<p>ದಶಕಗಳ ಹಿಂದಿನ ಮಾತು. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 200–250 ರನ್ಗಳ ಮೊತ್ತವೆಂದರೆ ದೊಡ್ಡ ಸವಾಲು ಎಂದೇ ಅರ್ಥ. ಆದರೆ ಟಿ20 ಕ್ರಿಕೆಟ್ ಬಂದ ನಂತರ ವ್ಯಾಖ್ಯಾನ ಪೂರ್ಣ ಬದಲಾಗಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಕ್ರಿಕೆಟ್ನಲ್ಲಿ ‘ಮಾಯಾಲೋಕ’ವನ್ನೇ ಸೃಷ್ಟಿಸಿಬಿಟ್ಟಿದೆ. ಕೇವಲ 20 ಓವರ್ಗಳಲ್ಲಿ 300 ರನ್ಗಳ ಮೊತ್ತ ಪೇರಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 250ರ ಗಡಿ ದಾಟಿ ತೋರಿಸಿದ್ದೂ ಆಗಿದೆ.</p>.<p>15ರ ಪೋರ ವೈಭವ್ ಸೂರ್ಯವಂಶಿಯ ಸಿಕ್ಸರ್ಗಳು ಚಮತ್ಕಾರದಂತೆ ಭಾಸವಾಗುತ್ತಿವೆ. ಇನ್ನೊಂದೆಡೆ ಜಸ್ಪ್ರೀತ್ ಬೂಮ್ರಾ ಅವರಂತಹ ದಿಗ್ಗಜ ಬೌಲರ್ ಮೊದಲ ನಾಲ್ಕು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಪುನರಾಗಮನ ಮಾಡಿದ ಮೊಹ್ಸಿನ್ ಖಾನ್ ಅವರಂತಹ ಬೌಲರ್ಗಳು ಸಫಲರಾದರು. ಕಳೆದ 44 ದಿನಗಳಿಂದ ನಡೆಯುತ್ತಿರುವ ಐಪಿಎಲ್ನಲ್ಲಿ ಇಂತಹ ಹತ್ತಾರು ಅಚ್ಚರಿಗಳು ಘಟಿಸಿವೆ. ಕೇವಲ ಆಟವಷ್ಟೇ ಅಲ್ಲ. ಒಂದಿಷ್ಟು ಅನೂಹ್ಯ ಸಂಗತಿಗಳೂ ಈ ಬಾರಿಯ ಐಪಿಎಲ್ನಲ್ಲಿ ಗಮನ ಸೆಳೆದಿವೆ.</p>.<p><strong>ಶಾಸಕರಿಗೆ ಪಾಸ್; ಫೈನಲ್ಗೆ ಗೇಟ್ಪಾಸ್!</strong></p>.<p>ಭಾರತದಲ್ಲಿ ಇವತ್ತು ಎಲ್ಲರೂ ಕ್ರಿಕೆಟ್ನೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ವಯಸ್ಸು, ಧರ್ಮ, ಜಾತಿ, ಭಾಷೆ, ವೃತ್ತಿ ಮತ್ತು ಭೌಗೋಳಿಕತೆಯನ್ನೂ ಮೀರಿದ ಆಕರ್ಷಣೆಯನ್ನು ಕ್ರಿಕೆಟ್ ಇವತ್ತು ಗಳಿಸಿದೆ. ಇಷ್ಟೆಲ್ಲ ಇದ್ದ ಮೇಲೆ ರಾಜಕಾರಣಿಗಳು ಬಿಡುತ್ತಾರೆಯೇ?</p>.<p>ಅದಕ್ಕಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ತಮಗೂ ಉಚಿತ ಟಿಕೆಟ್ ನೀಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿಯೇ ಬೇಡಿಕೆ ಇಟ್ಟರು. ಅದಕ್ಕೆ ವಿಧಾನಸಭಾಧ್ಯಕ್ಷರು, ಉಪಮುಖ್ಯಮಂತ್ರಿಗಳು ಮತ್ತು ವಿಪಕ್ಷ ನಾಯಕರು ಒಕ್ಕೊರಲ ಬೆಂಬಲ ಸೂಚಿಸಿದರು. ಇದಕ್ಕೆ ಮಣಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಇಲ್ಲಿ ನಡೆದ ಐದು ಐಪಿಎಲ್ ಪಂದ್ಯಗಳಿಗೂ ಪ್ರತಿಯೊಬ್ಬ ಶಾಸಕ, ಸಂಸದ, ಸಚಿವರೆಲ್ಲರಿಗೂ ತಲಾ ಮೂರು ಉಚಿತ ಟಿಕೆಟ್ಗಳನ್ನು ವಿತರಿಸಿದವು.</p>.<p>ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರ ನಂತರ ಭದ್ರತೆಯ ‘ಕಾರಣ’ ನೀಡಿ ಪಂದ್ಯಗಳಿಗೆ ಅನುಮತಿ ನೀಡಿರಲಿಲ್ಲ. ಆದರೆ ಐಪಿಎಲ್ ಪಂದ್ಯಗಳಿಗಾಗಿ ಅನುಮತಿ ಕೊಡಲು ಸರ್ಕಾರವು ವಿಧಿಸಿದ ಎಲ್ಲ ಶರತ್ತುಗಳನ್ನು ಪೂರೈಸುವತ್ತ ಕೆಎಸ್ಸಿಎ ಕಾರ್ಯೋನ್ಮುಖವಾಯಿತು. ಅದನ್ನೇ ದಾಳವಾಗಿಟ್ಟುಕೊಂಡ ಶಾಸಕರು ಟಿಕೆಟ್ಗಳಿಗೂ ಬೇಡಿಕೆಯಿಟ್ಟರು. ಅದರ ಫಲವಾಗಿ ಇಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಸ್ಥಳಾಂತರಗೊಂಡಿತು. ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.</p>.<p><strong>ವಿವಾದದ ‘ಹೊಗೆ’</strong></p>.<p>ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಹೋಗುವವರು ಅಥವಾ ವರದಿ ಮಾಡಲು ಹೋಗುವ ಮಾಧ್ಯಮದವರನ್ನು ನಖಶಿಖಾಂತ ಪರಿಶೀಲಿಸಲಾಗುತ್ತದೆ. ನಾಣ್ಯವನ್ನೂ ಒಳಗೆ ಒಯ್ಯಲು ಬಿಡುವುದಿಲ್ಲ. ಸಿಗರೇಟ್, ತಂಬಾಕು ಅಂತಹ ವಸ್ತುಗಳನ್ನೂ ಬಿಡುವುದಿಲ್ಲ. ಆದರೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಡ್ರೆಸಿಂಗ್ರೂಮ್ನಲ್ಲಿ ‘ಇ ಸಿಗರೇಟ್’ ಸೇದಿ ಹೊಗೆ ಬಿಡುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸಿದವು.</p>.<p>ಭಾರತದಲ್ಲಿ ಇ ಸಿಗರೇಟ್ ಬಳಕೆ, ಉತ್ಪಾದನೆ ಮತ್ತು ಮಾರಾಟ ನಿಷಿದ್ಧ. ಅಂತಹದರಲ್ಲಿ ಕೋಟ್ಯಂತರ ಜನರು ಟಿ.ವಿ., ಮೊಬೈಲ್ ಆ್ಯಪ್ ಮೂಲಕ ವೀಕ್ಷಿಸಿದ ಐಪಿಎಲ್ ಪಂದ್ಯದಲ್ಲಿ ಖ್ಯಾತ ಆಟಗಾರ ಪರಾಗ್ ಇ ಸಿಗರೇಟ್ ಬಳಸಿದ್ದು ವಿವಾದ ಹುಟ್ಟುಹಾಕಿತು. ಅವರಿಗೆ ಕಠಿಣ ಶಿಕ್ಷೆಯಾಗುವ ನಿರೀಕ್ಷೆ ಮೂಡಿತ್ತು. ಆದರೆ ಬಿಸಿಸಿಐ ಅವರಿಗೆ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಿ ಸುಮ್ಮನಾಯಿತು. ತಂಡದ ವಿರುದ್ಧವೂ ಯಾವುದೇ ಕ್ರಮವಾಗಿಲ್ಲ. ಪರಾಗ್ ಅವರು ನಂತರದ ಪಂದ್ಯದಲ್ಲಿ ಆಡಿದರು. ಅಷ್ಟೇ ಅಲ್ಲ. 90 ರನ್ ಕೂಡ ಹೊಡೆದರು. <br>‘ಟೀಕಾಕಾರಿಗೆ (ವೇಪಿಂಗ್ ಪ್ರಕರಣಕ್ಕೆ ಸಂಬಂಧಿಸಿ) ಉತ್ತರ ಕೊಡುವ ಅಗತ್ಯವಿಲ್ಲ. ನನ್ನ ಆಟವೇ ಉತ್ತರ’ ಎಂದರು. ಈ ಹಿಂದೆ ನಡೆದಿದ್ದ ಕೆಲವು ಸಣ್ಣ, ಪುಟ್ಟ ಪ್ರಕರಣಗಳಲ್ಲಿ ಆಟಗಾರರನ್ನು ಒಂದು ಅಥವಾ ಎರಡು ಪಂದ್ಯಗಳಿಂದ ಅಮಾನತು ಮಾಡಿರುವ ಉದಾಹರಣೆಗಳು ಇವೆ. ಆದರೆ ಪರಾಗ್ ಪ್ರಕರಣದಲ್ಲಿ ಬಿಸಿಸಿಐ, ಐಪಿಎಲ್ ಆಡಳಿತ ಸಮಿತಿ ಮತ್ತು ಸ್ಥಳೀಯ ಆಡಳಿತ ಮಗುಮ್ಮಾಗಿ ಉಳಿದಿವೆ. ನಿಷೇಧಿತ ಇ ಸಿಗರೇಟ್ಗೆ ಅಂತರರಾಷ್ಟ್ರೀಯ ಮಟ್ಟದ ಪ್ರಚಾರ ಸಿಕ್ಕಿದಂತಾಯಿತು. 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಇರುವ ತಂಡ ರಾಜಸ್ಥಾನ ರಾಯಲ್ಸ್. ಅಂತಹ ಕಿರಿಯರ ಮೇಲೆ ಇಂತಹ ಪ್ರಕರಣಗಳಿಂದ ಆಗುವ ಪರಿಣಾಮವೆಂತಹುದು? ಈ ಹಿಂದೆ ಕೋಟ್ಯಂತರ ರೂಪಾಯಿ ಪಡೆದು ತಂಬಾಕು ಉತ್ಪನ್ನಗಳ ಪ್ರಚಾರ ಮಾಡುವ ಒಪ್ಪಂದವನ್ನೇ ಧಿಕ್ಕರಿಸಿದ್ದ ಸಚಿನ್ ತೆಂಡೂಲ್ಕರ್ ಅವರು ಹೊಸ ಆದರ್ಶಪ್ರಾಯರಾಗಬೇಕಲ್ಲವೇ?</p>.<p><strong>‘ಹನಿಟ್ರ್ಯಾಪ್’ ಆತಂಕದಲ್ಲಿ ಬಿಸಿಸಿಐ</strong></p>.