ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ, ಹೋರಾಟ ಹಾಗೂ ಬದುಕಿನ ಕಥೆಯನ್ನು ಹೇಳುತ್ತದೆ. ಸಂಚಿಕೆಗೆ ಡಾವೆಂಕಿ ಕಥೆ ಬರೆದಿದ್ದು, ನವೀನ್ ಸೋಮನಹಳ್ಳಿ ನಿರ್ದೇಶನ ಮಾಡಿದ್ದಾರೆ. ಜಗದೀಶ್ ಭಾವೆ ಚಿತ್ರಕಥೆ, ಅನಂತ್ ಶಾಂದ್ರೇಯ ಸಂಭಾಷಣೆ, ರವಿ ಕನಕಪುರಛಾಯಾಗ್ರಹಣವಿದೆ. ಪಾತ್ರ ವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಇದ್ದಾರೆ.