<p>ಜೈದೇವ್ ಮೋಸದ ಬಲೆಯಲ್ಲಿ ಗೌತಮ್ ಪುತ್ರಿ ಮಿಂಚು ಸಿಲುಕಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಮೃತಧಾರೆ’ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p>ಗೌತಮ್– ಭೂಮಿಕಾ ನೆಮ್ಮದಿ ಕೆಡಿಸಲು ಜೈದೇವ್ ನಾನಾ ಕಸರತ್ತು ಮಾಡುತ್ತಿದ್ದ. ಇತ್ತ, ಗೌತಮ್ ಸಹೋದರಿ ಮಹಿಮಾ ತನಗೆ ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಅವಳ ಆರೋಗ್ಯವನ್ನು ಸರಿಪಡಿಸಲು ನಾವು ಕೈ ಜೋಡಿಸುತ್ತೇವೆ ಎಂದು ಗೌತಮ್ ಭರವಸೆ ನೀಡಿದ್ದಾರೆ. </p><p>ಅದರ ಸಲುವಾಗಿ ಗೌತಮ್ ಪುತ್ರಿ ಮಿಂಚುಳನ್ನು ಸಹೋದರಿ ಮಹಿಮಾಳಿಗೆ ದತ್ತು ನೀಡುವ ನಿರ್ಧಾರ ಮಾಡಿದ್ದಾರೆ. ಆದರೆ ಈ ನಿರ್ಧಾರಕ್ಕೆ ಮಿಂಚು ಒಪ್ಪಿಲ್ಲ.</p><p>ಒಂದಿಷ್ಟು ವರ್ಷಗಳ ಕಾಲ ಗೌತಮ್, ಭೂಮಿಕಾ ದೂರ ಆಗಿದ್ದರು. ಆ ವೇಳೆ ಯಾರೋ ಬಿಟ್ಟು ಹೋದ ಮಗು ಮಿಂಚುಳನ್ನು ಗೌತಮ್ ಅವರು ಸಾಕಿ ಬೆಳೆಸಿದ್ದರೆ, ಪುತ್ರ ಆಕಾಶ್ನನ್ನು ಭೂಮಿಕಾ ಸಾಕಿದ್ದಳು. ಕೆಲವು ವರ್ಷಗಳ ಬಳಿಕ ಭೂಮಿಕಾ ಹಾಗೂ ಗೌತಮ್ ಮತ್ತೆ ಒಂದಾಗಿ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿರುತ್ತಾರೆ. </p><p>ಆದರೆ, ಈ ಸುಂದರ ದಾಂಪತ್ಯವನ್ನು ಸಹಿಸದ ಸಹೋದರ ಜೈದೇವ್ ಅವರಿಗೆ ಪದೇ ಪದೇ ತೊಂದರೆ ಕೊಡುತ್ತಲೇ ಇದ್ದ. ಇದರ ನಡುವೆಯೂ ಮಿಂಚು, ಗೌತಮ್ ಸ್ವಂತ ಮಗಳೆಂಬ ಸತ್ಯ ಅವನಿಗೆ ಗೊತ್ತಾಗಿದೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ಅರಿವು ಇರದ ಗೌತಮ್ – ಭೂಮಿಕಾ ಬಾಲ್ಯದಲ್ಲಿ ಕಳೆದ ಹೋದ ಮಗಳನ್ನು ಹುಡುಕುತ್ತಲೇ ಇದ್ದಾರೆ. </p><p>ಮಹಿಮಾಳಿಗೆ ದತ್ತು ಕೊಡುತ್ತಾರೆ ಎಂಬ ಕಾರಣಕ್ಕೆ ಮಿಂಚು ಮನೆಯಿಂದ ತಪ್ಪಿಸಿಕೊಂಡು ಹೋಗುವ ಯೋಚನೆ ಮಾಡಿ, ಸ್ಕೂಲ್ಗೆ ಹೋಗುವ ಬದಲು ಗೊತ್ತಿರದ ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗಿದ್ದಾಳೆ. ಆ ವೇಳೆ ಅವಳಿಗೆ ಜೈದೇವ್ ಎದುರಾಗಿದ್ದಾನೆ. </p><p>ಮಿಂಚು ಬಳಿ ಗೌತಮ್, ಭೂಮಿಕಾ ಬಗ್ಗೆ ತಪ್ಪಾಗಿ ಹೇಳಿ ಅವಳ ಮನ ಮನವರ್ತನೆ ಆಗುವಂತೆ ಮಾಡಿದ್ದಾನೆ. ಅವನ ಮಾತಿನ ಹಿಂದಿರುವ ಕ್ರೂರ ಮುಖದ ಬಗ್ಗೆ ಅರಿವು ಇರದ ಮಿಂಚು ಅವನನ್ನು ನಂಬಿ ಅವನ ಜೊತೆ ಹೋಗಿದ್ದಾಳೆ. </p><p>ಜೈದೇವ್ ಬಲೆಯಲ್ಲಿರುವ ಮಿಂಚುಳನ್ನು ಗೌತಮ್, ಭೂಮಿಕಾ ಕಾಪಾಡಿಕೊಳ್ಳುತ್ತಾರಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೈದೇವ್ ಮೋಸದ ಬಲೆಯಲ್ಲಿ ಗೌತಮ್ ಪುತ್ರಿ ಮಿಂಚು ಸಿಲುಕಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಮೃತಧಾರೆ’ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p>ಗೌತಮ್– ಭೂಮಿಕಾ ನೆಮ್ಮದಿ ಕೆಡಿಸಲು ಜೈದೇವ್ ನಾನಾ ಕಸರತ್ತು ಮಾಡುತ್ತಿದ್ದ. ಇತ್ತ, ಗೌತಮ್ ಸಹೋದರಿ ಮಹಿಮಾ ತನಗೆ ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಅವಳ ಆರೋಗ್ಯವನ್ನು ಸರಿಪಡಿಸಲು ನಾವು ಕೈ ಜೋಡಿಸುತ್ತೇವೆ ಎಂದು ಗೌತಮ್ ಭರವಸೆ ನೀಡಿದ್ದಾರೆ. </p><p>ಅದರ ಸಲುವಾಗಿ ಗೌತಮ್ ಪುತ್ರಿ ಮಿಂಚುಳನ್ನು ಸಹೋದರಿ ಮಹಿಮಾಳಿಗೆ ದತ್ತು ನೀಡುವ ನಿರ್ಧಾರ ಮಾಡಿದ್ದಾರೆ. ಆದರೆ ಈ ನಿರ್ಧಾರಕ್ಕೆ ಮಿಂಚು ಒಪ್ಪಿಲ್ಲ.</p><p>ಒಂದಿಷ್ಟು ವರ್ಷಗಳ ಕಾಲ ಗೌತಮ್, ಭೂಮಿಕಾ ದೂರ ಆಗಿದ್ದರು. ಆ ವೇಳೆ ಯಾರೋ ಬಿಟ್ಟು ಹೋದ ಮಗು ಮಿಂಚುಳನ್ನು ಗೌತಮ್ ಅವರು ಸಾಕಿ ಬೆಳೆಸಿದ್ದರೆ, ಪುತ್ರ ಆಕಾಶ್ನನ್ನು ಭೂಮಿಕಾ ಸಾಕಿದ್ದಳು. ಕೆಲವು ವರ್ಷಗಳ ಬಳಿಕ ಭೂಮಿಕಾ ಹಾಗೂ ಗೌತಮ್ ಮತ್ತೆ ಒಂದಾಗಿ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿರುತ್ತಾರೆ. </p><p>ಆದರೆ, ಈ ಸುಂದರ ದಾಂಪತ್ಯವನ್ನು ಸಹಿಸದ ಸಹೋದರ ಜೈದೇವ್ ಅವರಿಗೆ ಪದೇ ಪದೇ ತೊಂದರೆ ಕೊಡುತ್ತಲೇ ಇದ್ದ. ಇದರ ನಡುವೆಯೂ ಮಿಂಚು, ಗೌತಮ್ ಸ್ವಂತ ಮಗಳೆಂಬ ಸತ್ಯ ಅವನಿಗೆ ಗೊತ್ತಾಗಿದೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ಅರಿವು ಇರದ ಗೌತಮ್ – ಭೂಮಿಕಾ ಬಾಲ್ಯದಲ್ಲಿ ಕಳೆದ ಹೋದ ಮಗಳನ್ನು ಹುಡುಕುತ್ತಲೇ ಇದ್ದಾರೆ. </p><p>ಮಹಿಮಾಳಿಗೆ ದತ್ತು ಕೊಡುತ್ತಾರೆ ಎಂಬ ಕಾರಣಕ್ಕೆ ಮಿಂಚು ಮನೆಯಿಂದ ತಪ್ಪಿಸಿಕೊಂಡು ಹೋಗುವ ಯೋಚನೆ ಮಾಡಿ, ಸ್ಕೂಲ್ಗೆ ಹೋಗುವ ಬದಲು ಗೊತ್ತಿರದ ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗಿದ್ದಾಳೆ. ಆ ವೇಳೆ ಅವಳಿಗೆ ಜೈದೇವ್ ಎದುರಾಗಿದ್ದಾನೆ. </p><p>ಮಿಂಚು ಬಳಿ ಗೌತಮ್, ಭೂಮಿಕಾ ಬಗ್ಗೆ ತಪ್ಪಾಗಿ ಹೇಳಿ ಅವಳ ಮನ ಮನವರ್ತನೆ ಆಗುವಂತೆ ಮಾಡಿದ್ದಾನೆ. ಅವನ ಮಾತಿನ ಹಿಂದಿರುವ ಕ್ರೂರ ಮುಖದ ಬಗ್ಗೆ ಅರಿವು ಇರದ ಮಿಂಚು ಅವನನ್ನು ನಂಬಿ ಅವನ ಜೊತೆ ಹೋಗಿದ್ದಾಳೆ. </p><p>ಜೈದೇವ್ ಬಲೆಯಲ್ಲಿರುವ ಮಿಂಚುಳನ್ನು ಗೌತಮ್, ಭೂಮಿಕಾ ಕಾಪಾಡಿಕೊಳ್ಳುತ್ತಾರಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>