ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಸರಿಗಮಪ ಸೀಸನ್–17’ರಗ್ರಾಂಡ್ ಫಿನಾಲೆ ಇದೇ 20ರಂದು ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರು ಶ್ರೇಷ್ಠ ಗಾಯಕರನ್ನು ಆಯ್ಕೆ ಮಾಡಲಿದ್ದಾರೆ.
ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರ ಆಯ್ಕೆಗೆ ವಿವಿಧ ಸಂಕೇತಗಳನ್ನು ನೀಡಲಾಗಿದೆ. ಅವರಿಗೆ ನೀಡಲಾದ ಕೋಡ್ ಸಂಖ್ಯೆಗೆ ಮತ ನೀಡುವ ಮೂಲಕ ವಿಜೇತರ ಆಯ್ಕೆಗೆ ವೀಕ್ಷಕರೂ ನೆರವಾಗಬಹುದು ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧಿಗಳಾದ ಅಶ್ವಿನ್ ಶರ್ಮಾ(ASHW), ಶರಧಿ ಪಾಟೀಲ್ (SHAR), ಕಂಬದ ರಂಗಯ್ಯ (KAMB), ಕಿರಣ್ ಪಾಟೀಲ್ (KIRA), ಶ್ರೀನಿಧಿ ಶಾಸ್ತ್ರಿ (SHRE) ಇವರಿಗೆ ನೀಡಿರುವ ಕೋಡ್ ಸಂಖ್ಯೆ ಟೈಪ್ ಮಾಡಿ ಬೆಂಬಲಿಸಬಹುದು.
ಸೀಸನ್-17ರ ಮೆಗಾ ಆಡಿಷನ್ನಲ್ಲಿ10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅವರಲ್ಲಿ ಅತ್ಯುತ್ತಮ 30 ಮಂದಿ ಗಾಯಕರನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾರ್ಯಕ್ರಮದ ಪ್ರಸಾರವನ್ನು ಸರಿಗಮಪ ತಂಡ ಜುಲೈ ತಿಂಗಳಲ್ಲಿ ಮತ್ತೆ ಪ್ರಾರಂಭಿಸಿತು. ಶ್ರೀನಿಧಿ ಶಾಸ್ತ್ರಿ ಕ್ವಾರ್ಟರ್ ಫೈನಲ್ ಕಂತಿನಿಂದ ನೇರವಾಗಿ ಫಿನಾಲೆ ತಲುಪಿದ ಹೆಗ್ಗಳಿಕೆ ಪಡೆದಿದ್ದಾರೆ.