<p>ಬಾದಾಮಿ: ಬೇಸಿಗೆಯಲ್ಲಿ ಪಕ್ಷಿಗಳು ನೀರು ಕುಡಿಯುವುದಕ್ಕಾಗಿ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಭಾನುವಾರ ಸಿಬ್ಬಂದಿಯೊಬ್ಬರು ಗಿಡಗಳಿಗೆ ಮಣ್ಣಿನ ಮಡಕೆಗಳ ನೆಲುವುಗಳನ್ನು ಕಟ್ಟಿದರು.</p>.<p>‘ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಸಿಗುತ್ತಿಲ್ಲ. ಪಕ್ಷಿಗಳ ಸಂರಕ್ಷಣೆಗಾಗಿ ಎರಡು ವರ್ಷಗಳಿಂದ 15-20 ಗಿಡಗಳಿಗೆ ಮಣ್ಣಿನ ಮಡಕೆಗಳ ನೆಲುವುಗಳನ್ನು ಕಟ್ಟಲಾಗುತ್ತಿದೆ ’ ಎಂದು ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.</p>.<p>‘ಮಧ್ಯಾಹ್ನ ನೆರಳನ್ನು ಆಶ್ರಯಿಸಿ ಮತ್ತು ಸಂಜೆ ವಿಶ್ರಾಂತಿಗೆ ಮರಗಳಿಗೆ ಗುಂಪುಗುಂಪಾಗಿ ಪಕ್ಷಿಗಳು ಬರುತ್ತವೆ. ನೀರನ್ನು ಕುಡಿದು ಸಂಭ್ರಮಿಸುತ್ತವೆ. ನಿತ್ಯ ನೀರನ್ನು ಹಾಕುತ್ತೇವೆ ’ ಎಂದು ತಾಂತ್ರಿಕ ನೌಕರ ಬಿ.ಎ.ಅಂಗಡಿ ಹೇಳಿದರು.</p>.<p>ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್, ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ವರ್ಗದವರು ನಿತ್ಯ ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸಿ ನೀರು ಹಾಕುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-19-1969235113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ಬೇಸಿಗೆಯಲ್ಲಿ ಪಕ್ಷಿಗಳು ನೀರು ಕುಡಿಯುವುದಕ್ಕಾಗಿ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಭಾನುವಾರ ಸಿಬ್ಬಂದಿಯೊಬ್ಬರು ಗಿಡಗಳಿಗೆ ಮಣ್ಣಿನ ಮಡಕೆಗಳ ನೆಲುವುಗಳನ್ನು ಕಟ್ಟಿದರು.</p>.<p>‘ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಸಿಗುತ್ತಿಲ್ಲ. ಪಕ್ಷಿಗಳ ಸಂರಕ್ಷಣೆಗಾಗಿ ಎರಡು ವರ್ಷಗಳಿಂದ 15-20 ಗಿಡಗಳಿಗೆ ಮಣ್ಣಿನ ಮಡಕೆಗಳ ನೆಲುವುಗಳನ್ನು ಕಟ್ಟಲಾಗುತ್ತಿದೆ ’ ಎಂದು ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.</p>.<p>‘ಮಧ್ಯಾಹ್ನ ನೆರಳನ್ನು ಆಶ್ರಯಿಸಿ ಮತ್ತು ಸಂಜೆ ವಿಶ್ರಾಂತಿಗೆ ಮರಗಳಿಗೆ ಗುಂಪುಗುಂಪಾಗಿ ಪಕ್ಷಿಗಳು ಬರುತ್ತವೆ. ನೀರನ್ನು ಕುಡಿದು ಸಂಭ್ರಮಿಸುತ್ತವೆ. ನಿತ್ಯ ನೀರನ್ನು ಹಾಕುತ್ತೇವೆ ’ ಎಂದು ತಾಂತ್ರಿಕ ನೌಕರ ಬಿ.ಎ.ಅಂಗಡಿ ಹೇಳಿದರು.</p>.<p>ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್, ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ವರ್ಗದವರು ನಿತ್ಯ ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸಿ ನೀರು ಹಾಕುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-19-1969235113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>