<p>ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮಾಡದ ತಪ್ಪಿಗೆ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ.</p><p>ಕುಟುಂಬದ ಹಿರಿಯ ಧರ್ಮರಾಜ್ಗೆ ಅನಾಮಿಕ ವ್ಯಕ್ತಿಯು ಬೆದರಿಕೆ ಹಾಕುತ್ತಿದ್ದನು. ಅದರಪರಿಣಾಮ ಈಗ, ಧರ್ಮರಾಜ್ಗೆ ಹೃದಯಘಾತವಾಗಿದೆ. ಇದರಿಂದ ಬೇಸರಗೊಂಡ ಕುಟುಂಬಸ್ಥರು ‘ಮನೆಯ ನೆಮ್ಮದಿ ಹಾಳಾಗಲು ಲಕ್ಷ್ಮಿಯೇ ನೆರ ಹೊಣೆ‘ ಎಂದು ಆಕೆಯನ್ನು ದೂಷಿಸಿದ್ದರು. </p><p>ಆಸ್ಪತ್ರೆಯಲ್ಲಿರುವ ಧರ್ಮರಾಜ್ನನ್ನು ಲಕ್ಮ್ಮೀ ನೋಡಲು ಹೋದಾಗ ಆದಿ ತಾಯಿ ಅವಳನ್ನು ಮನೆ ಬಿಟ್ಟುಹೋಗುವಂತೆ ಗದರಿದ್ದಾಳೆ. ಇದಕ್ಕೆ ಬೇಸರಗೊಂಡ ಲಕ್ಷ್ಮೀ ಮನೆ ಬಿಟ್ಟು ಸ್ನೇಹಿತರ ಜೊತೆಯಲ್ಲಿ ಉಳಿದುಕೊಂಡಿದ್ದಾಳೆ. </p><p>ಇತ್ತ, ಆದಿ ಸಹೋದರಿ ಅಮೃತಾ ಹಾಗೂ ಸಂಜೀವ್ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ.</p><p>ಸದ್ಯ, ಧರ್ಮರಾಜ್ಗೆ ಪ್ರಜ್ಞೆ ಬಂದಿದೆ. ದುಖಃದಲ್ಲೇ ಮುಳುಗಿದ್ದ ಆದಿ ಅಜ್ಜಿಗೆ ಈಗ ಲಕ್ಮ್ಮೀ ವಿಚಾರ ತಿಳಿದು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಮರ್ಯಾದೆಗಾಗಿ ಲಕ್ಷ್ಮೀಯು ಪತಿಯ ಮನೆಗೆ ವಾಪಾಸ್ಸು ಬರುತ್ತಾಳಾ ಅಥವಾ ತವರು ಮನೆಯಲ್ಲೇ ಇರಲು ನಿರ್ಧರಿಸುತ್ತಾಳಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮಾಡದ ತಪ್ಪಿಗೆ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ.</p><p>ಕುಟುಂಬದ ಹಿರಿಯ ಧರ್ಮರಾಜ್ಗೆ ಅನಾಮಿಕ ವ್ಯಕ್ತಿಯು ಬೆದರಿಕೆ ಹಾಕುತ್ತಿದ್ದನು. ಅದರಪರಿಣಾಮ ಈಗ, ಧರ್ಮರಾಜ್ಗೆ ಹೃದಯಘಾತವಾಗಿದೆ. ಇದರಿಂದ ಬೇಸರಗೊಂಡ ಕುಟುಂಬಸ್ಥರು ‘ಮನೆಯ ನೆಮ್ಮದಿ ಹಾಳಾಗಲು ಲಕ್ಷ್ಮಿಯೇ ನೆರ ಹೊಣೆ‘ ಎಂದು ಆಕೆಯನ್ನು ದೂಷಿಸಿದ್ದರು. </p><p>ಆಸ್ಪತ್ರೆಯಲ್ಲಿರುವ ಧರ್ಮರಾಜ್ನನ್ನು ಲಕ್ಮ್ಮೀ ನೋಡಲು ಹೋದಾಗ ಆದಿ ತಾಯಿ ಅವಳನ್ನು ಮನೆ ಬಿಟ್ಟುಹೋಗುವಂತೆ ಗದರಿದ್ದಾಳೆ. ಇದಕ್ಕೆ ಬೇಸರಗೊಂಡ ಲಕ್ಷ್ಮೀ ಮನೆ ಬಿಟ್ಟು ಸ್ನೇಹಿತರ ಜೊತೆಯಲ್ಲಿ ಉಳಿದುಕೊಂಡಿದ್ದಾಳೆ. </p><p>ಇತ್ತ, ಆದಿ ಸಹೋದರಿ ಅಮೃತಾ ಹಾಗೂ ಸಂಜೀವ್ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ.</p><p>ಸದ್ಯ, ಧರ್ಮರಾಜ್ಗೆ ಪ್ರಜ್ಞೆ ಬಂದಿದೆ. ದುಖಃದಲ್ಲೇ ಮುಳುಗಿದ್ದ ಆದಿ ಅಜ್ಜಿಗೆ ಈಗ ಲಕ್ಮ್ಮೀ ವಿಚಾರ ತಿಳಿದು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಮರ್ಯಾದೆಗಾಗಿ ಲಕ್ಷ್ಮೀಯು ಪತಿಯ ಮನೆಗೆ ವಾಪಾಸ್ಸು ಬರುತ್ತಾಳಾ ಅಥವಾ ತವರು ಮನೆಯಲ್ಲೇ ಇರಲು ನಿರ್ಧರಿಸುತ್ತಾಳಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>