ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ರಾಜೀನಾಮೆಗೆ ಡಿಎಂಕೆ ಒತ್ತಾಯ: ಎಐಎಡಿಎಂಕೆ ಆಕ್ಷೇಪ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷ ನಿಯೋಗವನ್ನು ಪ್ರಧಾನಿ ಭೇಟಿಯಾಗದಿದ್ದರೆ ತಮಿಳುನಾಡಿನ ಸಂಸದರು ರಾಜೀನಾಮೆ ನೀಡಬೇಕು ಎನ್ನುವ ಡಿಎಂಕೆ ಸಲಹೆಯನ್ನು ಎಐಎಡಿಎಂಕೆ ತಿರಸ್ಕರಿಸಿದೆ.

17 ವರ್ಷಗಳ ಕಾಲ ಕೇಂದ್ರ ಸರ್ಕಾರದ ಭಾಗವಾಗಿದ್ದಾಗ ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಏನು ಮಾಡಿತ್ತು ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಅದು ಒತ್ತಾಯಿಸಿದೆ.

‘ಕೇಂದ್ರ ಸರ್ಕಾರದಲ್ಲಿ ಡಿಎಂಕೆ ನಾಯಕರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಡಿಎಂಕೆ ಭಾಗಿಯಾಗಿತ್ತು. ಬಳಿಕ ಯುಪಿಎ 1 ಮತ್ತು ಯುಪಿಎ 2 ಸರ್ಕಾರದಲ್ಲೂ ಸಂಪುಟ ದರ್ಜೆಯ ಖಾತೆಗಳನ್ನು ಡಿಎಂಕೆ ನಾಯಕರು ಪಡೆದುಕೊಂಡಿದ್ದರು. 17 ವರ್ಷಗಳ ಕಾಲ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಅಧಿಕಾರವನ್ನು ಅನುಭವಿಸಿದ ಡಿಎಂಕೆ ನಾಯಕರು ತಮಿಳುನಾಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು ಎನ್ನುವುದನ್ನು ತಿಳಿಸಲಿ’ ಎಂದು ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮೀನುಗಾರಿಕೆ ಸಚಿವ ಡಿ. ಜಯಕುಮಾರ್‌ ತಿಳಿಸಿದ್ದಾರೆ.

‘ಕಾವೇರಿ ವಿಷಯದಲ್ಲಿ ರಾಜಕೀಯ ಬೇಡ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹಂಚಿಕೆಯಾಗಿರುವ ನೀರು ತಮಿಳುನಾಡಿಗೆ ದೊರೆಯಬೇಕು. ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ಕಾವೇರಿ ನದಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರವನ್ನು ಒತ್ತಾಯಿಸಲು ತೆರಳುವ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಭೇಟಿಯಾಗದಿದ್ದರೆ ತಮಿಳುನಾಡಿನ ಸಂಸದರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಟ್ಯಾಲಿನ್‌ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT