‘ಜೊತೆ ಜೊತೆಯಲಿ' ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ಸಂಘರ್ಷ ಉಂಟಾಗಿದ್ದು ಸದ್ಯ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಧಾರಾವಾಹಿ ತಂಡ ನಟ ಅನಿರುದ್ಧ್ ವಿರುದ್ಧ ಗರಂ ಆಗಿದ್ದು ಅವರನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಧಾರಾವಾಹಿಯ ಮೂಲಗಳ ಪ್ರಕಾರ ಅನಿರುದ್ಧ್ ಬದಲು ನಿರ್ದೇಶಕಅನೂಪ್ ಭಂಡಾರಿ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಬಗ್ಗೆ ಅನೂಪ್ ಭಂಡಾರಿ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಧಾರಾವಾಹಿ ನಿರ್ದೇಶಕ ಹಾಗೂ ನಿರ್ಮಾಪಕರು ಸುದ್ದಿಗೋಷ್ಟಿ ಮಾಡಿ ಅನಿರುದ್ಧ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅನಿರುದ್ಧ್ ಕೂಡ ಸ್ಪಷ್ಟನೆ ನೀಡಿದ್ದರು. ಅಂತಿಮವಾಗಿ 'ಜೊತೆ ಜೊತೆಯಲಿ' ಧಾರವಾಹಿ ವೀಕ್ಷಕರು ಮುಂದೆ ಆರ್ಯವರ್ದನ್ ಆಗಿ ಯಾರು ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ.