‘ಬ್ಯಾಂಕಿನಲ್ಲಿ ಸಿಕ್ಕ ಹಣ ಅಭಯ ಪಾಟೀಲಗೆ ಸೇರಿದ್ದು ಎನ್ನುವುದು ಖಚಿತವಾದಂತಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಲೋಕಾಯುಕ್ತಕ್ಕೆ ಆಸ್ತಿ ವಿವರ ನೀಡುವ ಸಂದರ್ಭದಲ್ಲಿ ಈ ಮಾಹಿತಿಯನ್ನು ಅವರು ಕೊಟ್ಟಿಲ್ಲ. ಇದು ಕೂಡ ಅಪರಾಧವೇ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಸುಜಿತ್ ಮುಳಗುಂದ ಒತ್ತಾಯಿಸಿದರು.