<p>ಮೈಸೂರು: ‘ಪೌರಾಣಿಕ ನಾಟಕ ಕಂಪನಿಗಳು ಒಂದು ಅಕಾಡೆಮಿಗೆ ಸಮನಾಗಿ ಕೆಲಸ ಮಾಡಿವೆ. ರಂಗಭೂಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೂ ಅಪಾರ’ ಎಂದು ರಂಗಕರ್ಮಿ ಕಲ್ಪನಾ ನಾಗನಾಥ್ ಹೇಳಿದರು.</p>.<p>ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದಿಂದ ಬೆಳಗಲ್ಲು ವೀರಣ್ಣ ಅವರ 98ನೇ ಹಾಗೂ ಬಿ.ಪುಟ್ಟಸ್ವಾಮಯ್ಯ 130ನೇ ಸವಿನೆನಪಿನಲ್ಲಿ ಇಲ್ಲಿನ ಕಿರುರಂಗಮಂದಿರದಲ್ಲಿ ಆಯೋಜಿಸಿರುವ 3 ದಿನಗಳ ಪೌರಾಣಿಕ ‘ರಂಗ ಸಂಭ್ರಮ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.</p>.<p>‘ಹವ್ಯಾಸಿ ಮತ್ತು ಕಂಪನಿ ನಾಟಕ ತಂಡಗಳ ಅಭಿವ್ಯಕ್ತಿ ಭಿನ್ನವಾಗಿದ್ದರೂ ಅವು ರಂಗಭೂಮಿ ಕ್ಷೇತ್ರಕ್ಕೆ ಸಮಾನ ಕೊಡುಗೆ ನೀಡಿವೆ. ಕಲಾರಾಧನೆಯಲ್ಲಿ ಯಾವುದೇ ಭಿನ್ನತೆಯಿಲ್ಲ’ ಎಂದರು.</p>.<p>ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಅವರ ಹಾರ್ಮೋನಿಯಂ ನೇತೃತ್ವದಲ್ಲಿ ಸುಪ್ರೀತ್ ಎಸ್. ಭಾರದ್ವಾಜ್ ತಂಡವು ಪ್ರಸ್ತುತಪಡಿಸಿದ ರಂಗಗೀತೆಗಳು ನೆರೆದವರ ಮನ ಸೆಳೆದವು. ರಾಮಾಯಣ, ಮಹಾಭಾರತದ ಕೆಲ ಪದ್ಯಗಳು, ಸುಭದ್ರೆಯ ಮಮತೆಯ ಕಥನ, ಮೋಹನ ಸಂಗೀತ ಎಂಬ ಹಾಡುಗಳು ಮೆಚ್ಚುಗೆ ಗಳಿಸಿದವು.</p>.<p>ಗಾಯಕರಾದ ಸುಪ್ರೀತ್, ನಿಸರ್ಗ, ವಿಸ್ಮಯ, ನೀತು ಅವರು ತಮ್ಮ ಗಾಯನ ವೇಳೆಯಲ್ಲಿ ವೇದಿಕೆಯನ್ನು ಆವರಿಸಿ ಸೈ ಎನಿಸಿಕೊಂಡರು. ಕ್ಲಾರಿಯೋನೆಟ್ನಲ್ಲಿ ಪ್ರಕಾಶ್, ತಬಲಾ ವಾದನದಲ್ಲಿ ಕೃಷ್ಣ ಚೈತನ್ಯ ಸಹಕಾರ ನೀಡಿದರು.</p>.<p>ನಾಟಕ ಪ್ರದರ್ಶನ: ಕಾರಸವಾಡಿ ಸುರೇಶ್ ನಿರ್ದೇಶನದಲ್ಲಿ ಬಿ.ಪುಟ್ಟಸ್ವಾಮಯ್ಯ ರಚನೆಯ ‘ಗದಾಯುದ್ಧ’ ನಾಟಕವನ್ನು ಮಂಡ್ಯದ ಮಾಂಡವ್ಯ ರಂಗಕಲಾ ಟ್ರಸ್ಟ್ ಸದಸ್ಯರು ಪ್ರಸ್ತುತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್, ವಿದ್ವಾನ್ ಕಿರಗಸೂರು ರಾಜಪ್ಪ, ಲಕ್ಷ್ಮಿ, ರಂಗತಂಡದ ಬಿ.ಎಂ.