ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 7–5–1968

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ, ಬೆಂಗಳೂರು, ಬಿದರೆಗಳಲ್ಲಿ ಕಾಂಗ್ರೆಸ್ಸಿಗೆ ಮೂರು ಸ್ಥಾನ ನಷ್ಟ

ಬೆಂಗಳೂರು, ಮೇ 6– ರಾಜ್ಯದ ವಿಧಾನಪರಿಷತ್ತಿಗೆ ಏಳು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಇಲ್ಲಿಯವರೆಗೆ 6 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ 3 ಸ್ಥಾನಗಳನ್ನು ಕಳೆದುಕೊಂಡಿದೆ.

ಕೋಲಾರ ಜಿಲ್ಲೆಯಿಂದ ಎಂ.ಸಿ. ಆಂಜನೇಯರೆಡ್ಡಿ

ಕೋಲಾರ, ಮೇ 6– ಕೋಲಾರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಿನ್ನೆ ನಡೆದ ಚುನಾವಣೆ
ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಎಂ.ಸಿ. ಆಂಜನೇಯರೆಡ್ಡಿ ಅವರು ಸಂಯುಕ್ತ ರಂಗದ ಪ್ರತಿಸ್ಪರ್ಧಿ ಶ್ರೀ ಆರ್. ವೆಂಕಟ
ರಾಮಯ್ಯನವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ.

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಶೇ 20 ಸೀಟು ಖೋತಾ?

ಬೆಂಗಳೂರು, ಮೇ 6– ರಾಜ್ಯದ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಕನಿಷ್ಠ ಶೇ 20 ರಷ್ಟಾದರೂ ಖೋತಾ ಮಾಡಲು ತೀವ್ರವಾಗಿ ಆಲೋಚಿಸಲಾಗಿದೆ.

ಕಾಗದ ಹತೋಟಿ ರದ್ದು

ನವದೆಹಲಿ, ಮೇ 6– ವಿವಿಧ ರೀತಿಯ ಕಾಗದದ ಮೇಲಿನ ಬೆಲೆ ನಿಯಂತ್ರಣವನ್ನು ಈ ಕೂಡಲೆ ರದ್ದುಗೊಳಿಸಿರುವುದಾಗಿ ಅಧಿಕೃತವಾಗಿ ಇಂದು ಇಲ್ಲಿ ಪ್ರಕಟಿಸಲಾಗಿದೆ.

ಪಾನನಿರೋಧ: ರಾಜ್ಯದ ನಿರ್ಧಾರಗಳಲ್ಲಿ ಕೇಂದ್ರ ಮಧ್ಯಪ್ರವೇಶ ಅಸಾಧ್ಯ

ನವದೆಹಲಿ, ಮೇ 6– ಪಾನನಿರೋಧವನ್ನು ಸಂಪೂರ್ಣ ಜಾರಿಗೆ ತರುವಂತೆ ರಾಜ್ಯ ಸರ್ಕಾರಗಳನ್ನು ಪ್ರೇರೇಪಿಸುವುದರಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಾಗದು ಎಂದು ಸಮಾಜ ಕಲ್ಯಾಣ ಶಾಖೆ ಸಚಿವ ಶ್ರೀ ಅಶೋಕ ಮೆಹ್ತಾ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT