ಹಚ್ಚ ಹಸಿರಿನ ಬೃಹತ್ ಮರಗಳನ್ನು ಹೊಂದಿರುವ ಈ ಅರಣ್ಯವು ಮಲೆನಾಡು ಪ್ರದೇಶ, ದಕ್ಷಿಣ ಕರ್ನಾಟಕ ಸುತ್ತಾಡಿದ ಅನುಭವ ಸಿಗುತ್ತದೆ. ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಯೋಜನೆಗಳು, ನೀರು ,ಮಣ್ಣು ಮರ ಗಿಡಗಳ ಸಂರಕ್ಷಣೆ ಕ್ರಮಗಳನ್ನು ಕೈಗೊಂಡಿದ್ದು, ಸ್ಥಳಿಯ ಗ್ರಾಮಗಳ ಸಹಕಾರದಿಂದ ಅರಣ್ಯ ಪ್ರದೇಶವಾಗಿ ಬೆಳೆಯಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಕಾಳಜಿ ವಹಿಸಿ ಈ ಸ್ಥಳವನ್ನು ಅಭಿವೃದ್ಧಿಪಡಿಸಿದರೆ, ವಲಸೆ ಹಕ್ಕಿಗಳಿಗೆ ವಾಸಸ್ಥಾನವಾಗಿ, ಪ್ರವಾಸಿಗರಿಗೆ ಶುದ್ಧ ಪರಿಸರ ತಾಣವಾಗಬಲ್ಲದು ಎಂಬುದು ಮುದ್ದಲಗುಂದಿ ಗ್ರಾಮಸ್ಥರ ಹೇಳಿಕೆ.