ಜೀ ಕನ್ನಡ ವಾಹಿನಿಯಲ್ಲಿ ಪರಸ್ಪರ ಟಿಆರ್ಪಿಗೆ ಪೈಪೋಟಿ ನಡೆಸುತ್ತಿರುವ ಧಾರಾವಾಹಿಗಳೆಂದರೆ ಒಂದು ‘ಜೊತೆ ಜೊತೆಯಲಿ’ ಮತ್ತು ಇನ್ನೊಂದು ‘ಗಟ್ಟಿಮೇಳ’. ಸಿನಿಮಾ ತಾರೆ ಅನಿರುದ್ಧ ಜಟ್ಕರ್‘ಜೊತೆ ಜೊತೆಯಲಿ’ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ಆರ್ಯವರ್ಧನ್ಪಾತ್ರದಲ್ಲಿ ಆರಂಭದಿಂದಲೂ ವೀಕ್ಷಕರ ಮೇಲೆ ಮೋಡಿ ಮಾಡಿದ್ದಾರೆ. ಇನ್ನು ‘ಗಟ್ಟಿಮೇಳ’ ಧಾರಾವಾಹಿಯ ವೇದಾಂತ್ ಪಾತ್ರವೂ ಅಷ್ಟೇ ಪ್ರಭಾವಿಯಾಗಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ವೇದಾಂತ್ ಪಾತ್ರದಲ್ಲಿ ಮಿಂಚುತ್ತಿರುವವರು ನಟ ರಕ್ಷ್. ಈ ಇಬ್ಬರು ನಟರು ಈ ಧಾರಾವಾಹಿಗಳಲ್ಲಿ ದೊಡ್ಡ ಉದ್ಯಮಿಗಳು. ಈ ಯಶಸ್ವಿ ಉದ್ಯಮಿಗಳನ್ನು ಮಹಾಸಂಗಮದಲ್ಲಿಮುಖಾಮುಖಿಯಾಗುವಂತೆ ಬೆಸೆದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂದಿದ್ದೇ ತಂಡ ಜೀ ಕನ್ನಡ ವಾಹಿನಿ ಹೊಸ ಪ್ರಯೋಗಕ್ಕೆ ಕೈ ಹಾಕಿಯೇ ಬಿಟ್ಟಿತು.