ಬುಧವಾರ, 10 ಜೂನ್ 2026
×
ADVERTISEMENT
ಆಳ–ಅಗಲ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಕೂಗು ತೀವ್ರ
ಆಳ–ಅಗಲ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಕೂಗು ತೀವ್ರ
ಎಲ್ಲವೂ ಹುಬ್ಬಳ್ಳಿ ಕೇಂದ್ರಿತ; ಧಾರವಾಡದಲ್ಲಿ ಸೊರಗಿದ ಆಡಳಿತ
ಫಾಲೋ ಮಾಡಿ
Published 21 ಮೇ 2026, 0:15 IST
Last Updated 21 ಮೇ 2026, 0:15 IST
Comments
ಬದಲಾದ ಬಿಜೆಪಿ ನಿಲುವು:‌
ಮೊದಲು ವಿಭಜನೆ ಪರವಾಗಿದ್ದ ಪಾಲಿಕೆಯ ಬಿಜೆಪಿ ಸದಸ್ಯರ ನಿಲುವು ಈಗ ಏಕಾಏಕಿ ಬದಲಾಗಿದೆ. ‘ವಿಭಜನೆಯಾದರೆ ಪಾಲಿಕೆಗೆ ಅನುದಾನ ಕಡಿಮೆ ಆಗಲಿದೆ’ ಎಂದು ಹೇಳಿ ಅವರು ಏಪ್ರಿಲ್‌ 30ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ‘ಪಾಲಿಕೆ ವಿಭಜನೆ’ ಕೈಬಿಡಲು ಠರಾವು ಮಾಡಿದರು. ಇದರ ಬೆನ್ನಲ್ಲೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ಹೋರಾಟ ಶುರುವಾಗಿದೆ.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಗ್ರಹಿಸಿ ಹೋರಾಟಗಾರರು ಈಚೆಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಈಚೆಗೆ ಪ್ರತಿಭಟನೆ ನಡೆಸಿದರು
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಗ್ರಹಿಸಿ ಹೋರಾಟಗಾರರು ಈಚೆಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಈಚೆಗೆ ಪ್ರತಿಭಟನೆ ನಡೆಸಿದರು
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಶುಕ್ರವಾರ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಶುಕ್ರವಾರ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು

ಪ್ರತ್ಯೇಕ ಪಾಲಿಕೆ ಪ್ರಸ್ತಾವ ಕೈಬಿಡುವಂತೆ ರಾಜ್ಯಪಾಲರಿಗೆ ಶಾಸಕ ಅರವಿಂದ ಬೆಲ್ಲದ ಅವರು ಬರೆದಿರುವ ಪತ್ರವನ್ನು ವಾಪಸ್‌ ಪಡೆಯಬೇಕು ಧಾರವಾಡದಲ್ಲಿ ಚಂದ್ರಕಾಂತ ಬೆಲ್ಲದ ಅವರ ನಿವಾಸ ಮುಂದೆ ಈಚೆಗೆ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರು
ಪ್ರತ್ಯೇಕ ಪಾಲಿಕೆ ಪ್ರಸ್ತಾವ ಕೈಬಿಡುವಂತೆ ರಾಜ್ಯಪಾಲರಿಗೆ ಶಾಸಕ ಅರವಿಂದ ಬೆಲ್ಲದ ಅವರು ಬರೆದಿರುವ ಪತ್ರವನ್ನು ವಾಪಸ್‌ ಪಡೆಯಬೇಕು ಧಾರವಾಡದಲ್ಲಿ ಚಂದ್ರಕಾಂತ ಬೆಲ್ಲದ ಅವರ ನಿವಾಸ ಮುಂದೆ ಈಚೆಗೆ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರು
ರಾಜ್ಯಪಾಲರಿಗೆ ಪತ್ರ:
ಪ್ರತ್ಯೇಕ ಪಾಲಿಕೆ ಪ್ರಸ್ತಾವವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ರಾಜ್ಯಪಾಲರಿಗೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರು ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು.
ವೆಂಕಟೇಶ ಮಾಚಕನೂರ
ವೆಂಕಟೇಶ ಮಾಚಕನೂರ
ಪಾಲಿಕೆ ವಿಭಜನೆಯಾಗದಿದ್ದರೆ ಕೇಂದ್ರದ 16ನೇ ಹಣಕಾಸು ಆಯೋಗದಡಿ ಈ ಪಾಲಿಕೆಗೆ ಹೆಚ್ಚು ಅನುದಾನ ಲಭಿಸಲಿದೆ ಎಂಬುದು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ. ವಿಶೇಷ ಅನುದಾನಕ್ಕೆ ಗುರುತಿಸಿರುವ ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಇಲ್ಲ. ಪರಿಣಾಮಕಾರಿ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯಾಗಲೇಬೇಕು
ವೆಂಕಟೇಶ ಮಾಚಕನೂರ, ಪ್ರತ್ಯೇಕ ಪಾಲಿಕೆ ಹೋರಾಟಗಾರ
ಬಿ.ಡಿ.ಹಿರೇಮಠ‌ ವಕೀಲ
ಬಿ.ಡಿ.ಹಿರೇಮಠ‌ ವಕೀಲ
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಸರ್ವಾನುಮತದ ನಿರ್ಣಯವಾಗಿದೆ. ರಾಜ್ಯಪಾಲರು ಪ್ರಸ್ತಾವಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಯಾವ ಪಕ್ಷದವರೂ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ
ಬಿ.ಡಿ.ಹಿರೇಮಠ, ವಕೀಲ
ಈರೇಶ ಅಂಚಟಗೇರಿ
ಈರೇಶ ಅಂಚಟಗೇರಿ
ಪಾಲಿಕೆಯನ್ನು ಒಡೆದರೆ ಧಾರವಾಡ ಸಣ್ಣ ಪಾಲಿಕೆಯಾಗುತ್ತದೆ. ಇಲ್ಲಿನ ಜನಸಂಖ್ಯೆ ಕಡಿಮೆ ಇದೆ. ಕೇಂದ್ರ ಸರ್ಕಾರವು ಜನಸಂಖ್ಯೆ ಆಧರಿಸಿ ಯೋಜನೆಗಳಿಗೆ ಅನುದಾನದ ಪ್ರಮಾಣ ನಿಗದಿಪಡಿಸುತ್ತದೆ. ಇಲ್ಲಿಗೆ ಕಡಿಮೆ ಅನುದಾನ ಲಭಿಸುತ್ತದೆ. ಎರಡೂ ನಗರಗಳು ಕೂಡುವ ಹಂತದಲ್ಲಿವೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ಬೃಹತ್‌ ಪಾಲಿಕೆಯಾಗಿಸುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು
ಈರೇಶ ಅಂಚಟಗೇರಿ, ಸಭಾ ನಾಯಕ ಮಹಾನಗರ ಪಾಲಿಕೆ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಪ್ರಸ್ತಾವ ಅನುಮೋದಿಸುವಂತೆ ಬೆಂಗಳೂರಿನ ಲೋಕಭವನದಲ್ಲಿ ಮಂಗಳವಾರ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಮನವಿ ಮಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್‌.ನೇಗಿನಾಳ ಶಾಸಕ ಅರವಿಂದ ಬೆಲ್ಲದ ಗುರುರಾಜ ಹುಣಶಿಮರದ ಹಿರಿಯ ವಕೀಲ ಬಿ.ಡಿ.ಹಿರೇಮಠ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದ್ದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಪ್ರಸ್ತಾವ ಅನುಮೋದಿಸುವಂತೆ ಬೆಂಗಳೂರಿನ ಲೋಕಭವನದಲ್ಲಿ ಮಂಗಳವಾರ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಮನವಿ ಮಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್‌.ನೇಗಿನಾಳ ಶಾಸಕ ಅರವಿಂದ ಬೆಲ್ಲದ ಗುರುರಾಜ ಹುಣಶಿಮರದ ಹಿರಿಯ ವಕೀಲ ಬಿ.ಡಿ.ಹಿರೇಮಠ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದ್ದರು.

