<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಪ್ರೇಕ್ಷಕರನ್ನು ಕಥೆಯ ಮೂಲಕ ರಂಜಿಸುತ್ತಿದೆ. ಈಗ, ನಂದಿನಿ ಕುಟುಂಬದ ನೆಮ್ಮದಿ ಕೆಡಿಸಲು ವಿಜಯಾಂಬಿಕಾ, ರಾಜೇಶ್ವರಿ ಅನ್ನು ಬರಮಾಡಿಕೊಂಡಿದ್ದಾಳೆ.</p><p>ಸುಬ್ರಮಣ್ಯ ಮನೆಯಲ್ಲಿ ಶ್ರಾವಣಿ ತಾಯಿ ನಂದಿನಿ, ತಂದೆ ವಿರೇಂದ್ರ ದೇಸಾಯಿ ಅವರು ಒಂದುಗೂಡಿದ್ದಾರೆ. ಇದರ ನಡುವೆ ಅವರು ಅಲ್ಲಿನ ಸಣ್ಣಪುಟ್ಟ ಸಂಗತಿಗಳನ್ನು ಸಂಭ್ರಮಿಸುತ್ತಿದ್ದಾರೆ. ಅತ್ತ ವಿಜಯಾಂಬಿಕಾ, ಸಹೋದರ ವೀರೂ ಹಾಗೂ ಅವನ ಕುಟುಂಬದವರನ್ನು ಬೀದಿಗೆ ತರಲು ನಾನಾ ಕಸರತ್ತು ಮಾಡಿದ್ದಳು.</p><p>ಅದರಂತೆಯೇ ಅವಳು ತನ್ನ ಸಂಚಿನಿಂದ ವೀರುವನ್ನು ಮಂತ್ರಿ ಸ್ಥಾನದಿಂದ ಕೆಳಗಿಸಿದ್ದಳು. ನಂದಿನಿ ಮತ್ತೆ ಅವಳ ಕುಟುಂಬದ ಜೊತೆ ಸೇರಬಾರದೆಂದು ಅಪಘಾತ ಮಾಡಿಸಿದ್ದಳು. ಈ ಎಲ್ಲಾ ಸಮಸ್ಯೆಯನ್ನು ದಾಟಿ ಸಂಭ್ರಮದಲ್ಲಿರುವ ಹೊತ್ತಿನಲ್ಲೇ ವಿಜಯಾಂಬಿಕಾ, ರಾಜೇಶ್ವರಿ ಅನ್ನು ಕರೆಸಿ ಶ್ರಾವಣಿ ಕುಟುಂಬದ ನೆಮ್ಮದಿ ಕೆಡಿಸಲು ಮುಂದಾಗಿದ್ದಾಳೆ. </p><p>ವಿಜಯಾಂಬಿಕಾಳ ಮೋಸದಾಟದಿಂದಾಗಿ ಈಗಾಗಲೇ ಶ್ರಾವಣಿ, ನಂದಿನಿ, ವೀರು ನೊಂದಿದ್ದಾರೆ. ಇನ್ನೂ ಇವಳಿಗೆ ಸಾಥ್ ನೀಡಲು ಬಂದಿರುವ ರಾಜೇಶ್ವರಿಯಿಂದ ಅವರೆಲ್ಲರೂ ಜೀವನದ ಭರವಸೆಯನ್ನು ಕಳೆದುಕೊಳ್ಳುತ್ತಾರಾ? ಅಥವಾ ಎಲ್ಲರೂ ಒಟ್ಟಾಗಿ ವಿಜಯಾಂಬಿಕಾಳಿಗೆ ತಕ್ಕ ಪಾಠ ಕಲಿಸುತ್ತಾರಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಪ್ರೇಕ್ಷಕರನ್ನು ಕಥೆಯ ಮೂಲಕ ರಂಜಿಸುತ್ತಿದೆ. ಈಗ, ನಂದಿನಿ ಕುಟುಂಬದ ನೆಮ್ಮದಿ ಕೆಡಿಸಲು ವಿಜಯಾಂಬಿಕಾ, ರಾಜೇಶ್ವರಿ ಅನ್ನು ಬರಮಾಡಿಕೊಂಡಿದ್ದಾಳೆ.</p><p>ಸುಬ್ರಮಣ್ಯ ಮನೆಯಲ್ಲಿ ಶ್ರಾವಣಿ ತಾಯಿ ನಂದಿನಿ, ತಂದೆ ವಿರೇಂದ್ರ ದೇಸಾಯಿ ಅವರು ಒಂದುಗೂಡಿದ್ದಾರೆ. ಇದರ ನಡುವೆ ಅವರು ಅಲ್ಲಿನ ಸಣ್ಣಪುಟ್ಟ ಸಂಗತಿಗಳನ್ನು ಸಂಭ್ರಮಿಸುತ್ತಿದ್ದಾರೆ. ಅತ್ತ ವಿಜಯಾಂಬಿಕಾ, ಸಹೋದರ ವೀರೂ ಹಾಗೂ ಅವನ ಕುಟುಂಬದವರನ್ನು ಬೀದಿಗೆ ತರಲು ನಾನಾ ಕಸರತ್ತು ಮಾಡಿದ್ದಳು.</p><p>ಅದರಂತೆಯೇ ಅವಳು ತನ್ನ ಸಂಚಿನಿಂದ ವೀರುವನ್ನು ಮಂತ್ರಿ ಸ್ಥಾನದಿಂದ ಕೆಳಗಿಸಿದ್ದಳು. ನಂದಿನಿ ಮತ್ತೆ ಅವಳ ಕುಟುಂಬದ ಜೊತೆ ಸೇರಬಾರದೆಂದು ಅಪಘಾತ ಮಾಡಿಸಿದ್ದಳು. ಈ ಎಲ್ಲಾ ಸಮಸ್ಯೆಯನ್ನು ದಾಟಿ ಸಂಭ್ರಮದಲ್ಲಿರುವ ಹೊತ್ತಿನಲ್ಲೇ ವಿಜಯಾಂಬಿಕಾ, ರಾಜೇಶ್ವರಿ ಅನ್ನು ಕರೆಸಿ ಶ್ರಾವಣಿ ಕುಟುಂಬದ ನೆಮ್ಮದಿ ಕೆಡಿಸಲು ಮುಂದಾಗಿದ್ದಾಳೆ. </p><p>ವಿಜಯಾಂಬಿಕಾಳ ಮೋಸದಾಟದಿಂದಾಗಿ ಈಗಾಗಲೇ ಶ್ರಾವಣಿ, ನಂದಿನಿ, ವೀರು ನೊಂದಿದ್ದಾರೆ. ಇನ್ನೂ ಇವಳಿಗೆ ಸಾಥ್ ನೀಡಲು ಬಂದಿರುವ ರಾಜೇಶ್ವರಿಯಿಂದ ಅವರೆಲ್ಲರೂ ಜೀವನದ ಭರವಸೆಯನ್ನು ಕಳೆದುಕೊಳ್ಳುತ್ತಾರಾ? ಅಥವಾ ಎಲ್ಲರೂ ಒಟ್ಟಾಗಿ ವಿಜಯಾಂಬಿಕಾಳಿಗೆ ತಕ್ಕ ಪಾಠ ಕಲಿಸುತ್ತಾರಾ ಎಂಬುವುದು ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>