<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ’ ಧಾರಾವಾಹಿಯು ಕಥೆಯ ಮೂಲಕವೇ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಇದೀಗ, ಅರ್ಜುನ್ ಜೊತೆ ನಿಧಿ ಮದುವೆ ಮಾಡಲು ಆಕೆಯ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.</p><p>ಕರ್ಣನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅವನ ತಂದೆ ರಮೇಶ್ ಪಣ ತೊಟ್ಟಿದ್ದಾರೆ. ಅದರಂತೆ ರಮೇಶ್ ಈಗ, ಕರ್ಣನ ಪ್ರೇಯಸಿ ನಿಧಿಯನ್ನು ದೂರ ಮಾಡಲು ಯೋಚಿಸುತ್ತಿದ್ದಾನೆ. </p><p>ಸ್ನೇಹಿತನ ಮಗ ಅರ್ಜುನ್ನನ್ನು ಮನೆಗೆ ಕರೆಸಿ, ಹೆಣ್ಣು ನೋಡುವ ಶಾಸ್ತ್ರ ಮಾಡಿಸಿದ್ದಾನೆ. ಈ ಹುಡುಗ ಅವಳ ಮನೆಯವರಿಗೂ ಇಷ್ಟವಾಗಿದ್ದಾನೆ. ಅರ್ಜುನ್ಗೂ ನಿಧಿ ಒಪ್ಪಿಗೆ ಆಗಿದ್ದಾಳೆ. ಆದರೆ ಈ ಮದುವೆ ನಿಧಿಗೆ ಇಷ್ಟವಿಲ್ಲ.</p><p>ಈ ಮದುವೆಯಿಂದ ಪಾರಾಗಲು ನಿಧಿ ಹಾಗೂ ಕರ್ಣ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ರಮೇಶ್ ಈ ಜೋಡಿಯನ್ನು ದೂರ ಮಾಡಲು ಬೇರೆ ಮಾರ್ಗ ಹಿಡಿಯುತ್ತಿದ್ದಾನೆ. ರಮೇಶ್ ಸಂಚು ಫಲಿಸಿ ನಿಧಿ ಹಾಗೂ ಕರ್ಣ ದೂರ ಆಗ್ತಾರಾ? ಎಂಬುವುದು ಮುಂದಿನ ಸಂಚಿಕೆ.</p><p>'ಸೀತಾರಾಮ' ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಅವರು ಅರ್ಜುನ್ ಪಾತ್ರದ ಮೂಲಕ ಮತ್ತೆ ನಟನೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ’ ಧಾರಾವಾಹಿಯು ಕಥೆಯ ಮೂಲಕವೇ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಇದೀಗ, ಅರ್ಜುನ್ ಜೊತೆ ನಿಧಿ ಮದುವೆ ಮಾಡಲು ಆಕೆಯ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.</p><p>ಕರ್ಣನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅವನ ತಂದೆ ರಮೇಶ್ ಪಣ ತೊಟ್ಟಿದ್ದಾರೆ. ಅದರಂತೆ ರಮೇಶ್ ಈಗ, ಕರ್ಣನ ಪ್ರೇಯಸಿ ನಿಧಿಯನ್ನು ದೂರ ಮಾಡಲು ಯೋಚಿಸುತ್ತಿದ್ದಾನೆ. </p><p>ಸ್ನೇಹಿತನ ಮಗ ಅರ್ಜುನ್ನನ್ನು ಮನೆಗೆ ಕರೆಸಿ, ಹೆಣ್ಣು ನೋಡುವ ಶಾಸ್ತ್ರ ಮಾಡಿಸಿದ್ದಾನೆ. ಈ ಹುಡುಗ ಅವಳ ಮನೆಯವರಿಗೂ ಇಷ್ಟವಾಗಿದ್ದಾನೆ. ಅರ್ಜುನ್ಗೂ ನಿಧಿ ಒಪ್ಪಿಗೆ ಆಗಿದ್ದಾಳೆ. ಆದರೆ ಈ ಮದುವೆ ನಿಧಿಗೆ ಇಷ್ಟವಿಲ್ಲ.</p><p>ಈ ಮದುವೆಯಿಂದ ಪಾರಾಗಲು ನಿಧಿ ಹಾಗೂ ಕರ್ಣ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ರಮೇಶ್ ಈ ಜೋಡಿಯನ್ನು ದೂರ ಮಾಡಲು ಬೇರೆ ಮಾರ್ಗ ಹಿಡಿಯುತ್ತಿದ್ದಾನೆ. ರಮೇಶ್ ಸಂಚು ಫಲಿಸಿ ನಿಧಿ ಹಾಗೂ ಕರ್ಣ ದೂರ ಆಗ್ತಾರಾ? ಎಂಬುವುದು ಮುಂದಿನ ಸಂಚಿಕೆ.</p><p>'ಸೀತಾರಾಮ' ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಅವರು ಅರ್ಜುನ್ ಪಾತ್ರದ ಮೂಲಕ ಮತ್ತೆ ನಟನೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>