್ಪ, ಗಚ್ಚಿನಮನಿ ಕೊಟ್ರಪ್ಪ, ಕೋಗಳಿ ಕುಬೇರಪ್ಪ, ಡಿ. ಹೊನ್ನೇಶ, ಎಚ್.ಕಲ್ಲೇಶ, ಸಿ.ನಾಗಭೂಷಣ ಇದ್ದರು.</p>.<p>ದೊಡ್ಡಾಟ ಕಲಾವಿದರಾದ ಬಿ. ಕಸ್ತೂರಪ್ಪ, ವೈ. ಕರಿಬಸಪ್ಪ ಬಯಲಾಟ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಕೋಗಳಿಯ ಕಲಾವಿದರು ಸಂಗ್ಯಾಬಾಳ್ಯ ಬಯಲಾಟ ಪ್ರಸ್ತುತಿಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1434698026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೂವಿನಹಡಗಲಿ: ‘ದೂರದರ್ಶನ, ಮೊಬೈಲ್ ಹಾವಳಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬಯಲಾಟ ಕಲೆ ಬಡವಾಗಿದೆ’ ಎಂದು ಹಿರಿಯ ದೊಡ್ಡಾಟ ಕಲಾವಿದೆ ಎ.ಎಂ. ಹಾಲಯ್ಯ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಸಾಂಸ್ಕೃತಿಕ ದೊಡ್ಡಾಟ ಸಂಘ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಜಾನಪದ ರಂಗ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರ ಕೊರತೆ ಇದೆ. ಯುವಕರು ರಂಗಭೂಮಿಯ ಒಲವು ಬೆಳೆಸಿಕೊಂಡಿದ್ದು, ಈ ಕ್ಷೇತ್ರವನ್ನು ಕೂಡ ಬೆಳೆಸಬೇಕು’ ಎಂದು ತಿಳಿಸಿದರು.</p>.<p>ಮುಖಂಡ ಎಂ.ಬಿ.ಬಸವರಾಜ ಮಾತನಾಡಿ, ನಾಟಕ, ಬಯಲಾಟಗಳು ಜನರಿಗೆ ಮನರಂಜನೆ ಒದಗಿಸುವ ಜತೆಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಗ್ರಾಮೀಣ ಭಾಗದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ರಂಗಭೂಮಿಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.</p>.<p>ಹಿರಿಯ ಕಲಾವಿದ ಮಲ್ಲಯ್ಯ ಗವಾಯಿ ಮಾತನಾಡಿದರು. ಕಲಾವಿದರಾದ ದೂಪದ ಕೊಟ್ರಪ್ಪ, ಗಚ್ಚಿನಮನಿ ಕೊಟ್ರಪ್ಪ, ಕೋಗಳಿ ಕುಬೇರಪ್ಪ, ಡಿ. ಹೊನ್ನೇಶ, ಎಚ್.ಕಲ್ಲೇಶ, ಸಿ.ನಾಗಭೂಷಣ ಇದ್ದರು.</p>.<p>ದೊಡ್ಡಾಟ ಕಲಾವಿದರಾದ ಬಿ. ಕಸ್ತೂರಪ್ಪ, ವೈ. ಕರಿಬಸಪ್ಪ ಬಯಲಾಟ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಕೋಗಳಿಯ ಕಲಾವಿದರು ಸಂಗ್ಯಾಬಾಳ್ಯ ಬಯಲಾಟ ಪ್ರಸ್ತುತಿಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1434698026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>