<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಪವಿತ್ರ ಬಂಧನ‘ ಧಾರಾವಾಹಿಯ ಸಂಚಿಕೆಗಳು ಕುತೂಹಲ ಹುಟ್ಟಿಸಿದೆ. ಯಾವಾಗಲೂ ದೇವ್ನನ್ನು ಕಂಡರೆ ಸಿಡುಕುತ್ತಿದ್ದ ಪವಿತ್ರಾಳಿಗೆ ತನ್ನ ತಪ್ಪಿನ ಅರಿವು ಆಗಿದೆ.</p><p>ರಾಧಿಕಾ ತನ್ನ ಕುಟುಂಬದ ಗೌರವ ಹೆಚ್ಚಿಸಿಕೊಳ್ಳಲು ಪುತ್ರ ದೇವ್ ಹಾಗೂ ಪವಿತ್ರಾಳ ಆರತಕ್ಷತೆ ಪಾರ್ಟಿ ಏರ್ಪಡಿಸಿದ್ದರು. ಅಲ್ಲಿ ಪವಿತ್ರಾಳಿಗೆ ಅವಮಾನ ಮಾಡುವ ದೃಷ್ಟಿಯಿಂದ ಅವಳ ಮನೆಯವರನ್ನು ಪಾರ್ಟಿಗೆ ನಮೃತಾ ಆಹ್ವಾನ ಮಾಡಿದ್ದಳು.</p>.<p>ಸತ್ಯ ತಿಳಿಯದೇ ಆ ಪಾರ್ಟಿಗೆ ಪವಿತ್ರಾಳ ಮನೆಯವರು ಆಗಮಿಸಿದ್ದರು. ಅವರನ್ನು ಹಳ್ಳಿ ಜನ ಎನ್ನುವ ಕಾರಣಕ್ಕೆ ನಮೃತಾಳ ಸ್ನೇಹಿತರು ಅವಮಾನ ಮಾಡಿದ್ದರು. ಇದಕ್ಕೆಲ್ಲಾ ದೇವ್ ಕಾರಣ ಎಂದು ಪವಿತ್ರಾ ಕೋಪ ಮಾಡಿಕೊಂಡಿದ್ದಳು.</p><p>ಪತ್ನಿ ಮನೆಯವರಿಗೆ ಅವಮಾನ ಮಾಡಿದವರಿಗೆ ದೇವ್ ತಕ್ಕ ಪಾಠ ಕಲಿಸುವುದರ ಜೊತೆಗೆ ತಾಯಿ ರಾಧಿಕಾಳ ಎದುರು ಪವಿತ್ರಾಳ ಪರ ಮಾತನಾಡಿದ್ದಾನೆ.</p><p>ದೇವ್ನನ್ನು ಕಂಡರೆ ಪ್ರತಿ ಬಾರಿಯೂ ಸಿಡುಕುತ್ತಿದ್ದ ಪವಿತ್ರಾ, ಮೊದಲ ಬಾರಿ ಪತ್ನಿ ಸಹಾಯ ನೆನೆದು ಪಶ್ಚಾತಾಪ ಪಡುತ್ತಿದ್ದಾಳೆ. ತನ್ನ ತಪ್ಪಿನ ಅರಿವಾಗಿ ದೇವ್ ಬಳಿ ಕ್ಷಮೆ ಕೇಳುತ್ತಾಳಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಪವಿತ್ರ ಬಂಧನ‘ ಧಾರಾವಾಹಿಯ ಸಂಚಿಕೆಗಳು ಕುತೂಹಲ ಹುಟ್ಟಿಸಿದೆ. ಯಾವಾಗಲೂ ದೇವ್ನನ್ನು ಕಂಡರೆ ಸಿಡುಕುತ್ತಿದ್ದ ಪವಿತ್ರಾಳಿಗೆ ತನ್ನ ತಪ್ಪಿನ ಅರಿವು ಆಗಿದೆ.</p><p>ರಾಧಿಕಾ ತನ್ನ ಕುಟುಂಬದ ಗೌರವ ಹೆಚ್ಚಿಸಿಕೊಳ್ಳಲು ಪುತ್ರ ದೇವ್ ಹಾಗೂ ಪವಿತ್ರಾಳ ಆರತಕ್ಷತೆ ಪಾರ್ಟಿ ಏರ್ಪಡಿಸಿದ್ದರು. ಅಲ್ಲಿ ಪವಿತ್ರಾಳಿಗೆ ಅವಮಾನ ಮಾಡುವ ದೃಷ್ಟಿಯಿಂದ ಅವಳ ಮನೆಯವರನ್ನು ಪಾರ್ಟಿಗೆ ನಮೃತಾ ಆಹ್ವಾನ ಮಾಡಿದ್ದಳು.</p>.<p>ಸತ್ಯ ತಿಳಿಯದೇ ಆ ಪಾರ್ಟಿಗೆ ಪವಿತ್ರಾಳ ಮನೆಯವರು ಆಗಮಿಸಿದ್ದರು. ಅವರನ್ನು ಹಳ್ಳಿ ಜನ ಎನ್ನುವ ಕಾರಣಕ್ಕೆ ನಮೃತಾಳ ಸ್ನೇಹಿತರು ಅವಮಾನ ಮಾಡಿದ್ದರು. ಇದಕ್ಕೆಲ್ಲಾ ದೇವ್ ಕಾರಣ ಎಂದು ಪವಿತ್ರಾ ಕೋಪ ಮಾಡಿಕೊಂಡಿದ್ದಳು.</p><p>ಪತ್ನಿ ಮನೆಯವರಿಗೆ ಅವಮಾನ ಮಾಡಿದವರಿಗೆ ದೇವ್ ತಕ್ಕ ಪಾಠ ಕಲಿಸುವುದರ ಜೊತೆಗೆ ತಾಯಿ ರಾಧಿಕಾಳ ಎದುರು ಪವಿತ್ರಾಳ ಪರ ಮಾತನಾಡಿದ್ದಾನೆ.</p><p>ದೇವ್ನನ್ನು ಕಂಡರೆ ಪ್ರತಿ ಬಾರಿಯೂ ಸಿಡುಕುತ್ತಿದ್ದ ಪವಿತ್ರಾ, ಮೊದಲ ಬಾರಿ ಪತ್ನಿ ಸಹಾಯ ನೆನೆದು ಪಶ್ಚಾತಾಪ ಪಡುತ್ತಿದ್ದಾಳೆ. ತನ್ನ ತಪ್ಪಿನ ಅರಿವಾಗಿ ದೇವ್ ಬಳಿ ಕ್ಷಮೆ ಕೇಳುತ್ತಾಳಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>