<p>ತನ್ನದೇ ಮನೆಯಲ್ಲಿದ್ದ ಮಿಂಚು ಸ್ವಂತ ಮಗಳು ಎಂದು ಭೂಮಿಕಾ– ಗೌತಮ್ಗೆ ತಿಳಿಯುವಷ್ಟರಲ್ಲಿ ಆ ಸತ್ಯ ಜೈದೇವ್ಗೆ ಗೊತ್ತಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಮೃತಧಾರೆ‘ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p> ಭೂಮಿಕಾ ಹಾಗೂ ಗೌತಮ್ ಕಳೆದುಕೊಂಡಿರುವ ಮಗಳನ್ನು ಹಲವು ವರ್ಷಗಳಿಂದ ಹುಡುಕುತ್ತಿದ್ದರು. ಇಷ್ಟು ಮಾತ್ರವಲ್ಲದೆ ಗೌತಮ್ ವ್ಯವಹಾರಕ್ಕೆಗೆ ಸಹಕರಿಸುವ ಅಖಿಲಾಂಡೇಶ್ವರಿ ಕೂಡ ಇವರ ಹುಡುಕಾಟಕ್ಕೆ ಸಾಥ್ ನೀಡಿದ್ದರು. </p><p>ಎನ್ಜಿಒಗಳಿಗೆ ಸಿಕ್ಕಿದ್ದ ಗೌತಮ್ ಮಗಳ ಸುಳಿವನ್ನು ಅಖಿಲಾಂಡೇಶ್ವರಿ ಅವರು ಲಕ್ಷ್ಮೀಕಾಂತ್ ಬಳಿ ಹೇಳಿದ್ದರು. ವಿಷಯ ತಿಳಿದ ಲಕ್ಷ್ಮೀಕಾಂತ್ ಸತ್ಯ ಹುಡುಕಿ ಅನಾಥಾಶ್ರಮಕ್ಕೆ ಹೊರಟರು. ಬಳಿಕ ಆ ಕಳೆದ ಹೋದ ಮಗುವಿನ ಬಗ್ಗೆ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳು ಮಿಂಚು ಬಗ್ಗೆ ಮಾಹಿತಿ ನೀಡಿದ್ದಾರೆ. </p><p>ಮಿಂಚುನೇ ಗೌತಮ್ ಮಗಳು ಎಂದು ಲಕ್ಷ್ಮೀಕಾಂತ್ ಅಧಿಕಾರಿಗಳ ಬಳಿ ಮಾತನಾಡಿದ್ದನ್ನು ಗೌತಮ್ ಕಚೇರಿಯ ಸಿಬ್ಬಂದಿ ಕೇಳಿಸಿಕೊಂಡು ಜೈದೇವ್ಗೆ ಮಾಹಿತಿ ನೀಡಿದ್ದನು. ಗೌತಮ್– ಭೂಮಿಕಾಳಿಗೆ ಮಿಂಚು ಸತ್ಯ ತಿಳಿಯಬಾರದೆಂದು ಜೈದೇವ್, ಲಕ್ಷ್ಮೀಕಾಂತ್ ಬೆನ್ನ ಹಿಂದೆ ಬಿದ್ದಿದ್ದಾನೆ. ಮಿಂಚು ಬಗ್ಗೆ ಅಧಿಕಾರಿಗಳು ಕೊಟ್ಟ ಮಾಹಿತಿ ಜೈದೇವ್ಗೆ ಗೊತ್ತಾಗಬಾರದೆಂದು ಲಕ್ಷ್ಮೀಕಾಂತ್ ಎಲ್ಲಾ ಸಾಕ್ಷಿಯನ್ನು ಹರಿದುಹಾಕಿದ್ದಾರೆ. ಸಾಕ್ಷಿನಾಶಕ್ಕೆ ಕೋಪಗೊಂಡ ಜೈದೇವ್ ಸೋದರ ಮಾವ ಲಕ್ಷ್ಮೀಕಾಂತ್ನನ್ನು ಅಪಹರಿಸಿದ್ದಾನೆ. </p><p>ಅಖಿಲಾಂಡೇಶ್ವರಿ ಅವರು ಫೋನ್ ಮಾಡಿದ ವಿಷಯ ತಿಳಿಯಲು ಗೌತಮ್ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರು ಕರೆಯಲ್ಲಿ ಮಾತನಾಡಲು ಸಿಗುತ್ತಿಲ್ಲ. ಇತ್ತ ಲಕ್ಷ್ಮೀಕಾಂತ್ ಸುಳಿವು ಸಿಗುತ್ತಿಲ್ಲ. </p><p>ಇದರ ನಡುವೆಯೂ ಭೂಮಿಕಾಳಿಗೆ ಮಿಂಚು ಸ್ವಂತ ಮಗಳೆಂದು ಗೊತ್ತಾಗುತ್ತಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತನ್ನದೇ ಮನೆಯಲ್ಲಿದ್ದ ಮಿಂಚು ಸ್ವಂತ ಮಗಳು ಎಂದು ಭೂಮಿಕಾ– ಗೌತಮ್ಗೆ ತಿಳಿಯುವಷ್ಟರಲ್ಲಿ ಆ ಸತ್ಯ ಜೈದೇವ್ಗೆ ಗೊತ್ತಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಮೃತಧಾರೆ‘ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p> ಭೂಮಿಕಾ ಹಾಗೂ ಗೌತಮ್ ಕಳೆದುಕೊಂಡಿರುವ ಮಗಳನ್ನು ಹಲವು ವರ್ಷಗಳಿಂದ ಹುಡುಕುತ್ತಿದ್ದರು. ಇಷ್ಟು ಮಾತ್ರವಲ್ಲದೆ ಗೌತಮ್ ವ್ಯವಹಾರಕ್ಕೆಗೆ ಸಹಕರಿಸುವ ಅಖಿಲಾಂಡೇಶ್ವರಿ ಕೂಡ ಇವರ ಹುಡುಕಾಟಕ್ಕೆ ಸಾಥ್ ನೀಡಿದ್ದರು. </p><p>ಎನ್ಜಿಒಗಳಿಗೆ ಸಿಕ್ಕಿದ್ದ ಗೌತಮ್ ಮಗಳ ಸುಳಿವನ್ನು ಅಖಿಲಾಂಡೇಶ್ವರಿ ಅವರು ಲಕ್ಷ್ಮೀಕಾಂತ್ ಬಳಿ ಹೇಳಿದ್ದರು. ವಿಷಯ ತಿಳಿದ ಲಕ್ಷ್ಮೀಕಾಂತ್ ಸತ್ಯ ಹುಡುಕಿ ಅನಾಥಾಶ್ರಮಕ್ಕೆ ಹೊರಟರು. ಬಳಿಕ ಆ ಕಳೆದ ಹೋದ ಮಗುವಿನ ಬಗ್ಗೆ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳು ಮಿಂಚು ಬಗ್ಗೆ ಮಾಹಿತಿ ನೀಡಿದ್ದಾರೆ. </p><p>ಮಿಂಚುನೇ ಗೌತಮ್ ಮಗಳು ಎಂದು ಲಕ್ಷ್ಮೀಕಾಂತ್ ಅಧಿಕಾರಿಗಳ ಬಳಿ ಮಾತನಾಡಿದ್ದನ್ನು ಗೌತಮ್ ಕಚೇರಿಯ ಸಿಬ್ಬಂದಿ ಕೇಳಿಸಿಕೊಂಡು ಜೈದೇವ್ಗೆ ಮಾಹಿತಿ ನೀಡಿದ್ದನು. ಗೌತಮ್– ಭೂಮಿಕಾಳಿಗೆ ಮಿಂಚು ಸತ್ಯ ತಿಳಿಯಬಾರದೆಂದು ಜೈದೇವ್, ಲಕ್ಷ್ಮೀಕಾಂತ್ ಬೆನ್ನ ಹಿಂದೆ ಬಿದ್ದಿದ್ದಾನೆ. ಮಿಂಚು ಬಗ್ಗೆ ಅಧಿಕಾರಿಗಳು ಕೊಟ್ಟ ಮಾಹಿತಿ ಜೈದೇವ್ಗೆ ಗೊತ್ತಾಗಬಾರದೆಂದು ಲಕ್ಷ್ಮೀಕಾಂತ್ ಎಲ್ಲಾ ಸಾಕ್ಷಿಯನ್ನು ಹರಿದುಹಾಕಿದ್ದಾರೆ. ಸಾಕ್ಷಿನಾಶಕ್ಕೆ ಕೋಪಗೊಂಡ ಜೈದೇವ್ ಸೋದರ ಮಾವ ಲಕ್ಷ್ಮೀಕಾಂತ್ನನ್ನು ಅಪಹರಿಸಿದ್ದಾನೆ. </p><p>ಅಖಿಲಾಂಡೇಶ್ವರಿ ಅವರು ಫೋನ್ ಮಾಡಿದ ವಿಷಯ ತಿಳಿಯಲು ಗೌತಮ್ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರು ಕರೆಯಲ್ಲಿ ಮಾತನಾಡಲು ಸಿಗುತ್ತಿಲ್ಲ. ಇತ್ತ ಲಕ್ಷ್ಮೀಕಾಂತ್ ಸುಳಿವು ಸಿಗುತ್ತಿಲ್ಲ. </p><p>ಇದರ ನಡುವೆಯೂ ಭೂಮಿಕಾಳಿಗೆ ಮಿಂಚು ಸ್ವಂತ ಮಗಳೆಂದು ಗೊತ್ತಾಗುತ್ತಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>