<p>ʻಮೂಗುತಿಮಲ್ಲಿʼಯಂತಹ ಜನಪ್ರಿಯ ಧಾರಾವಾಹಿಯನ್ನು ಪರಿಚಯಿಸಿದ ಸನ್ ಉದಯ ಟಿವಿ, ಈಗ ಮತ್ತೊಂದು ಹೊಸ ಕತೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ. </p><p>ಕೌಟುಂಬಿಕ ಕತೆ ಇರುವ ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿ ಜೂನ್ 1ರಿಂದ ಆರಂಭವಾಗಿದೆ. ಸೋಮವಾರದಿಂದ ಶನಿವಾರ 6.30ಕ್ಕೆ ಪ್ರಸಾರವಾಗಲಿದೆ. </p><p>ಕಥೆಯ ನಾಯಕ ಶ್ರೀಹರಿ ಹಾಗೂ ಮಹಾಲಕ್ಷ್ಮೀ ಇಬ್ಬರು ಮಧ್ಯಮ ವರ್ಗದವರು. ಹುಟ್ಟಿನಿಂದ ಬಡತನ ಅನುಭವಿಸಿರುವ ಶ್ರೀಹರಿ ಕುಟುಂಬಸ್ಥರಿಗೆ ಶ್ರೀಮಂತ ಮನೆಯ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕು ಎಂಬ ಕನಸು ಇರುತ್ತದೆ.</p><p>ಇತ್ತ, ಮಹಾಲಕ್ಷ್ಮೀ ಕೂಡ ಮಧ್ಯಮ ವರ್ಗದ ಹುಡುಗಿ ಆಗಿದ್ದರಿಂದ ಕಷ್ಟ ಜೀವನದ ಒಂದು ಭಾಗ ಎಂದು ಬದುಕುತ್ತಿರುತ್ತಾಳೆ. </p>.<p>ಕೊನೆಗೆ ಶ್ರೀಹರಿ ಹಾಗೂ ಮಹಾಲಕ್ಷ್ಮೀ ವಿವಾಹ ಆಗಲೇಬೇಕಾದ ಪರಿಸ್ಥಿತಿ ಬರುತ್ತದೆ. ಅದುವೇ ಈ ಧಾರಾವಾಹಿಯ ತಿರುವು.</p><p>ಮಹಾಲಕ್ಷ್ಮೀ ಪಾತ್ರದಲ್ಲಿ ನಟಿ ಅಮೂಲ್ಯ ಗೌಡ ಹಾಗೂ ಶ್ರೀಹರಿಯಾಗಿ ಭರತ್ ಶಿವಣ್ಣ ನಟಿಸುತ್ತಿದ್ದಾರೆ. ಶಿವಾಜಿರಾವ್ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ, ಹರಿಪ್ರಿಯಾ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. </p><p>ಶಿವು ಪೂಜೇನ ಅಗ್ರಹಾರ ನಿರ್ದೇಶನ ಈ ಧಾರಾವಾಹಿಯನ್ನು ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ನಿರ್ಮಾಣ ಮಾಡುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ʻಮೂಗುತಿಮಲ್ಲಿʼಯಂತಹ ಜನಪ್ರಿಯ ಧಾರಾವಾಹಿಯನ್ನು ಪರಿಚಯಿಸಿದ ಸನ್ ಉದಯ ಟಿವಿ, ಈಗ ಮತ್ತೊಂದು ಹೊಸ ಕತೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ. </p><p>ಕೌಟುಂಬಿಕ ಕತೆ ಇರುವ ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿ ಜೂನ್ 1ರಿಂದ ಆರಂಭವಾಗಿದೆ. ಸೋಮವಾರದಿಂದ ಶನಿವಾರ 6.30ಕ್ಕೆ ಪ್ರಸಾರವಾಗಲಿದೆ. </p><p>ಕಥೆಯ ನಾಯಕ ಶ್ರೀಹರಿ ಹಾಗೂ ಮಹಾಲಕ್ಷ್ಮೀ ಇಬ್ಬರು ಮಧ್ಯಮ ವರ್ಗದವರು. ಹುಟ್ಟಿನಿಂದ ಬಡತನ ಅನುಭವಿಸಿರುವ ಶ್ರೀಹರಿ ಕುಟುಂಬಸ್ಥರಿಗೆ ಶ್ರೀಮಂತ ಮನೆಯ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕು ಎಂಬ ಕನಸು ಇರುತ್ತದೆ.</p><p>ಇತ್ತ, ಮಹಾಲಕ್ಷ್ಮೀ ಕೂಡ ಮಧ್ಯಮ ವರ್ಗದ ಹುಡುಗಿ ಆಗಿದ್ದರಿಂದ ಕಷ್ಟ ಜೀವನದ ಒಂದು ಭಾಗ ಎಂದು ಬದುಕುತ್ತಿರುತ್ತಾಳೆ. </p>.<p>ಕೊನೆಗೆ ಶ್ರೀಹರಿ ಹಾಗೂ ಮಹಾಲಕ್ಷ್ಮೀ ವಿವಾಹ ಆಗಲೇಬೇಕಾದ ಪರಿಸ್ಥಿತಿ ಬರುತ್ತದೆ. ಅದುವೇ ಈ ಧಾರಾವಾಹಿಯ ತಿರುವು.</p><p>ಮಹಾಲಕ್ಷ್ಮೀ ಪಾತ್ರದಲ್ಲಿ ನಟಿ ಅಮೂಲ್ಯ ಗೌಡ ಹಾಗೂ ಶ್ರೀಹರಿಯಾಗಿ ಭರತ್ ಶಿವಣ್ಣ ನಟಿಸುತ್ತಿದ್ದಾರೆ. ಶಿವಾಜಿರಾವ್ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ, ಹರಿಪ್ರಿಯಾ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. </p><p>ಶಿವು ಪೂಜೇನ ಅಗ್ರಹಾರ ನಿರ್ದೇಶನ ಈ ಧಾರಾವಾಹಿಯನ್ನು ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ನಿರ್ಮಾಣ ಮಾಡುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>