<p>ಸಮುದ್ರದಲ್ಲಿ ಶ್ರಾವಣಿ ಬೋಟ್ ರೈಡಿಂಗ್ ಹೋಗಿ ಅಪಾಯದಲ್ಲಿ ಸಿಲುಕಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ‘ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p>ಎಲ್ಲಾ ಅಡೆತಡೆ ದಾಟಿ ಮತ್ತೆ ವೀರು ಹಾಗೂ ನಂದಿನಿ ಒಂದಾದ ಸಂಭ್ರಮದಲ್ಲಿ ಸುಬ್ಬು ಹಾಗೂ ಶ್ರಾವಣಿ ಕುಟುಂಬಸ್ಥರು ಗೋಕರ್ಣ ಟ್ರಿಪ್ ಹೋಗಿದ್ದಾರೆ. ತಮ್ಮ ಪ್ರವಾಸಕ್ಕೆ ಯಾವುದೇ ತೊಂದರೆ ಆಗಬಾರದೆಂದು ಅಲ್ಲೇ ಸಮೀಪ ಇರುವ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೂ ಭೇಟಿ ಪೂಜೆ ಸಲ್ಲಿಸಿದ್ದಾರೆ.</p><p>ಶ್ರಾವಣಿ, ಸುಬ್ರಮಣ್ಯ ಕುಟುಂಬಸ್ಥರು ರಾತ್ರಿ ವೇಳೆ ಕಡಲ ತೀರದಲ್ಲಿ ಕುಳಿತು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. </p><p>ಬೆಳಗ್ಗೆ ಎಲ್ಲರೂ ಒಟ್ಟಾಗಿ ದೋಣಿ ವಿಹಾರದಲ್ಲಿ ಸಮುದ್ರದ ಸುತ್ತಲಿನ ಪರಿಸರವನ್ನು ಆನಂದಿಸಿದ್ದಾರೆ. ಬಳಿಕ ಪತಿ ಸುಬ್ಬು ಮಾತು ಮೀರಿ ಶ್ರಾವಣಿ ಒಬ್ಬಳೇ ಬೋಟ್ ರೈಡಿಂಗ್ ಹೋಗಿದ್ದಾಳೆ.</p><p>ಶ್ರಾವಣಿ ಸಮುದ್ರದ ಮಧ್ಯಕ್ಕೆ ಹೋಗುತ್ತಿದ್ದಂತೆ ಅವಳಿದ್ದ ಬೋಟ್ ನೀರಿನಲ್ಲಿ ಮುಳುಗುವ ಹಂತಕ್ಕೆ ಬಂದಿದೆ. ಸದ್ಯ, ಅಪಾಯದಲ್ಲಿರುವ ಶ್ರಾವಣಿಯನ್ನು ವೀರು ಹಾಗೂ ಸುಬ್ರಮಣ್ಯ ಕಾಪಾಡಿಕೊಳ್ಳುತ್ತಾರಾ? ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಮುದ್ರದಲ್ಲಿ ಶ್ರಾವಣಿ ಬೋಟ್ ರೈಡಿಂಗ್ ಹೋಗಿ ಅಪಾಯದಲ್ಲಿ ಸಿಲುಕಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ‘ ಧಾರಾವಾಹಿ ರೋಚಕ ಘಟ್ಟ ತಲುಪಿದೆ. </p><p>ಎಲ್ಲಾ ಅಡೆತಡೆ ದಾಟಿ ಮತ್ತೆ ವೀರು ಹಾಗೂ ನಂದಿನಿ ಒಂದಾದ ಸಂಭ್ರಮದಲ್ಲಿ ಸುಬ್ಬು ಹಾಗೂ ಶ್ರಾವಣಿ ಕುಟುಂಬಸ್ಥರು ಗೋಕರ್ಣ ಟ್ರಿಪ್ ಹೋಗಿದ್ದಾರೆ. ತಮ್ಮ ಪ್ರವಾಸಕ್ಕೆ ಯಾವುದೇ ತೊಂದರೆ ಆಗಬಾರದೆಂದು ಅಲ್ಲೇ ಸಮೀಪ ಇರುವ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೂ ಭೇಟಿ ಪೂಜೆ ಸಲ್ಲಿಸಿದ್ದಾರೆ.</p><p>ಶ್ರಾವಣಿ, ಸುಬ್ರಮಣ್ಯ ಕುಟುಂಬಸ್ಥರು ರಾತ್ರಿ ವೇಳೆ ಕಡಲ ತೀರದಲ್ಲಿ ಕುಳಿತು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. </p><p>ಬೆಳಗ್ಗೆ ಎಲ್ಲರೂ ಒಟ್ಟಾಗಿ ದೋಣಿ ವಿಹಾರದಲ್ಲಿ ಸಮುದ್ರದ ಸುತ್ತಲಿನ ಪರಿಸರವನ್ನು ಆನಂದಿಸಿದ್ದಾರೆ. ಬಳಿಕ ಪತಿ ಸುಬ್ಬು ಮಾತು ಮೀರಿ ಶ್ರಾವಣಿ ಒಬ್ಬಳೇ ಬೋಟ್ ರೈಡಿಂಗ್ ಹೋಗಿದ್ದಾಳೆ.</p><p>ಶ್ರಾವಣಿ ಸಮುದ್ರದ ಮಧ್ಯಕ್ಕೆ ಹೋಗುತ್ತಿದ್ದಂತೆ ಅವಳಿದ್ದ ಬೋಟ್ ನೀರಿನಲ್ಲಿ ಮುಳುಗುವ ಹಂತಕ್ಕೆ ಬಂದಿದೆ. ಸದ್ಯ, ಅಪಾಯದಲ್ಲಿರುವ ಶ್ರಾವಣಿಯನ್ನು ವೀರು ಹಾಗೂ ಸುಬ್ರಮಣ್ಯ ಕಾಪಾಡಿಕೊಳ್ಳುತ್ತಾರಾ? ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>