<p>ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಡವಾಗಿ ಎಚ್ಚೆತ್ತುಕೊಂಡಿದೆ. ಐಪಿಎಲ್ ತಂಡಗಳ ಆಟಗಾರರು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳು ‘ಹನಿಟ್ರ್ಯಾಪ್’ಗೆ ಬೀಳುವ ಆತಂಕದಿಂದ ಹೊಸ ಮಾರ್ಗಸೂಚಿ ತಂದಿದೆ. ಅದಕ್ಕಾಗಿ ತಂಡದವರು ತಂಗುವ ಹೋಟೆಲ್ ಕೋಣೆಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿದೆ. ಪರಿಚಿತರನ್ನು ಕರೆದೊಯ್ಯಬೇಕಾದರೂ ಆಯಾ ತಂಡಗಳ ವ್ಯವಸ್ಥಾಪಕರ ಅನುಮತಿ ಪತ್ರ ಪಡೆದಿರುವುದು ಕಡ್ಡಾಯ ಎಂದು ಹೇಳಿದೆ. ಆದರೆ ಇದ್ದಕ್ಕಿದ್ದಂತೆ ಈ ಮಾರ್ಗಸೂಚಿ ತರಲು ಕಾರಣವೇನು? ಮೊದಲು ಈ ನಿಯಮಗಳು ಇರಲಿಲ್ಲವೇ?</p>.<p>2013–14ರಲ್ಲಿ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ನಡೆದಿತ್ತು. ಅದರ ನಂತರ ತನಿಖೆ ನಡೆಸಿದ್ದ ಮೌದ್ಗಿಲ್ ಸಮಿತಿ ಮತ್ತು ಬಿಸಿಸಿಐ ಆಡಳಿತ ಸುಧಾರಣೆಗಾಗಿ ನಿಯಮಾವಳಿ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯು ಇಂತಹ ಪ್ರಕರಣಗಳು ನಡೆದಿರುವುದನ್ನು ಆಗಲೇ ಉಲ್ಲೇಖಿಸಿತ್ತು.</p>.<p>ಅನಧಿಕೃತ ವ್ಯಕ್ತಿಗಳೊಂದಿಗೆ ತಂಡದವರ ಸಂಪರ್ಕ, ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮತ್ತು ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪದ ಕುರಿತು ಎಚ್ಚರಿಸಿತ್ತು. ಅವುಗಳ ನಿಯಂತ್ರಣಕ್ಕಾಗಿ ನಿಯಮಗಳನ್ನೂ ರೂಪಿಸಿತ್ತು. ಆದರೆ ಐಪಿಎಲ್ ಜಗತ್ತೇ ಬೇರೆ. ಇಲ್ಲಿ ದೇಶಿ, ವಿದೇಶಿ ಆಟಗಾರರಲ್ಲಿ ಕೆಲವರು ತಮ್ಮ ಗೆಳತಿಯರು ಮತ್ತು ಆಪ್ತರನ್ನು ತಮ್ಮ ಕೋಣೆಗಳಿಗೆ ಕರೆದೊಯ್ದ ಉದಾಹರಣೆಗಳಿವೆ. ಪಂದ್ಯದ ಸಂದರ್ಭಗಳಲ್ಲಿ ಆಟಗಾರರ ನಿಕಟವರ್ತಿಗಳು (ಹೊರಗಿನಿಂದ ಬಂದವರು) ಮೈದಾನದಲ್ಲಿಯೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಪ್ರಕರಣಗಳನ್ನೂ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಪಡೆ ಪತ್ತೆ ಮಾಡಿತ್ತು. ಸ್ವತಃ ಕೆಲವು ಆಟಗಾರರೇ ಡ್ರೆಸಿಂಗ್ ರೂಮ್ ವಿಡಿಯೊ ಮಾಡಿ ಹರಿಬಿಟ್ಟಿದ್ದು ಕೂಡ ಇದೆ ಎಂಬ ವರದಿಗಳಿವೆ. ಅದಕ್ಕಾಗಿ ಕೆಲವು ಆಟಗಾರರ ಅಮಾನತು ಕೂಡ ಆಗಿದೆಯಂತೆ. ಆದರೆ ಈ ಕುರಿತು ಬಿಸಿಸಿಐ ಮಾತ್ರ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.</p>.<p>‘ಲೀಗ್ ಘನತೆ ಕುಂದದಂತೆ ನೋಡಿಕೊಳ್ಳುವ ಜವಾಬ್ದಾರಿ ಫ್ರ್ಯಾಂಚೈಸಿಗಳಿಗೂ ಇದೆ. ಬಿಸಿಸಿಐಗೂ ಇದೆ. ಇದಕ್ಕೆ ಸಂಬಂಧಿಸಿದ ಎಲ್ಲರೂ ಜಾಗೃತರಾಗಿರಬೇಕು’ ಎಂದು ಮಂಡಳಿ ಹೇಳಿದೆ. ಏಕೆಂದರೆ ಐಪಿಎಲ್ ಶ್ರೀಮಂತವಾಗಿ ಬೆಳೆಯಲು ‘ಬ್ರ್ಯಾಂಡ್ ಮೌಲ್ಯ‘ ಮುಖ್ಯವಾಗುತ್ತದೆ. ಅದೇ ಕಡಿಮೆಯಾದರೆ ಎಲ್ಲವೂ ಇಳಿಮುಖವಾಗುತ್ತದೆ. ಆದ್ದರಿಂದ ಆಟಗಾರರೂ ಸೇರಿದಂತೆ ಮತ್ತಿತರರೆಲ್ಲರ ‘ಸನ್ನಡತೆ’ಯೂ ಮಹತ್ವದ್ದಾಗುತ್ತದೆ.</p>.<p><strong>ಆವೇಶ್ ಬೌಂಡರಿಯಾಚೆ ಬ್ಯಾಟಿಂಗ್</strong></p>.<p>ಲಖನೌ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಪಂದ್ಯ ಅದು. ವಿಜಯದ ರನ್ ಗಳಿಸಲು ಲಖನೌ ಬ್ಯಾಟರ್ ರಿಷಭ್ ಅವರು ಚೆಂಡನ್ನು ಹೊಡೆಯುತ್ತಾರೆ. ಚೆಂಡು ಇನ್ನೇನು ಡಗ್ಔಟ್ ಸಮೀಪ ಹೋಗಿ ಬೌಂಡರಿಯಾಗಬೇಕಿತ್ತು. ಆದರೆ ಹಗ್ಗದಾಚೆ ಪ್ಯಾಡ್ ಕಟ್ಟಿಕೊಂಡು ನಿಂತಿದ್ದ ಆವೇಶ್ ಖಾನ್ ತಮ್ಮ ಕೈಯಲ್ಲಿದ್ದ ಬ್ಯಾಟ್ನಿಂದ ಚೆಂಡನ್ನು ಹೊಡೆದೇ ಬಿಟ್ಟರು. ಅಷ್ಟರಲ್ಲಿ ಬ್ಯಾಟರ್ಗಳಿಬ್ಬರೂ ವಿಜಯಕ್ಕೆ ಬೇಕಾದ 2 ರನ್ ಓಡಿದ್ದರು. ಆದರೆ ಆವೇಶ್ ಅವತ್ತು ಮಾಡಿದ್ದು ಅಶಿಸ್ತು. ಈ ಬಗ್ಗೆ ಸನ್ರೈಸರ್ಸ್ ತಂಡವು ರೆಫರಿಗೆ ದೂರು ನೀಡಿತು. <br>ಈ ಹಿಂದೆಯೂ ಆವೇಶ್ ಪಂದ್ಯವೊಂದರಲ್ಲಿ ‘ಆವೇಶ’ಕ್ಕೆ ಒಳಗಾಗಿ ತಮ್ಮ ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಪಿಚ್ ನಲ್ಲಿಯೇ ನೆಲಕ್ಕೆ ಅಪ್ಪಳಿಸುವಂತೆ ಬೀಸಾಕಿದ್ದರು. ಆಗ ಅವರಿಗೆ ದಂಡ ವಿಧಿಸಲಾಗಿತ್ತು.</p>.<p>ಕೆಲವು ಪಂದ್ಯಗಳು ರಾತ್ರಿ ತಡವಾಗಿ ಮುಕ್ತಾಯವಾಗುತ್ತಿವೆ. ಕೊನೆಯ ಹಂತದ ಓವರ್ಗಳನ್ನು ಪೂರೈಸಲು ಬಹಳಷ್ಟು ಸಮಯ ವ್ಯಯ ಮಾಡಲಾಗುತ್ತಿದೆ. ಕೆಲವು ಅಂಪೈರ್ ನಿರ್ಣಯಗಳೂ ಟೀಕೆಗೊಳಗಾಗಿವೆ. ಈಚೆಗೆ ಆರ್ಸಿಬಿಯ ರಜತ್ ಪಾಟೀದಾರ್ ಅವರ ಕ್ಯಾಚ್ ಅನ್ನು ಜೇಸನ್ ಹೋಲ್ಡರ್ ಪಡೆದಿದ್ದು. ಅವರು ಚೆಂಡಕ್ಕೆ ನೆಲಕ್ಕೆ ತಾಗಿಸಿದ್ದು ವಿಡಿಯೊದಲ್ಲಿ ಕಾಣಿಸಿತ್ತು. ಅಂಗಕ್ರಿಷ್ ರಘುವಂಶಿ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ರನ್ ಪಡೆಯುವ ಪ್ರಯತ್ನದಲ್ಲಿ ಫೀಲ್ಡರ್ ಕಾರ್ಯಾಚರಣೆಗೆ ಅಡ್ಡಿಯಾದರು ಎಂಬ ಕಾರಣಕ್ಕೆ ಔಟ್ ಆದರು.</p>.<p>ಹೀಗೆ ಲೆಕ್ಕ ಹಾಕುತ್ತ ಹೋದರೆ ಮತ್ತಷ್ಟು, ಮೊಗೆದಷ್ಟು ಸಂಗತಿಗಳು ಸಿಗುತ್ತವೆ. ಕ್ರಿಕೆಟ್ ಆಟಕ್ಕಿಂತಲೂ ಇವೇ ದೊಡ್ಡ ಸುದ್ದಿಗಳಾಗುತ್ತವೆಯಲ್ಲವೇ? ಈ ತಿಂಗಳಾಂತ್ಯದಲ್ಲಿ ಟೂರ್ನಿ ಮುಗಿಯುವ ವೇಳೆಗೆ ಇನ್ನಷ್ಟು ಅಚ್ಚರಿಗಳು ದಾಖಲಾಗಬಹುದೇನೋ?</p>.<p><strong>ಡಗೌಟ್ನಲ್ಲಿ ಮೊಬೈಲ್ ವೀಕ್ಷಣೆ</strong></p>.<p>ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಬಿಂದರ್ ಅವರು ಗುವಾಹಟಿಯಲ್ಲಿ ನಡೆದಿದ್ದ ಆರ್ಸಿಬಿ ವಿರುದ್ಧದ (ಏ.10) ಪಂದ್ಯದ ವೇಳೆ ಡಗೌಟ್ನಲ್ಲಿ ಮೊಬೈಲ್ ಫೋನ್ ಬಳಸಿದ್ದು ವಿವಾದಕ್ಕೆ ಕಾರಣವಾಯಿತು.</p>.<p>ಡಗೌಟ್ನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದ ರೋಮಿ ಅವರು ಮೊಬೈಲ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಐಪಿಎಲ್ ನಿಯಮಗಳ ಪ್ರಕಾರ, ಡಗೌಟ್ ಮತ್ತು ಮೈದಾನದ ಆಸುಪಾಸಿನಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಸಂವಹನ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. </p>.<p>ಈ ಸಂಬಂಧ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವು ರೋಮಿ ಅವರಿಗೆ ಷೋಕಾಸ್ ನೋಟಿಸ್ ಜಾರಿ ನೀಡಿತ್ತು. ಶಿಷ್ಟಾಚಾರ ಉಲ್ಲಂಘನೆ ಬಗ್ಗೆ 48 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು.</p>.<p>ತಂಡಗಳ ಮ್ಯಾನೇಜರ್ಗಳಿಗೆ ಲಾಜಿಸ್ಟಿಕ್ಸ್ ಉದ್ದೇಶಗಳಿಗಾಗಿ ಫೋನ್ ಇಟ್ಟುಕೊಳ್ಳಲು ಅನುಮತಿ ಇದೆಯಾದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತ್ರ ಬಳಸಬೇಕು. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ರೀಡಾಂಗಣಕ್ಕೆ ಬಂದ ತಕ್ಷಣ ತಮ್ಮ ಫೋನ್ಗಳು ಮತ್ತು ಸ್ಮಾರ್ಟ್ವಾಚ್ಗಳನ್ನು ಭದ್ರತಾ ಅಧಿಕಾರಿಗೆ ಒಪ್ಪಿಸಬೇಕು.</p>.<p>ರೋಮಿ ಅವರು ತಪ್ಪು ಒಪ್ಪಿಕೊಂಡಿದ್ದರಿಂದ ಮತ್ತು ಇದು ಮೊದಲ ಬಾರಿಯ ತಪ್ಪು ಎಂದು ಪರಿಗಣಿಸಿ, ಅವರಿಗೆ ₹ 1 ಲಕ್ಷ ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು. ನೋಟಿಸ್ಗೆ ಅವರ ಉತ್ತರ ಸಮರ್ಪಕವಾಗಿಲ್ಲದ ಕಾರಣ ಎಚ್ಚರಿಕೆ ನೀಡಲಾಯಿತು. ಆದರೆ, ಈ ಪ್ರಕರಣದಲ್ಲಿ ಸೂರ್ಯವಂಶಿ ಅವರಿಗೆ ದಂಡ ಹಾಕಿಲ್ಲ. ಅವರಿಗೆ ನಿಯಮಗಳ ಬಗ್ಗೆ ತಂಡವು ಹೆಚ್ಚಿನ ತಿಳಿವಳಿಕೆ ನೀಡಬೇಕೆಂದು ಬಿಸಿಸಿಐ ಬಯಸಿತ್ತು.</p>.<p><strong>ಪೂರಕ ಮಾಹಿತಿ: ಪ್ರದೀಶ್ ಎಚ್.ಮರೋಡಿ</strong></p><p>–––––</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಶಕಗಳ ಹಿಂದಿನ ಮಾತು. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 200–250 ರನ್ಗಳ ಮೊತ್ತವೆಂದರೆ ದೊಡ್ಡ ಸವಾಲು ಎಂದೇ ಅರ್ಥ. ಆದರೆ ಟಿ20 ಕ್ರಿಕೆಟ್ ಬಂದ ನಂತರ ವ್ಯಾಖ್ಯಾನ ಪೂರ್ಣ ಬದಲಾಗಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಕ್ರಿಕೆಟ್ನಲ್ಲಿ ‘ಮಾಯಾಲೋಕ’ವನ್ನೇ ಸೃಷ್ಟಿಸಿಬಿಟ್ಟಿದೆ. ಕೇವಲ 20 ಓವರ್ಗಳಲ್ಲಿ 300 ರನ್ಗಳ ಮೊತ್ತ ಪೇರಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 250ರ ಗಡಿ ದಾಟಿ ತೋರಿಸಿದ್ದೂ ಆಗಿದೆ.</p>.<p>15ರ ಪೋರ ವೈಭವ್ ಸೂರ್ಯವಂಶಿಯ ಸಿಕ್ಸರ್ಗಳು ಚಮತ್ಕಾರದಂತೆ ಭಾಸವಾಗುತ್ತಿವೆ. ಇನ್ನೊಂದೆಡೆ ಜಸ್ಪ್ರೀತ್ ಬೂಮ್ರಾ ಅವರಂತಹ ದಿಗ್ಗಜ ಬೌಲರ್ ಮೊದಲ ನಾಲ್ಕು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಪುನರಾಗಮನ ಮಾಡಿದ ಮೊಹ್ಸಿನ್ ಖಾನ್ ಅವರಂತಹ ಬೌಲರ್ಗಳು ಸಫಲರಾದರು. ಕಳೆದ 44 ದಿನಗಳಿಂದ ನಡೆಯುತ್ತಿರುವ ಐಪಿಎಲ್ನಲ್ಲಿ ಇಂತಹ ಹತ್ತಾರು ಅಚ್ಚರಿಗಳು ಘಟಿಸಿವೆ. ಕೇವಲ ಆಟವಷ್ಟೇ ಅಲ್ಲ. ಒಂದಿಷ್ಟು ಅನೂಹ್ಯ ಸಂಗತಿಗಳೂ ಈ ಬಾರಿಯ ಐಪಿಎಲ್ನಲ್ಲಿ ಗಮನ ಸೆಳೆದಿವೆ.</p>.<p><strong>ಶಾಸಕರಿಗೆ ಪಾಸ್; ಫೈನಲ್ಗೆ ಗೇಟ್ಪಾಸ್!</strong></p>.<p>ಭಾರತದಲ್ಲಿ ಇವತ್ತು ಎಲ್ಲರೂ ಕ್ರಿಕೆಟ್ನೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ವಯಸ್ಸು, ಧರ್ಮ, ಜಾತಿ, ಭಾಷೆ, ವೃತ್ತಿ ಮತ್ತು ಭೌಗೋಳಿಕತೆಯನ್ನೂ ಮೀರಿದ ಆಕರ್ಷಣೆಯನ್ನು ಕ್ರಿಕೆಟ್ ಇವತ್ತು ಗಳಿಸಿದೆ. ಇಷ್ಟೆಲ್ಲ ಇದ್ದ ಮೇಲೆ ರಾಜಕಾರಣಿಗಳು ಬಿಡುತ್ತಾರೆಯೇ?