<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಮೃತಧಾರೆ' ಧಾರಾವಾಹಿ ರೋಚಕ ತಿರುವು ಪಡೆದು ಮುನ್ನುಗುತ್ತಿದೆ. ಸದ್ಯ ಜೈದೇವ್, ತಾಯಿ ಶಕುಂತಲಾಳನ್ನೂ ಕೂಡ ಮನೆಯಿಂದ ಹೊರಹಾಕಿದ್ದಾನೆ. </p><p>ಪ್ರತಿಯೊಂದು ಸುಖವೂ ತನಗೆ ಸೇರಬೇಕು ಎಂದು ಬಯಸುವ ಜೈದೇವ್ (ಗೌತಮ್ ದಿವಾನ್ ಸಹೋದರ)ನ ಅಟ್ಟಹಾಸ ಮಿತಿಮೀರಿದೆ. ಯಾವ ಸಹವಾಸ ಬೇಡ ಎಂದು ಗೌತಮ್ ತನ್ನ ಪಾಡಿಗೆ ತಾನು ಇದ್ದರೂ ಕೂಡ ಜೈದೇವ್ ಕಾಟ ತಪ್ಪುತ್ತಿಲ್ಲ. </p><p>ಕುಟುಂಬದ ಎಲ್ಲ ಆಸ್ತಿಯನ್ನು ಕಿತ್ತುಕೊಂಡಿದ್ದ ಜೈದೇವ್, ಈಗ ದಿವಾನ್ ಹೆಸರು ಕೂಡ ತನಗೆ ಸೇರಬೇಕು ಎಂದು ಪಟ್ಟು ಹಿಡಿದ್ದಾನೆ. ಇದಕ್ಕೆ ಉತ್ತರಿಸಿದ ಗೌತಮ್, 'ತನ್ನ ಅನುಮತಿ ಇಲ್ಲದೆ ದಿವಾನ್ ಹೆಸರು ಬಳಸಲು ಯಾರಿಗೂ ಅನುಮತಿ ನೀಡಿಲ್ಲ‘ ಎಂದು ಎಚ್ಚರಿಕೆ ನೀಡಿದ್ದರು. </p>.ಜುಮ್ಕಾ ಗಿರಾ ರೆ...ಆಶಾ ನಿಧನದ ಬೆನ್ನಲೇ ಟ್ರೆಂಡ್ ಸೃಷ್ಟಿಸಿದ ಬರೇಲಿಯ ಜುಮ್ಕಾಗಳು.‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಿಸಿದ ರಾಕಿಂಗ್ ಸ್ಟಾರ್ ಯಶ್.<p>ಅದೇ ಕೋಪದಲ್ಲಿ ಜೈದೇವ್, ತನ್ನ ಸಹೋದರ ಪಾರ್ಥನಿಗೆ ಕಿಂಚಿತ್ತೂ ಆಸ್ತಿ ಹಾಗೂ ಹಣ ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಇಷ್ಟೆಲ್ಲಾ ಆದರೂ ತಾಯಿ ಶಕುಂತಲಾ ಮಾತ್ರ ಜೈದೇವ್ ಪರವಾಗಿಯೇ ಇರುತ್ತಿದ್ದಳು.</p><p>ಆದರೆ, ಶಕುಂತಲಾ ಇಂದು ತನ್ನ ಖರ್ಚಿಗಾಗಿ ಜೈದೇವ್ ಬಳಿ ಹಣ ಕೇಳಿದ್ದಾಳೆ. ಹಣ ಕೊಡಲು ಒಪ್ಪದೆ ಇದ್ದಾಗ ‘ಇದೇ..ಗೌತಮ್ಗೂ ನಿನಗೂ ಇರುವ ವ್ಯತ್ಯಾಸ‘ ಎಂದಿದ್ದಾಳೆ. ಇದಕ್ಕೆ ಕೋಪಗೊಂಡ ಜೇಡಿ, ತಾಯಿಯನ್ನೇ ಮನೆಯಿಂದ ಹೊರಹಾಕಿದ್ದಾನೆ. <br>ಸ್ವಂತ ಮಗನಿಂದ ಅವಮಾನಕ್ಕೆ ಒಳಗಾದ ಶಕುಂತಲಾ, ಮರಳಿ ಗೌತಮ್ ಬಳಿ ಆಶ್ರಯ ಪಡೆಯುತ್ತಾಳಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಮೃತಧಾರೆ' ಧಾರಾವಾಹಿ ರೋಚಕ ತಿರುವು ಪಡೆದು ಮುನ್ನುಗುತ್ತಿದೆ. ಸದ್ಯ ಜೈದೇವ್, ತಾಯಿ ಶಕುಂತಲಾಳನ್ನೂ ಕೂಡ ಮನೆಯಿಂದ ಹೊರಹಾಕಿದ್ದಾನೆ. </p><p>ಪ್ರತಿಯೊಂದು ಸುಖವೂ ತನಗೆ ಸೇರಬೇಕು ಎಂದು ಬಯಸುವ ಜೈದೇವ್ (ಗೌತಮ್ ದಿವಾನ್ ಸಹೋದರ)ನ ಅಟ್ಟಹಾಸ ಮಿತಿಮೀರಿದೆ. ಯಾವ ಸಹವಾಸ ಬೇಡ ಎಂದು ಗೌತಮ್ ತನ್ನ ಪಾಡಿಗೆ ತಾನು ಇದ್ದರೂ ಕೂಡ ಜೈದೇವ್ ಕಾಟ ತಪ್ಪುತ್ತಿಲ್ಲ. </p><p>ಕುಟುಂಬದ ಎಲ್ಲ ಆಸ್ತಿಯನ್ನು ಕಿತ್ತುಕೊಂಡಿದ್ದ ಜೈದೇವ್, ಈಗ ದಿವಾನ್ ಹೆಸರು ಕೂಡ ತನಗೆ ಸೇರಬೇಕು ಎಂದು ಪಟ್ಟು ಹಿಡಿದ್ದಾನೆ. ಇದಕ್ಕೆ ಉತ್ತರಿಸಿದ ಗೌತಮ್, 'ತನ್ನ ಅನುಮತಿ ಇಲ್ಲದೆ ದಿವಾನ್ ಹೆಸರು ಬಳಸಲು ಯಾರಿಗೂ ಅನುಮತಿ ನೀಡಿಲ್ಲ‘ ಎಂದು ಎಚ್ಚರಿಕೆ ನೀಡಿದ್ದರು. </p>.ಜುಮ್ಕಾ ಗಿರಾ ರೆ...ಆಶಾ ನಿಧನದ ಬೆನ್ನಲೇ ಟ್ರೆಂಡ್ ಸೃಷ್ಟಿಸಿದ ಬರೇಲಿಯ ಜುಮ್ಕಾಗಳು.‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಿಸಿದ ರಾಕಿಂಗ್ ಸ್ಟಾರ್ ಯಶ್.<p>ಅದೇ ಕೋಪದಲ್ಲಿ ಜೈದೇವ್, ತನ್ನ ಸಹೋದರ ಪಾರ್ಥನಿಗೆ ಕಿಂಚಿತ್ತೂ ಆಸ್ತಿ ಹಾಗೂ ಹಣ ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಇಷ್ಟೆಲ್ಲಾ ಆದರೂ ತಾಯಿ ಶಕುಂತಲಾ ಮಾತ್ರ ಜೈದೇವ್ ಪರವಾಗಿಯೇ ಇರುತ್ತಿದ್ದಳು.</p><p>ಆದರೆ, ಶಕುಂತಲಾ ಇಂದು ತನ್ನ ಖರ್ಚಿಗಾಗಿ ಜೈದೇವ್ ಬಳಿ ಹಣ ಕೇಳಿದ್ದಾಳೆ. ಹಣ ಕೊಡಲು ಒಪ್ಪದೆ ಇದ್ದಾಗ ‘ಇದೇ..ಗೌತಮ್ಗೂ ನಿನಗೂ ಇರುವ ವ್ಯತ್ಯಾಸ‘ ಎಂದಿದ್ದಾಳೆ. ಇದಕ್ಕೆ ಕೋಪಗೊಂಡ ಜೇಡಿ, ತಾಯಿಯನ್ನೇ ಮನೆಯಿಂದ ಹೊರಹಾಕಿದ್ದಾನೆ. <br>ಸ್ವಂತ ಮಗನಿಂದ ಅವಮಾನಕ್ಕೆ ಒಳಗಾದ ಶಕುಂತಲಾ, ಮರಳಿ ಗೌತಮ್ ಬಳಿ ಆಶ್ರಯ ಪಡೆಯುತ್ತಾಳಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>