<p>ಮಂಗಳೂರು: ಇಂದಿನ ಸಮಾಜದಲ್ಲಿ ಕಲಾವಿದರಿಗೆ ಹಾಗೂ ಕಲೆಗೆ ಮಾನ್ಯತೆ ಸಿಗುತ್ತಿದೆ. ಕಲಾವಿದರ ಕೆಲಸಕ್ಕೂ ಮಾನ್ಯತೆ ಸಿಗುತ್ತಿದ್ದು, ಅವರ ಗೌರವವೂ ಹೆಚ್ಚಾಗಿದೆ ಎಂದು ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ಅಭಿಪ್ರಾಯಪಟ್ಟರು.</p>.<p>‘ಕಲಾಭಿ’ ಸಂಸ್ಥೆ ಮಕ್ಕಳಿಗಾಗಿ ಹಮ್ಮಿ ಕೊಂಡಿದ್ದ ನಾಲ್ಕನೇ ವರ್ಷದ 'ಅರಳು 2026’ ವೃತ್ತಿಪರ ರಂಗಭೂಮಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಆರತಿ ಶೆಟ್ಟಿ, ‘ಮಕ್ಕಳು ಇಂತಹ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು. ಪೋಷಕರು ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.</p>.<p>ಉದ್ಯಮಿ ಅಶ್ವಿನಿ ಕಾಮತ್, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹಾಗೂ ಶಿಬಿರದ ನಿರ್ದೇಶಕ ಚರಿತ್ ಸುವರ್ಣ ಅತಿಥಿಗಳಾಗಿದ್ದರು.</p>.<p>ಕಲಾಭಿಯ ಕಾರ್ಯದರ್ಶಿ ಉಜ್ವಲ್ ಯು.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಭಿ ಅಧ್ಯಕ್ಷ ಸುರೇಶ್ ವರ್ಕಾಡಿ ಧನ್ಯವಾದ ಸಮರ್ಪಿಸಿದರು. ಕಲಾಭಿ ಥಿಯೇಟರ್ ಮತ್ತು ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ನ ಕಲಾವಿದರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-29-1867522346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಇಂದಿನ ಸಮಾಜದಲ್ಲಿ ಕಲಾವಿದರಿಗೆ ಹಾಗೂ ಕಲೆಗೆ ಮಾನ್ಯತೆ ಸಿಗುತ್ತಿದೆ. ಕಲಾವಿದರ ಕೆಲಸಕ್ಕೂ ಮಾನ್ಯತೆ ಸಿಗುತ್ತಿದ್ದು, ಅವರ ಗೌರವವೂ ಹೆಚ್ಚಾಗಿದೆ ಎಂದು ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ಅಭಿಪ್ರಾಯಪಟ್ಟರು.</p>.<p>‘ಕಲಾಭಿ’ ಸಂಸ್ಥೆ ಮಕ್ಕಳಿಗಾಗಿ ಹಮ್ಮಿ ಕೊಂಡಿದ್ದ ನಾಲ್ಕನೇ ವರ್ಷದ 'ಅರಳು 2026’ ವೃತ್ತಿಪರ ರಂಗಭೂಮಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಆರತಿ ಶೆಟ್ಟಿ, ‘ಮಕ್ಕಳು ಇಂತಹ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು. ಪೋಷಕರು ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.</p>.<p>ಉದ್ಯಮಿ ಅಶ್ವಿನಿ ಕಾಮತ್, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹಾಗೂ ಶಿಬಿರದ ನಿರ್ದೇಶಕ ಚರಿತ್ ಸುವರ್ಣ ಅತಿಥಿಗಳಾಗಿದ್ದರು.</p>.<p>ಕಲಾಭಿಯ ಕಾರ್ಯದರ್ಶಿ ಉಜ್ವಲ್ ಯು.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಭಿ ಅಧ್ಯಕ್ಷ ಸುರೇಶ್ ವರ್ಕಾಡಿ ಧನ್ಯವಾದ ಸಮರ್ಪಿಸಿದರು. ಕಲಾಭಿ ಥಿಯೇಟರ್ ಮತ್ತು ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ನ ಕಲಾವಿದರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-29-1867522346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>