ಅಣ್ಣ ರೇವಣ ಸಿದ್ದಯ್ಯ ಹಾಗೂ ನಾನು ಒಂದೇ ತರಗತಿಯಲ್ಲಿ ಇದ್ದೇವೆ. ‘ಪ್ರಜಾವಾಣಿ’ ಇಬ್ಬರಿಗೂ ಆರ್ಥಿಕ ನೆರವು ನೀಡಿದೆ. ನಾನು ಆ ಹಣದಿಂದ ಪುಸ್ತಕಗಳನ್ನು ಖರೀದಿಸಿದ್ದೇನೆ. ಸಂಕಷ್ಟದಲ್ಲಿ ನಮಗೆ ನೆರವು ಕಲ್ಪಿಸಿದೆ. ಪತ್ರಿಕೆಗೆ ಋಣಿ. –ಅಂಜಲಿ ಸಂಗಯ್ಯ ಮಠಪತಿ, ಬೇಮಳಖೇಡ, ತಾ. ಚಿಟಗುಪ್ಪ, ಬೀದರ್ ಜಿಲ್ಲೆ
* ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ
‘ಪ್ರಜಾವಾಣಿ’ ಪ್ರೋತ್ಸಾಹ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಪ್ರತಿಭೆಗೆ ಜಾತಿ ಧರ್ಮದ ಸೋಂಕಿಲ್ಲ. ನೂರಾರು ಪ್ರತಿಭಾವಂತರಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತಿದೆ. –ಸಿ.ಎಸ್.ಶಿವರಾಜ್, ಚಿಮಾಚನಹಳ್ಳಿ, ದೇವನಹಳ್ಳಿ ತಾಲ್ಲೂಕು.