<p>ಎಲ್ಲ ಅಡೆತಡೆ ಮೀರಿ ಮದುವೆ ಮಂಟಪದಲ್ಲಿ ಕುಳಿತಿರುವ ಕರ್ಣನ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ‘ಕರ್ಣ‘ ಧಾರಾವಾಹಿ ಪ್ರಸಾರವಾಗುತ್ತದೆ.</p><p>ಕರ್ಣ, ನಿಧಿ ಒಂದಾಗಬಾರದೆಂದು ರಮೇಶ್ ನಾನಾ ಕಸರತ್ತು ಮಾಡಿದ್ದ. ನಿಧಿಗೆ ಅರ್ಜುನ್ ಜೊತೆ ಮದುವೆ ಸಿದ್ಧತೆ ಮಾಡಿಸಿದ್ದ. ಆದರೆ, ತನ್ನ ನಿಧಿ ಇಷ್ಟಪಡುತ್ತಿದ್ದ ಹುಡುಗ ಕರ್ಣ ಎಂದು ನಿತ್ಯಾಳಿಗೆ ಕೊನೆ ಘಳಿಗೆಯಲ್ಲಿ ಸತ್ಯ ತಿಳಿಯಿತು. <br><br>ಈ ಸತ್ಯ ತಿಳಿದ ನಿತ್ಯಾ, ಕರ್ಣ ಹಾಗೂ ನಿಧಿ ಪ್ರೀತಿ ವಿಷಯವನ್ನು ಮನೆಯವರ ಮುಂದೆ ಹೇಳಿದ್ದಳು. ಅಕ್ಕನ ಜೀವನ ಹಾಳು ಆಗಬಾರದೆಂದು ಯೋಚಿಸಿದ ನಿಧಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಳು. </p><p><br>ಅವಳನ್ನು ಹಿಂಬಾಲಿಸಿದ ಕರ್ಣ, ನಿಧಿಯನ್ನು ಮನೆವೊಲಿಸಿ ಮನೆಗೆ ಕರೆತಂದನು. ಕೊನೆಗೂ ಇವರ ಪ್ರೀತಿಯನ್ನು ಮನೆಯವರು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದರು. ಇನ್ನೇನು ಕರ್ಣ, ನಿಧಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಕರ್ಣನ ಫೋನ್ಗೆ ಬಂದ ಸಂದೇಶ ಆ ಶುಭಕಾರ್ಯವನ್ನೆ ನಿಲ್ಲಿಸುತ್ತದೆ.</p><p>ಆ ಫೋನ್ಗೆ ಬಂದ ಸಂದೇಶವನ್ನು ನಿಧಿಯನ್ನು ಕರ್ಣ ವಿವಾಹ ಆಗುತ್ತಾನಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಲ್ಲ ಅಡೆತಡೆ ಮೀರಿ ಮದುವೆ ಮಂಟಪದಲ್ಲಿ ಕುಳಿತಿರುವ ಕರ್ಣನ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ‘ಕರ್ಣ‘ ಧಾರಾವಾಹಿ ಪ್ರಸಾರವಾಗುತ್ತದೆ.</p><p>ಕರ್ಣ, ನಿಧಿ ಒಂದಾಗಬಾರದೆಂದು ರಮೇಶ್ ನಾನಾ ಕಸರತ್ತು ಮಾಡಿದ್ದ. ನಿಧಿಗೆ ಅರ್ಜುನ್ ಜೊತೆ ಮದುವೆ ಸಿದ್ಧತೆ ಮಾಡಿಸಿದ್ದ. ಆದರೆ, ತನ್ನ ನಿಧಿ ಇಷ್ಟಪಡುತ್ತಿದ್ದ ಹುಡುಗ ಕರ್ಣ ಎಂದು ನಿತ್ಯಾಳಿಗೆ ಕೊನೆ ಘಳಿಗೆಯಲ್ಲಿ ಸತ್ಯ ತಿಳಿಯಿತು. <br><br>ಈ ಸತ್ಯ ತಿಳಿದ ನಿತ್ಯಾ, ಕರ್ಣ ಹಾಗೂ ನಿಧಿ ಪ್ರೀತಿ ವಿಷಯವನ್ನು ಮನೆಯವರ ಮುಂದೆ ಹೇಳಿದ್ದಳು. ಅಕ್ಕನ ಜೀವನ ಹಾಳು ಆಗಬಾರದೆಂದು ಯೋಚಿಸಿದ ನಿಧಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಳು. </p><p><br>ಅವಳನ್ನು ಹಿಂಬಾಲಿಸಿದ ಕರ್ಣ, ನಿಧಿಯನ್ನು ಮನೆವೊಲಿಸಿ ಮನೆಗೆ ಕರೆತಂದನು. ಕೊನೆಗೂ ಇವರ ಪ್ರೀತಿಯನ್ನು ಮನೆಯವರು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದರು. ಇನ್ನೇನು ಕರ್ಣ, ನಿಧಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಕರ್ಣನ ಫೋನ್ಗೆ ಬಂದ ಸಂದೇಶ ಆ ಶುಭಕಾರ್ಯವನ್ನೆ ನಿಲ್ಲಿಸುತ್ತದೆ.</p><p>ಆ ಫೋನ್ಗೆ ಬಂದ ಸಂದೇಶವನ್ನು ನಿಧಿಯನ್ನು ಕರ್ಣ ವಿವಾಹ ಆಗುತ್ತಾನಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>