ಆಡಳಿತದಲ್ಲಿ ಹಿಡಿತ ಉತ್ತಮ ಆಡಳಿತಕ್ಕಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವುದು ಅಗತ್ಯವಾಗಿದೆ. ಆಡಳಿತ ವಿಕೇಂದ್ರೀಕರಣ ಮತ್ತು ಧಾರವಾಡದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರವು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು
ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಧಾರವಾಡ
ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮನವಿ ಸಲ್ಲಿಸಿದರು. ಶಾಸಕರಾದ ಪ್ರಸಾದ್ ಅಬ್ಬಯ್ ಎನ್‌.ಎಚ್.ಕೋನರಡ್ಡಿ ಹೋರಾಟಗಾರರಾದ ಬಿ.ಡಿ ಹಿರೇಮಠ ವೆಂಕಟೇಶ್ ಮಾಚಕನೂರ ಇದ್ದರು.
ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮನವಿ ಸಲ್ಲಿಸಿದರು. ಶಾಸಕರಾದ ಪ್ರಸಾದ್ ಅಬ್ಬಯ್ ಎನ್‌.ಎಚ್.ಕೋನರಡ್ಡಿ ಹೋರಾಟಗಾರರಾದ ಬಿ.ಡಿ ಹಿರೇಮಠ ವೆಂಕಟೇಶ್ ಮಾಚಕನೂರ ಇದ್ದರು.
ಪಾಲಿಕೆ 1962ರಲ್ಲಿ ಅಸ್ತಿತ್ವಕ್ಕೆ 
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ 1962ರಲ್ಲಿ ಅಸ್ತಿತ್ವಕ್ಕೆ ಬಂತು. ಅದಕ್ಕೂ ಮೊದಲು ಎರಡೂ ನಗರಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಸರ್‌ ಸಿದ್ದಪ್ಪ ಕಂಬಳಿ ರಾವ್‌ ಬಹದ್ದೂರ್‌ ಬಿ.ಎಲ್‌.ಪಾಟೀಲ ದ.ಪ.ಕರ್ಮಕರ ಜಿ.ಆರ್‌.ನಲವಡಿ ಮೊದಲಾದ ಘಟಾನುಘಟಿ ನಾಯಕರು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅಸ್ವಿತ್ವಕ್ಕೆ ತರಲು ಶ್ರಮಿಸಿದ್ದರು. ಜಿ.ಆರ್‌.ನಲವಡಿ ಅವರು ಮಹಾನಗರ ಪಾಲಿಕೆಯ ಪ್ರಥಮ ಮೇಯರ್‌ ಆಗಿ ಕಾರ್ಯನಿರ್ವಹಿಸಿದ್ದರು.
ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆಯ ನಕ್ಷೆ

ಹುಬ್ಬಳ್ಳಿ–ಧಾರವಾಡ ಮಹಾನಗರ
ಪಾಲಿಕೆಯ ನಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT