ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಆನೆ ಸಾವು

Last Updated 3 ನವೆಂಬರ್ 2020, 14:46 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೊಳೆಯೂರು ವಲಯ ವನ್ಯಜೀವಿ ಅರಣ್ಯ ವ್ಯಾಪ್ತಿಯ ನಡಾಡಿ ಗ್ರಾಮದ ಬಳಿ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ 13 ವರ್ಷದ ಗಂಡಾನೆಯೊಂದು ಮಂಗಳವಾರ ಮೃತಪಟ್ಟಿದೆ.

ಕಾಡಿನಿಂದ ಹೊರ ಬಂದ ಆನೆ, ಮತ್ತೆಕಾಡಿನೊಳಗೆ ಹೋಗಲು ಯತ್ನಿಸಿ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿಕೊಂಡಿದೆ. ಅದರಿಂದ ಪಾರಾಗಲು ಸಾಧ್ಯವಾಗದೆ ಸ್ಥಳದಲ್ಲಿ ಅಸುನೀಗಿದೆ.

ಕೆಲ ವರ್ಷಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿಯೂ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಆನೆಯೊಂದು ಮೃತಪಟ್ಟಿತ್ತು.

ಪಶುವೈದ್ಯ ಡಾ.ನಾಗರಾಜ್ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಸಹಾಯಕ ಅರಣ್ಯಾಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿ ಪುಟ್ಟರಾಜು ಇದ್ದರು.

‘ನಡಾಡಿ ವ್ಯಾಪ್ತಿಯಲ್ಲಿ ಆನೆಗಳು ಕಾಡಿನಿಂದ ಹೊರ ಹೋಗುವುದು ಮತ್ತು ಬರುವುದು ಸಾಮಾನ್ಯವಾಗಿತ್ತು. ತೀವ್ರಮಳೆಹಾಗೂಕಪ್ಪು ಮಣ್ಣು ಇದ್ದ ಸ್ಥಳವಾಗಿದ್ದರಿಂದ ರೈಲ್ವೆ ಬ್ಯಾರಿಕೇಡ್‌ ದಾಟುವ ಸಂದರ್ಭದಲ್ಲಿ ಆನೆಯ ಕಾಲು ಜಾರಿ ಬಿದ್ದಿದೆ.ಮೇಲೇಳಲು ಸಾಧ್ಯವಾಗದೆ ಮೃತಪಟ್ಟಿದೆ’ ಎಂದು ಸ್ಥಳೀಯ ರೈತ ನಾಗರಾಜು ಹೇಳಿದರು.

ಮೊಳೆಯೂರು ಮತ್ತು ಕೆಲ ಭಾಗಗಳಲ್ಲಿ ಆನೆಗಳು ಆಗಾಗ್ಗೆ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿರುವ ಮತ್ತು ಡಿಕ್ಕಿ ಹೊಡೆಯುತ್ತಿದ್ದ ವಿಡಿಯೊಗಳು ಹರಿದಾಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT