‘ವಿಜಯ– ದಶಮಿ ಎರಡು ಪಾತ್ರಗಳ ಹೆಸರು. ವಿಹಾನ್ ನಾಯಕ. ವೈಭವಿ ಈಶ್ವರ್ ನಾಯಕಿ. ಧಾರಾವಾಹಿಯ ಕಥೆ ವಾರಾಣಸಿಯಿಂದ ಆರಂಭವಾಗುತ್ತದೆ. ಬಳಿಕ ಬೆಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಸಾಕಷ್ಟು ಸಾಹಸ ದೃಶ್ಯಗಳು ಈ ಧಾರಾವಾಹಿಯಲ್ಲಿ ಇರಲಿವೆ. ಇಲ್ಲಿ ನಾಯಕಿಯೂ ಹೊಡೆದಾಡುವ ದೃಶ್ಯವಿದೆ. ನೀರಿನೊಳಗೆ ಹೊಡೆದಾಡುವ ದೃಶ್ಯದೊಂದಿಗೆ ನಾಯಕಿಯ ಪ್ರವೇಶವಾಗುತ್ತದೆ’ ಎಂದರು ನಿರ್ದೇಶಕ ಶಶಿಧರ.