<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಂದಗೋಕುಲ' ಧಾರಾವಾಹಿ ಕೌಟುಂಬಿಕ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ಈಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ. </p><p>ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ಕುಟುಂಬಸ್ಥರಿಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಕೇಶವನನ್ನು ನೋಡಿದ ಮೀನಾ ತಂದೆ ʼಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆʼ ಅವಮಾನ ಮಾಡಿದ್ದರು.</p><p>ಈಗ ಕೇಶವ, ತನಗಿರುವ ಸರ್ಕಾರಿ ಕೆಲಸದ ಕನಸಿನ ಬಗ್ಗೆ ತನ್ನ ತಮ್ಮ ವಲ್ಲಭನ ಬಳಿ ಹೇಳಿಕೊಂಡಿದ್ದಾನೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಶಪಥ ಮಾಡಿದ್ದಾನೆ.</p><p>ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಹಣ ಸಂಪಾದಿಸಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ ಬಿಚ್ಚಿಟ್ಟಿದ್ದಾನೆ.</p><p> ಯಾವುದೇ ಕಾರಣಕ್ಕೂ ನಮ್ಮಿಬ್ಬರ ನಡುವಿನ ಈ ಮಾತು ನಮ್ಮ ಮನೆಯವರಿಗೆ ಗೊತ್ತಾಗಬಾರದು ಎಂದು ಇಬ್ಬರು ಸಹೋದರರು ನಿರ್ಧರಿಸಿರುತ್ತಾರೆ. ಆದರೆ, ಕೇಶವ ಮನೆಗೆ ಬಂದವನೇ ತನ್ನ ಪತ್ನಿ ಮೀನಾ ಮುಂದೆ ವಲ್ಲಭ ಡ್ರೈವಿಂಗ್ ಕೆಲಸಕ್ಕೆ ಹೋಗುವ ಗುಟ್ಟನ್ನು ಹೇಳಿಬಿಟ್ಟಿದ್ದಾನೆ.</p><p>ಇತ್ತ, ವಲ್ಲಭ ಕೂಡ ತನ್ನ ಹೆಂಡತಿ ಅಮೂಲ್ಯ ಬಳಿ ಬಂದು ʼಕೇಶವಣ್ಣ ಗೌವರ್ನ್ಮೆಂಟ್ ಕೆಲಸಕ್ಕೆ ಸೇರ್ತಾರೆ ಮೀನಾಳ ಮುಂದೆ ಹೇಳಬೇಡʼ ಎಂದು ಗುಟ್ಟನ್ನು ರಟ್ಟು ಮಾಡಿದ್ದಾನೆ. </p><p>ಒಟ್ಟಿನಲ್ಲಿ ಇಬ್ಬರ ಕೆಲಸದ ಗುಟ್ಟು ಮನೆಯವರ ಎದುರು ಗೊತ್ತಾಗುವ ಸುಳಿವು ಸಿಕ್ಕಿರುವುದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಂದಗೋಕುಲ' ಧಾರಾವಾಹಿ ಕೌಟುಂಬಿಕ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ಈಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ. </p><p>ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ಕುಟುಂಬಸ್ಥರಿಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಕೇಶವನನ್ನು ನೋಡಿದ ಮೀನಾ ತಂದೆ ʼಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆʼ ಅವಮಾನ ಮಾಡಿದ್ದರು.</p><p>ಈಗ ಕೇಶವ, ತನಗಿರುವ ಸರ್ಕಾರಿ ಕೆಲಸದ ಕನಸಿನ ಬಗ್ಗೆ ತನ್ನ ತಮ್ಮ ವಲ್ಲಭನ ಬಳಿ ಹೇಳಿಕೊಂಡಿದ್ದಾನೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಶಪಥ ಮಾಡಿದ್ದಾನೆ.</p><p>ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಹಣ ಸಂಪಾದಿಸಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ ಬಿಚ್ಚಿಟ್ಟಿದ್ದಾನೆ.</p><p> ಯಾವುದೇ ಕಾರಣಕ್ಕೂ ನಮ್ಮಿಬ್ಬರ ನಡುವಿನ ಈ ಮಾತು ನಮ್ಮ ಮನೆಯವರಿಗೆ ಗೊತ್ತಾಗಬಾರದು ಎಂದು ಇಬ್ಬರು ಸಹೋದರರು ನಿರ್ಧರಿಸಿರುತ್ತಾರೆ. ಆದರೆ, ಕೇಶವ ಮನೆಗೆ ಬಂದವನೇ ತನ್ನ ಪತ್ನಿ ಮೀನಾ ಮುಂದೆ ವಲ್ಲಭ ಡ್ರೈವಿಂಗ್ ಕೆಲಸಕ್ಕೆ ಹೋಗುವ ಗುಟ್ಟನ್ನು ಹೇಳಿಬಿಟ್ಟಿದ್ದಾನೆ.</p><p>ಇತ್ತ, ವಲ್ಲಭ ಕೂಡ ತನ್ನ ಹೆಂಡತಿ ಅಮೂಲ್ಯ ಬಳಿ ಬಂದು ʼಕೇಶವಣ್ಣ ಗೌವರ್ನ್ಮೆಂಟ್ ಕೆಲಸಕ್ಕೆ ಸೇರ್ತಾರೆ ಮೀನಾಳ ಮುಂದೆ ಹೇಳಬೇಡʼ ಎಂದು ಗುಟ್ಟನ್ನು ರಟ್ಟು ಮಾಡಿದ್ದಾನೆ. </p><p>ಒಟ್ಟಿನಲ್ಲಿ ಇಬ್ಬರ ಕೆಲಸದ ಗುಟ್ಟು ಮನೆಯವರ ಎದುರು ಗೊತ್ತಾಗುವ ಸುಳಿವು ಸಿಕ್ಕಿರುವುದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>