ಊಟ, ನೀರು ಹೇಗೆ ಮನುಷ್ಯನಿಗೆ ಅಗತ್ಯವೋ ಹಾಗೆ ಮತದಾನ ಮಾಡುವುದು ಕೂಡ ಅಗತ್ಯ. ವೋಟು ಮಾಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಬಳಸಬೇಕು. ಯಾವ ಅಭ್ಯರ್ಥಿಗಳೂ ಅರ್ಹರಿಲ್ಲ ಎಂದಾದರೆ, ಅದನ್ನು ಹೇಳಲು ನೋಟಾವನ್ನಾದರೂ ಚಲಾಯಿಸಬೇಕು. ಮುಖ್ಯವಾಗಿ ಯುವಜನರಂತೂ ತಪ್ಪದೇ ಮತದಾನ ಮಾಡಲೇಬೇಕು.
ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಗಳು ಹಿಂದೆ ಕೊಟ್ಟ ಭರವಸೆಗಳ ಕುರಿತು ತಿಳಿದುಕೊಳ್ಳಬಹುದು. ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎನ್ನುವುದನ್ನು ಗಮನಿಸಿ, ಯಾರು ಸೂಕ್ತ ಅಭ್ಯರ್ಥಿ ಎನ್ನುವುದನ್ನು ಕಂಡುಕೊಳ್ಳಬೇಕು.
ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು. ಯಾವುದೇ ಆಮಿಷಕ್ಕೆ ಒಳಗಾಗಬಾರದು.