<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಲಿಟಲ್ ಚಾಂಪ್ಸ್’ ಈಗಾಗಲೇ ಆರಂಭಗೊಂಡಿದೆ. ಇದೀಗ, ಚಂದನವನದ ನಟ ನವೀನ್ ಕೃಷ್ಣ ಅವರ ಪುತ್ರ ಹರುಷ್ ಈ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ.</p><p>‘ಹರುಷ್ ಅವರ ತಾತ ಶ್ರೀನಿವಾಸ್ ಮೂರ್ತಿ ಹಾಗೂ ತಂದೆ ನವೀನ್ ಕೃಷ್ಣ ಅವರು ಕನ್ನಡ ಚಿತ್ರರಂಗದ ಕಲಾವಿದರಾಗಿದ್ದರೂ ಕೂಡ ಯಾವುದೇ ಪ್ರಭಾವವನ್ನು ಬಳಸದೇ ಎಲ್ಲರಂತೆಯೇ ಇವರು ಕೂಡ ಮೆಗಾ ಆಡಿಷನ್ನಲ್ಲಿ ಭಾಗವಹಿಸಿ, ತೀರ್ಪುಗಾರರ ಗಮನ ಸೆಳೆದಿದ್ದಾರೆ’ ಎಂದು ನಿರೂಪಕಿ ಅನುಶ್ರೀ ಅವರು ಅವರನ್ನು ಕೊಂಡಾಡಿದ್ದಾರೆ.</p>.<p> ಈ ವೇಳೆ ಮಾತನಾಡಿದ ನವೀನ್ ಕೃಷ್ಣ , ‘ಯಾವುದೇ ವೇದಿಕೆ ಮೆಟ್ಟಿಲು ಹತ್ತಬೇಕಾದರೆ, ಶ್ರದ್ಧೆ ಆ ವಿಷಯದಲ್ಲಿ ಜ್ಞಾನ ಮುಖ್ಯವಾಗುತ್ತದೆ. ಇದಕ್ಕೂ ಮೊದಲು ಒಂದೆರಡು ಬಾರಿ ನನ್ನ ಮಕ್ಕಳು ಕಾರ್ಯಕ್ರಮಕ್ಕೆ ಆಯ್ಕೆಯಾಗಲು ಆಡಿಷನ್ ಕೊಟ್ಟಿದ್ದರು. ಆದರೆ, ಆ ವೇಳೆ ಆಯ್ಕೆ ಆಗಿರಲಿಲ್ಲ. ನಿರಂತರ ಅಭ್ಯಾಸದ ಬಳಿಕ ಈ ಬಾರಿ ಸ್ಪರ್ಧಿಯಾಗಿ ಆಗಮಿಸಿರುವುದು ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ. </p><p>ಈ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಲಿಟಲ್ ಚಾಂಪ್ಸ್’ ಈಗಾಗಲೇ ಆರಂಭಗೊಂಡಿದೆ. ಇದೀಗ, ಚಂದನವನದ ನಟ ನವೀನ್ ಕೃಷ್ಣ ಅವರ ಪುತ್ರ ಹರುಷ್ ಈ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ.</p><p>‘ಹರುಷ್ ಅವರ ತಾತ ಶ್ರೀನಿವಾಸ್ ಮೂರ್ತಿ ಹಾಗೂ ತಂದೆ ನವೀನ್ ಕೃಷ್ಣ ಅವರು ಕನ್ನಡ ಚಿತ್ರರಂಗದ ಕಲಾವಿದರಾಗಿದ್ದರೂ ಕೂಡ ಯಾವುದೇ ಪ್ರಭಾವವನ್ನು ಬಳಸದೇ ಎಲ್ಲರಂತೆಯೇ ಇವರು ಕೂಡ ಮೆಗಾ ಆಡಿಷನ್ನಲ್ಲಿ ಭಾಗವಹಿಸಿ, ತೀರ್ಪುಗಾರರ ಗಮನ ಸೆಳೆದಿದ್ದಾರೆ’ ಎಂದು ನಿರೂಪಕಿ ಅನುಶ್ರೀ ಅವರು ಅವರನ್ನು ಕೊಂಡಾಡಿದ್ದಾರೆ.</p>.<p> ಈ ವೇಳೆ ಮಾತನಾಡಿದ ನವೀನ್ ಕೃಷ್ಣ , ‘ಯಾವುದೇ ವೇದಿಕೆ ಮೆಟ್ಟಿಲು ಹತ್ತಬೇಕಾದರೆ, ಶ್ರದ್ಧೆ ಆ ವಿಷಯದಲ್ಲಿ ಜ್ಞಾನ ಮುಖ್ಯವಾಗುತ್ತದೆ. ಇದಕ್ಕೂ ಮೊದಲು ಒಂದೆರಡು ಬಾರಿ ನನ್ನ ಮಕ್ಕಳು ಕಾರ್ಯಕ್ರಮಕ್ಕೆ ಆಯ್ಕೆಯಾಗಲು ಆಡಿಷನ್ ಕೊಟ್ಟಿದ್ದರು. ಆದರೆ, ಆ ವೇಳೆ ಆಯ್ಕೆ ಆಗಿರಲಿಲ್ಲ. ನಿರಂತರ ಅಭ್ಯಾಸದ ಬಳಿಕ ಈ ಬಾರಿ ಸ್ಪರ್ಧಿಯಾಗಿ ಆಗಮಿಸಿರುವುದು ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ. </p><p>ಈ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>