<p>‘ಸಿಬ್ಬಂದಿಯು ಹೆಚ್ಚೆಂದರೆ, ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ ಎಂದು ಸೂಚಿಸುತ್ತಾರೆ. ಚಾರಣಿಗರು ದಹನೀಯ ವಸ್ತುಗಳು, ಸಿಗರೇಟ್ ಮತ್ತು ಮದ್ಯ ತೆಗೆದುಕೊಂಡು ಹೋಗದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ, ಚಾರಣ ಕೈಗೊಳ್ಳುವವರ ಜತೆಯಲ್ಲಿ ವಾಚರ್ಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವುದಿಲ್ಲ. ಇಲ್ಲವೇ ಚಾರಣದ ತಂಡದಲ್ಲಿ ತರಬೇತಿ ಪಡೆದ ಮತ್ತು ನೋಂದಣಿ ಮಾಡಿಕೊಂಡ ಮಾರ್ಗದರ್ಶಿ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಈ ಮೂಲಕ ಚಾರಣಿಗರ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ’ ಎಂಬುದು ಅವರ ವಿವರಣೆ.</p>.<p>ಮತ್ತೊಬ್ಬ ಚಾರಣಿಗ ಸುನಿಲ್ ರಾಮಕೃಷ್ಣ, ‘ಹಲವು ಚಾರಣ ತಾಣಗಳ ಚೆಕ್ಪೋಸ್ಟ್ಗಳಲ್ಲಿ ಚಾರಣಿಗರ ಬ್ಯಾಗ್ಗಳನ್ನು ಅಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧ–ಸಲಕರಣೆಗಳು, ಹೆಚ್ಚುವರಿ ತಿಂಡಿ–ತಿನಿಸನ್ನೂ ಒಯ್ಯಲು ಬಿಡುವುದಿಲ್ಲ. ತುರ್ತು ಸಂದರ್ಭದಲ್ಲಿ ಅತ್ಯಗತ್ಯವಾದ ಈ ವಸ್ತುಗಳನ್ನು ಸಿಬ್ಬಂದಿಯು ಚೆಕ್ಪೋಸ್ಟ್ನಲ್ಲಿಯೇ ಇರಿಸಿಕೊಳ್ಳುವುದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಎಸ್ಒಪಿ ರಚನೆ ವೇಳೆ ಇಲಾಖೆ ಇದೆಲ್ಲವನ್ನೂ ಪರಿಗಣಿಸಬೇಕು’ ಎನ್ನುತ್ತಾರೆ.</p>.<p>ಸುರಕ್ಷಿತ ಚಾರಣ ಕೈಗೊಳ್ಳುವ ಬಗ್ಗೆ ಪೋರ್ಟಲ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಎಲ್ಲ ಅಂಶಗಳ ಕುರಿತು ಪ್ರತಿಕ್ರಿಯೆ ಪಡೆಯಲು ಅರಣ್ಯ ಭವನ ಕಚೇರಿಗೆ ಹಲವು ಬಾರಿ ಕರೆ ಮಾಡಿದರೂ, ಯಾರೂ ಕರೆ ಸ್ವೀಕರಿಸಲಿಲ್ಲ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-51-2039411928</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಿಬ್ಬಂದಿಯು ಹೆಚ್ಚೆಂದರೆ, ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ ಎಂದು ಸೂಚಿಸುತ್ತಾರೆ. ಚಾರಣಿಗರು ದಹನೀಯ ವಸ್ತುಗಳು, ಸಿಗರೇಟ್ ಮತ್ತು ಮದ್ಯ ತೆಗೆದುಕೊಂಡು ಹೋಗದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ, ಚಾರಣ ಕೈಗೊಳ್ಳುವವರ ಜತೆಯಲ್ಲಿ ವಾಚರ್ಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವುದಿಲ್ಲ. ಇಲ್ಲವೇ ಚಾರಣದ ತಂಡದಲ್ಲಿ ತರಬೇತಿ ಪಡೆದ ಮತ್ತು ನೋಂದಣಿ ಮಾಡಿಕೊಂಡ ಮಾರ್ಗದರ್ಶಿ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಈ ಮೂಲಕ ಚಾರಣಿಗರ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ’ ಎಂಬುದು ಅವರ ವಿವರಣೆ.</p>.<p>ಮತ್ತೊಬ್ಬ ಚಾರಣಿಗ ಸುನಿಲ್ ರಾಮಕೃಷ್ಣ, ‘ಹಲವು ಚಾರಣ ತಾಣಗಳ ಚೆಕ್ಪೋಸ್ಟ್ಗಳಲ್ಲಿ ಚಾರಣಿಗರ ಬ್ಯಾಗ್ಗಳನ್ನು ಅಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧ–ಸಲಕರಣೆಗಳು, ಹೆಚ್ಚುವರಿ ತಿಂಡಿ–ತಿನಿಸನ್ನೂ ಒಯ್ಯಲು ಬಿಡುವುದಿಲ್ಲ. ತುರ್ತು ಸಂದರ್ಭದಲ್ಲಿ ಅತ್ಯಗತ್ಯವಾದ ಈ ವಸ್ತುಗಳನ್ನು ಸಿಬ್ಬಂದಿಯು ಚೆಕ್ಪೋಸ್ಟ್ನಲ್ಲಿಯೇ ಇರಿಸಿಕೊಳ್ಳುವುದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಎಸ್ಒಪಿ ರಚನೆ ವೇಳೆ ಇಲಾಖೆ ಇದೆಲ್ಲವನ್ನೂ ಪರಿಗಣಿಸಬೇಕು’ ಎನ್ನುತ್ತಾರೆ.</p>.<p>ಸುರಕ್ಷಿತ ಚಾರಣ ಕೈಗೊಳ್ಳುವ ಬಗ್ಗೆ ಪೋರ್ಟಲ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಎಲ್ಲ ಅಂಶಗಳ ಕುರಿತು ಪ್ರತಿಕ್ರಿಯೆ ಪಡೆಯಲು ಅರಣ್ಯ ಭವನ ಕಚೇರಿಗೆ ಹಲವು ಬಾರಿ ಕರೆ ಮಾಡಿದರೂ, ಯಾರೂ ಕರೆ ಸ್ವೀಕರಿಸಲಿಲ್ಲ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-51-2039411928</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>