<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮನೆಯ ಯಜಮಾನ, ಸಹೋದರ ವೀರು ಹಾಗೂ ಕುಟುಂಬಸ್ಥರನ್ನು ವಿಜಯಾಂಬಿಕಾ ಮನೆಯಿಂದ ಹೊರ ಹಾಕಿದ್ದಾಳೆ.</p><p>ವೀರುವಿನಿಂದ ಪತ್ಮಿ ನಂದಿನಿ, ಪುತ್ರಿ ಶ್ರಾವಣಿ ಹಾಗೂ ಸ್ನೇಹಿತ ಪೃಥ್ವಿ ತನ್ನ ಸಂಚಿನಿಂದ ದೂರ ಮಾಡಿದ್ದಳು. ಆದಾದ ಬಳಿಕ ವೀರು ಆಸ್ತಿಯನ್ನು ಅಕ್ಕ ವಿಜಯಾಂಬಿಕಾ ಮೋಸದಿಂದ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಳು. </p><p>ಈಗ, ಅವಳು ಮಾಡಿದ್ದ ಮೋಸಗಳು ಎಲ್ಲವೂ ವೀರು ಮುಂದೆ ಬಯಲಾಗಿದೆ. ಇದಕ್ಕೆ ಕೋಪಗೊಂಡ ವೀರು ಅವಳಿಗೆ ಕೆನ್ನೆ ಹೊಡೆದು ಮನೆಯಿಂದ ಹೊರ ಹೋಗುವಂತೆ ಹೇಳಿದ್ದನು. </p><p>ಆದರೆ, ಅವಳು ವೀರು ಹಾಗೂ ಅವನ ಪುತ್ರಿ ಶ್ರಾವಣಿಯನ್ನೇ ಯಾಮಾರಿಸಿ ಎಲ್ಲಾ ಆಸ್ತಿಯನ್ನು ಕಬಳಿಸಿದ್ದಾಳೆ. ಇಷ್ಟು ದಿನ ಆಸರೆಯಾಗಿದ್ದ ವೀರು ಮನೆಯರನ್ನೇ ಹೊರ ಹಾಕಿದ್ದಾಳೆ. </p><p>ಶ್ರಾವಣಿ, ಸುಬ್ರಮಣ್ಯ, ನಂದಿನಿಗೆ ಈ ವಿಷಯ ತಿಳಿದಿಲ್ಲ. ವಿಜಯಾಂಬಿಕಾಳ ಮೋಸಕ್ಕೆ ಒಳಗಾದ ವೀರು ಮುಂದಿನ ನಿರ್ಧಾರ ಏನು ಎಂಬುವುದು ಕೂತುಹಲಕಾರಿ ಸಂಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮನೆಯ ಯಜಮಾನ, ಸಹೋದರ ವೀರು ಹಾಗೂ ಕುಟುಂಬಸ್ಥರನ್ನು ವಿಜಯಾಂಬಿಕಾ ಮನೆಯಿಂದ ಹೊರ ಹಾಕಿದ್ದಾಳೆ.</p><p>ವೀರುವಿನಿಂದ ಪತ್ಮಿ ನಂದಿನಿ, ಪುತ್ರಿ ಶ್ರಾವಣಿ ಹಾಗೂ ಸ್ನೇಹಿತ ಪೃಥ್ವಿ ತನ್ನ ಸಂಚಿನಿಂದ ದೂರ ಮಾಡಿದ್ದಳು. ಆದಾದ ಬಳಿಕ ವೀರು ಆಸ್ತಿಯನ್ನು ಅಕ್ಕ ವಿಜಯಾಂಬಿಕಾ ಮೋಸದಿಂದ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಳು. </p><p>ಈಗ, ಅವಳು ಮಾಡಿದ್ದ ಮೋಸಗಳು ಎಲ್ಲವೂ ವೀರು ಮುಂದೆ ಬಯಲಾಗಿದೆ. ಇದಕ್ಕೆ ಕೋಪಗೊಂಡ ವೀರು ಅವಳಿಗೆ ಕೆನ್ನೆ ಹೊಡೆದು ಮನೆಯಿಂದ ಹೊರ ಹೋಗುವಂತೆ ಹೇಳಿದ್ದನು. </p><p>ಆದರೆ, ಅವಳು ವೀರು ಹಾಗೂ ಅವನ ಪುತ್ರಿ ಶ್ರಾವಣಿಯನ್ನೇ ಯಾಮಾರಿಸಿ ಎಲ್ಲಾ ಆಸ್ತಿಯನ್ನು ಕಬಳಿಸಿದ್ದಾಳೆ. ಇಷ್ಟು ದಿನ ಆಸರೆಯಾಗಿದ್ದ ವೀರು ಮನೆಯರನ್ನೇ ಹೊರ ಹಾಕಿದ್ದಾಳೆ. </p><p>ಶ್ರಾವಣಿ, ಸುಬ್ರಮಣ್ಯ, ನಂದಿನಿಗೆ ಈ ವಿಷಯ ತಿಳಿದಿಲ್ಲ. ವಿಜಯಾಂಬಿಕಾಳ ಮೋಸಕ್ಕೆ ಒಳಗಾದ ವೀರು ಮುಂದಿನ ನಿರ್ಧಾರ ಏನು ಎಂಬುವುದು ಕೂತುಹಲಕಾರಿ ಸಂಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>