ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್ಷಿಪ್’ ಆರಂಭವಾಗಲಿದೆ.
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್, ನಟಿ ರಕ್ಷಿತಾ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಮಾಸ್ಟರ್ ಆನಂದ್ ತಮ್ಮ ಹಾಸ್ಯ ಚಟಾಕಿಯ ಮೂಲಕ ನಿರೂಪಣೆ ಮಾಡಲಿದ್ದಾರೆ.
ಒಟ್ಟು ಆರು ತಂಡಗಳು ಕಾಮಿಡಿಯ ರಸದೌತಣ ಬಡಿಸಲಿವೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಹಾಸ್ಯ ಹಾಗೂ ಮನರಂಜನೆಯಿಂದಾಗಿ ‘ಕಾಮಿಡಿ ಕಿಲಾಡಿಗಳು’ ಮೊದಲ ಎರಡು ಆವೃತ್ತಿಯಲ್ಲಿ ಸಾಕಷ್ಟು ಜನಮನ್ನಣೆ ಪಡೆದುಕೊಂಡಿತ್ತು. ಇದರಲ್ಲಿ ಭಾಗವಹಿಸಿದ್ದ ಕಲಾವಿದರು ಕೂಡ ಜನಪ್ರಿಯತೆ ಭಾಗವಾಗಿದ್ದರು. ಇದು ಯಶಸ್ವಿ ಕಾರ್ಯಕ್ರಮದ ಮುಂದುವರಿದ ಭಾಗ ಎನಿಸಿದೆ.