ರಾಮಚಂದ್ರ, ಶ್ರೀನಿವಾಸ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-37-1649536846</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಪೌರಾಣಿಕ ನಾಟಕ ಕಂಪನಿಗಳು ಒಂದು ಅಕಾಡೆಮಿಗೆ ಸಮನಾಗಿ ಕೆಲಸ ಮಾಡಿವೆ. ರಂಗಭೂಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೂ ಅಪಾರ’ ಎಂದು ರಂಗಕರ್ಮಿ ಕಲ್ಪನಾ ನಾಗನಾಥ್ ಹೇಳಿದರು.</p>.<p>ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದಿಂದ ಬೆಳಗಲ್ಲು ವೀರಣ್ಣ ಅವರ 98ನೇ ಹಾಗೂ ಬಿ.ಪುಟ್ಟಸ್ವಾಮಯ್ಯ 130ನೇ ಸವಿನೆನಪಿನಲ್ಲಿ ಇಲ್ಲಿನ ಕಿರುರಂಗಮಂದಿರದಲ್ಲಿ ಆಯೋಜಿಸಿರುವ 3 ದಿನಗಳ ಪೌರಾಣಿಕ ‘ರಂಗ ಸಂಭ್ರಮ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.</p>.<p>‘ಹವ್ಯಾಸಿ ಮತ್ತು ಕಂಪನಿ ನಾಟಕ ತಂಡಗಳ ಅಭಿವ್ಯಕ್ತಿ ಭಿನ್ನವಾಗಿದ್ದರೂ ಅವು ರಂಗಭೂಮಿ ಕ್ಷೇತ್ರಕ್ಕೆ ಸಮಾನ ಕೊಡುಗೆ ನೀಡಿವೆ. ಕಲಾರಾಧನೆಯಲ್ಲಿ ಯಾವುದೇ ಭಿನ್ನತೆಯಿಲ್ಲ’ ಎಂದರು.</p>.<p>ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಅವರ ಹಾರ್ಮೋನಿಯಂ ನೇತೃತ್ವದಲ್ಲಿ ಸುಪ್ರೀತ್ ಎಸ್. ಭಾರದ್ವಾಜ್ ತಂಡವು ಪ್ರಸ್ತುತಪಡಿಸಿದ ರಂಗಗೀತೆಗಳು ನೆರೆದವರ ಮನ ಸೆಳೆದವು. ರಾಮಾಯಣ, ಮಹಾಭಾರತದ ಕೆಲ ಪದ್ಯಗಳು, ಸುಭದ್ರೆಯ ಮಮತೆಯ ಕಥನ, ಮೋಹನ ಸಂಗೀತ ಎಂಬ ಹಾಡುಗಳು ಮೆಚ್ಚುಗೆ ಗಳಿಸಿದವು.</p>.<p>ಗಾಯಕರಾದ ಸುಪ್ರೀತ್, ನಿಸರ್ಗ, ವಿಸ್ಮಯ, ನೀತು ಅವರು ತಮ್ಮ ಗಾಯನ ವೇಳೆಯಲ್ಲಿ ವೇದಿಕೆಯನ್ನು ಆವರಿಸಿ ಸೈ ಎನಿಸಿಕೊಂಡರು. ಕ್ಲಾರಿಯೋನೆಟ್ನಲ್ಲಿ ಪ್ರಕಾಶ್, ತಬಲಾ ವಾದನದಲ್ಲಿ ಕೃಷ್ಣ ಚೈತನ್ಯ ಸಹಕಾರ ನೀಡಿದರು.</p>.<p>ನಾಟಕ ಪ್ರದರ್ಶನ: ಕಾರಸವಾಡಿ ಸುರೇಶ್ ನಿರ್ದೇಶನದಲ್ಲಿ ಬಿ.ಪುಟ್ಟಸ್ವಾಮಯ್ಯ ರಚನೆಯ ‘ಗದಾಯುದ್ಧ’ ನಾಟಕವನ್ನು ಮಂಡ್ಯದ ಮಾಂಡವ್ಯ ರಂಗಕಲಾ ಟ್ರಸ್ಟ್ ಸದಸ್ಯರು ಪ್ರಸ್ತುತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್, ವಿದ್ವಾನ್ ಕಿರಗಸೂರು ರಾಜಪ್ಪ, ಲಕ್ಷ್ಮಿ, ರಂಗತಂಡದ ಬಿ.ಎಂ.ರಾಮಚಂದ್ರ, ಶ್ರೀನಿವಾಸ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-37-1649536846</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>