</p>.<p>ಅದಕ್ಕಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ತಮಗೂ ಉಚಿತ ಟಿಕೆಟ್ ನೀಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿಯೇ ಬೇಡಿಕೆ ಇಟ್ಟರು. ಅದಕ್ಕೆ ವಿಧಾನಸಭಾಧ್ಯಕ್ಷರು, ಉಪಮುಖ್ಯಮಂತ್ರಿಗಳು ಮತ್ತು ವಿಪಕ್ಷ ನಾಯಕರು ಒಕ್ಕೊರಲ ಬೆಂಬಲ ಸೂಚಿಸಿದರು. ಇದಕ್ಕೆ ಮಣಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಇಲ್ಲಿ ನಡೆದ ಐದು ಐಪಿಎಲ್ ಪಂದ್ಯಗಳಿಗೂ ಪ್ರತಿಯೊಬ್ಬ ಶಾಸಕ, ಸಂಸದ, ಸಚಿವರೆಲ್ಲರಿಗೂ ತಲಾ ಮೂರು ಉಚಿತ ಟಿಕೆಟ್ಗಳನ್ನು ವಿತರಿಸಿದವು.</p>.<p>ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರ ನಂತರ ಭದ್ರತೆಯ ‘ಕಾರಣ’ ನೀಡಿ ಪಂದ್ಯಗಳಿಗೆ ಅನುಮತಿ ನೀಡಿರಲಿಲ್ಲ. ಆದರೆ ಐಪಿಎಲ್ ಪಂದ್ಯಗಳಿಗಾಗಿ ಅನುಮತಿ ಕೊಡಲು ಸರ್ಕಾರವು ವಿಧಿಸಿದ ಎಲ್ಲ ಶರತ್ತುಗಳನ್ನು ಪೂರೈಸುವತ್ತ ಕೆಎಸ್ಸಿಎ ಕಾರ್ಯೋನ್ಮುಖವಾಯಿತು. ಅದನ್ನೇ ದಾಳವಾಗಿಟ್ಟುಕೊಂಡ ಶಾಸಕರು ಟಿಕೆಟ್ಗಳಿಗೂ ಬೇಡಿಕೆಯಿಟ್ಟರು. ಅದರ ಫಲವಾಗಿ ಇಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಸ್ಥಳಾಂತರಗೊಂಡಿತು. ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.</p>.<p><strong>ವಿವಾದದ ‘ಹೊಗೆ’</strong></p>.<p>ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಹೋಗುವವರು ಅಥವಾ ವರದಿ ಮಾಡಲು ಹೋಗುವ ಮಾಧ್ಯಮದವರನ್ನು ನಖಶಿಖಾಂತ ಪರಿಶೀಲಿಸಲಾಗುತ್ತದೆ. ನಾಣ್ಯವನ್ನೂ ಒಳಗೆ ಒಯ್ಯಲು ಬಿಡುವುದಿಲ್ಲ. ಸಿಗರೇಟ್, ತಂಬಾಕು ಅಂತಹ ವಸ್ತುಗಳನ್ನೂ ಬಿಡುವುದಿಲ್ಲ. ಆದರೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಡ್ರೆಸಿಂಗ್ರೂಮ್ನಲ್ಲಿ ‘ಇ ಸಿಗರೇಟ್’ ಸೇದಿ ಹೊಗೆ ಬಿಡುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸಿದವು.</p>.<p>ಭಾರತದಲ್ಲಿ ಇ ಸಿಗರೇಟ್ ಬಳಕೆ, ಉತ್ಪಾದನೆ ಮತ್ತು ಮಾರಾಟ ನಿಷಿದ್ಧ. ಅಂತಹದರಲ್ಲಿ ಕೋಟ್ಯಂತರ ಜನರು ಟಿ.ವಿ., ಮೊಬೈಲ್ ಆ್ಯಪ್ ಮೂಲಕ ವೀಕ್ಷಿಸಿದ ಐಪಿಎಲ್ ಪಂದ್ಯದಲ್ಲಿ ಖ್ಯಾತ ಆಟಗಾರ ಪರಾಗ್ ಇ ಸಿಗರೇಟ್ ಬಳಸಿದ್ದು ವಿವಾದ ಹುಟ್ಟುಹಾಕಿತು. ಅವರಿಗೆ ಕಠಿಣ ಶಿಕ್ಷೆಯಾಗುವ ನಿರೀಕ್ಷೆ ಮೂಡಿತ್ತು. ಆದರೆ ಬಿಸಿಸಿಐ ಅವರಿಗೆ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಿ ಸುಮ್ಮನಾಯಿತು. ತಂಡದ ವಿರುದ್ಧವೂ ಯಾವುದೇ ಕ್ರಮವಾಗಿಲ್ಲ. ಪರಾಗ್ ಅವರು ನಂತರದ ಪಂದ್ಯದಲ್ಲಿ ಆಡಿದರು. ಅಷ್ಟೇ ಅಲ್ಲ. 90 ರನ್ ಕೂಡ ಹೊಡೆದರು. <br>‘ಟೀಕಾಕಾರಿಗೆ (ವೇಪಿಂಗ್ ಪ್ರಕರಣಕ್ಕೆ ಸಂಬಂಧಿಸಿ) ಉತ್ತರ ಕೊಡುವ ಅಗತ್ಯವಿಲ್ಲ. ನನ್ನ ಆಟವೇ ಉತ್ತರ’ ಎಂದರು. ಈ ಹಿಂದೆ ನಡೆದಿದ್ದ ಕೆಲವು ಸಣ್ಣ, ಪುಟ್ಟ ಪ್ರಕರಣಗಳಲ್ಲಿ ಆಟಗಾರರನ್ನು ಒಂದು ಅಥವಾ ಎರಡು ಪಂದ್ಯಗಳಿಂದ ಅಮಾನತು ಮಾಡಿರುವ ಉದಾಹರಣೆಗಳು ಇವೆ. ಆದರೆ ಪರಾಗ್ ಪ್ರಕರಣದಲ್ಲಿ ಬಿಸಿಸಿಐ, ಐಪಿಎಲ್ ಆಡಳಿತ ಸಮಿತಿ ಮತ್ತು ಸ್ಥಳೀಯ ಆಡಳಿತ ಮಗುಮ್ಮಾಗಿ ಉಳಿದಿವೆ. ನಿಷೇಧಿತ ಇ ಸಿಗರೇಟ್ಗೆ ಅಂತರರಾಷ್ಟ್ರೀಯ ಮಟ್ಟದ ಪ್ರಚಾರ ಸಿಕ್ಕಿದಂತಾಯಿತು. 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಇರುವ ತಂಡ ರಾಜಸ್ಥಾನ ರಾಯಲ್ಸ್. ಅಂತಹ ಕಿರಿಯರ ಮೇಲೆ ಇಂತಹ ಪ್ರಕರಣಗಳಿಂದ ಆಗುವ ಪರಿಣಾಮವೆಂತಹುದು? ಈ ಹಿಂದೆ ಕೋಟ್ಯಂತರ ರೂಪಾಯಿ ಪಡೆದು ತಂಬಾಕು ಉತ್ಪನ್ನಗಳ ಪ್ರಚಾರ ಮಾಡುವ ಒಪ್ಪಂದವನ್ನೇ ಧಿಕ್ಕರಿಸಿದ್ದ ಸಚಿನ್ ತೆಂಡೂಲ್ಕರ್ ಅವರು ಹೊಸ ಆದರ್ಶಪ್ರಾಯರಾಗಬೇಕಲ್ಲವೇ?</p>.<p><strong>‘ಹನಿಟ್ರ್ಯಾಪ್’ ಆತಂಕದಲ್ಲಿ ಬಿಸಿಸಿಐ</strong></p>.<p>ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಡವಾಗಿ ಎಚ್ಚೆತ್ತುಕೊಂಡಿದೆ. ಐಪಿಎಲ್ ತಂಡಗಳ ಆಟಗಾರರು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳು ‘ಹನಿಟ್ರ್ಯಾಪ್’ಗೆ ಬೀಳುವ ಆತಂಕದಿಂದ ಹೊಸ ಮಾರ್ಗಸೂಚಿ ತಂದಿದೆ. ಅದಕ್ಕಾಗಿ ತಂಡದವರು ತಂಗುವ ಹೋಟೆಲ್ ಕೋಣೆಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿದೆ. ಪರಿಚಿತರನ್ನು ಕರೆದೊಯ್ಯಬೇಕಾದರೂ ಆಯಾ ತಂಡಗಳ ವ್ಯವಸ್ಥಾಪಕರ ಅನುಮತಿ ಪತ್ರ ಪಡೆದಿರುವುದು ಕಡ್ಡಾಯ ಎಂದು ಹೇಳಿದೆ. ಆದರೆ ಇದ್ದಕ್ಕಿದ್ದಂತೆ ಈ ಮಾರ್ಗಸೂಚಿ ತರಲು ಕಾರಣವೇನು? ಮೊದಲು ಈ ನಿಯಮಗಳು ಇರಲಿಲ್ಲವೇ?</p>.<p>2013–14ರಲ್ಲಿ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ನಡೆದಿತ್ತು. ಅದರ ನಂತರ ತನಿಖೆ ನಡೆಸಿದ್ದ ಮೌದ್ಗಿಲ್ ಸಮಿತಿ ಮತ್ತು ಬಿಸಿಸಿಐ ಆಡಳಿತ ಸುಧಾರಣೆಗಾಗಿ ನಿಯಮಾವಳಿ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯು ಇಂತಹ ಪ್ರಕರಣಗಳು ನಡೆದಿರುವುದನ್ನು ಆಗಲೇ ಉಲ್ಲೇಖಿಸಿತ್ತು.</p>.<p>ಅನಧಿಕೃತ ವ್ಯಕ್ತಿಗಳೊಂದಿಗೆ ತಂಡದವರ ಸಂಪರ್ಕ, ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮತ್ತು ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪದ ಕುರಿತು ಎಚ್ಚರಿಸಿತ್ತು. ಅವುಗಳ ನಿಯಂತ್ರಣಕ್ಕಾಗಿ ನಿಯಮಗಳನ್ನೂ ರೂಪಿಸಿತ್ತು. ಆದರೆ ಐಪಿಎಲ್ ಜಗತ್ತೇ ಬೇರೆ. ಇಲ್ಲಿ ದೇಶಿ, ವಿದೇಶಿ ಆಟಗಾರರಲ್ಲಿ ಕೆಲವರು ತಮ್ಮ ಗೆಳತಿಯರು ಮತ್ತು ಆಪ್ತರನ್ನು ತಮ್ಮ ಕೋಣೆಗಳಿಗೆ ಕರೆದೊಯ್ದ ಉದಾಹರಣೆಗಳಿವೆ. ಪಂದ್ಯದ ಸಂದರ್ಭಗಳಲ್ಲಿ ಆಟಗಾರರ ನಿಕಟವರ್ತಿಗಳು (ಹೊರಗಿನಿಂದ ಬಂದವರು) ಮೈದಾನದಲ್ಲಿಯೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಪ್ರಕರಣಗಳನ್ನೂ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಪಡೆ ಪತ್ತೆ ಮಾಡಿತ್ತು. ಸ್ವತಃ ಕೆಲವು ಆಟಗಾರರೇ ಡ್ರೆಸಿಂಗ್ ರೂಮ್ ವಿಡಿಯೊ ಮಾಡಿ ಹರಿಬಿಟ್ಟಿದ್ದು ಕೂಡ ಇದೆ ಎಂಬ ವರದಿಗಳಿವೆ. ಅದಕ್ಕಾಗಿ ಕೆಲವು ಆಟಗಾರರ ಅಮಾನತು ಕೂಡ ಆಗಿದೆಯಂತೆ. ಆದರೆ ಈ ಕುರಿತು ಬಿಸಿಸಿಐ ಮಾತ್ರ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.</p>.<p>‘ಲೀಗ್ ಘನತೆ ಕುಂದದಂತೆ ನೋಡಿಕೊಳ್ಳುವ ಜವಾಬ್ದಾರಿ ಫ್ರ್ಯಾಂಚೈಸಿಗಳಿಗೂ ಇದೆ. ಬಿಸಿಸಿಐಗೂ ಇದೆ. ಇದಕ್ಕೆ ಸಂಬಂಧಿಸಿದ ಎಲ್ಲರೂ ಜಾಗೃತರಾಗಿರಬೇಕು’ ಎಂದು ಮಂಡಳಿ ಹೇಳಿದೆ. ಏಕೆಂದರೆ ಐಪಿಎಲ್ ಶ್ರೀಮಂತವಾಗಿ ಬೆಳೆಯಲು ‘ಬ್ರ್ಯಾಂಡ್ ಮೌಲ್ಯ‘ ಮುಖ್ಯವಾಗುತ್ತದೆ. ಅದೇ ಕಡಿಮೆಯಾದರೆ ಎಲ್ಲವೂ ಇಳಿಮುಖವಾಗುತ್ತದೆ. ಆದ್ದರಿಂದ ಆಟಗಾರರೂ ಸೇರಿದಂತೆ ಮತ್ತಿತರರೆಲ್ಲರ ‘ಸನ್ನಡತೆ’ಯೂ ಮಹತ್ವದ್ದಾಗುತ್ತದೆ.</p>.<p><strong>ಆವೇಶ್ ಬೌಂಡರಿಯಾಚೆ ಬ್ಯಾಟಿಂಗ್</strong></p>.<p>ಲಖನೌ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಪಂದ್ಯ ಅದು. ವಿಜಯದ ರನ್ ಗಳಿಸಲು ಲಖನೌ ಬ್ಯಾಟರ್ ರಿಷಭ್ ಅವರು ಚೆಂಡನ್ನು ಹೊಡೆಯುತ್ತಾರೆ. ಚೆಂಡು ಇನ್ನೇನು ಡಗ್ಔಟ್ ಸಮೀಪ ಹೋಗಿ ಬೌಂಡರಿಯಾಗಬೇಕಿತ್ತು. ಆದರೆ ಹಗ್ಗದಾಚೆ ಪ್ಯಾಡ್ ಕಟ್ಟಿಕೊಂಡು ನಿಂತಿದ್ದ ಆವೇಶ್ ಖಾನ್ ತಮ್ಮ ಕೈಯಲ್ಲಿದ್ದ ಬ್ಯಾಟ್ನಿಂದ ಚೆಂಡನ್ನು ಹೊಡೆದೇ ಬಿಟ್ಟರು. ಅಷ್ಟರಲ್ಲಿ ಬ್ಯಾಟರ್ಗಳಿಬ್ಬರೂ ವಿಜಯಕ್ಕೆ ಬೇಕಾದ 2 ರನ್ ಓಡಿದ್ದರು. ಆದರೆ ಆವೇಶ್ ಅವತ್ತು ಮಾಡಿದ್ದು ಅಶಿಸ್ತು. ಈ ಬಗ್ಗೆ ಸನ್ರೈಸರ್ಸ್ ತಂಡವು ರೆಫರಿಗೆ ದೂರು ನೀಡಿತು. <br>ಈ ಹಿಂದೆಯೂ ಆವೇಶ್ ಪಂದ್ಯವೊಂದರಲ್ಲಿ ‘ಆವೇಶ’ಕ್ಕೆ ಒಳಗಾಗಿ ತಮ್ಮ ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಪಿಚ್ ನಲ್ಲಿಯೇ ನೆಲಕ್ಕೆ ಅಪ್ಪಳಿಸುವಂತೆ ಬೀಸಾಕಿದ್ದರು. ಆಗ ಅವರಿಗೆ ದಂಡ ವಿಧಿಸಲಾಗಿತ್ತು.</p>.<p>ಕೆಲವು ಪಂದ್ಯಗಳು ರಾತ್ರಿ ತಡವಾಗಿ ಮುಕ್ತಾಯವಾಗುತ್ತಿವೆ. ಕೊನೆಯ ಹಂತದ ಓವರ್ಗಳನ್ನು ಪೂರೈಸಲು ಬಹಳಷ್ಟು ಸಮಯ ವ್ಯಯ ಮಾಡಲಾಗುತ್ತಿದೆ. ಕೆಲವು ಅಂಪೈರ್ ನಿರ್ಣಯಗಳೂ ಟೀಕೆಗೊಳಗಾಗಿವೆ. ಈಚೆಗೆ ಆರ್ಸಿಬಿಯ ರಜತ್ ಪಾಟೀದಾರ್ ಅವರ ಕ್ಯಾಚ್ ಅನ್ನು ಜೇಸನ್ ಹೋಲ್ಡರ್ ಪಡೆದಿದ್ದು. ಅವರು ಚೆಂಡಕ್ಕೆ ನೆಲಕ್ಕೆ ತಾಗಿಸಿದ್ದು ವಿಡಿಯೊದಲ್ಲಿ ಕಾಣಿಸಿತ್ತು. ಅಂಗಕ್ರಿಷ್ ರಘುವಂಶಿ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ರನ್ ಪಡೆಯುವ ಪ್ರಯತ್ನದಲ್ಲಿ ಫೀಲ್ಡರ್ ಕಾರ್ಯಾಚರಣೆಗೆ ಅಡ್ಡಿಯಾದರು ಎಂಬ ಕಾರಣಕ್ಕೆ ಔಟ್ ಆದರು.</p>.<p>ಹೀಗೆ ಲೆಕ್ಕ ಹಾಕುತ್ತ ಹೋದರೆ ಮತ್ತಷ್ಟು, ಮೊಗೆದಷ್ಟು ಸಂಗತಿಗಳು ಸಿಗುತ್ತವೆ. ಕ್ರಿಕೆಟ್ ಆಟಕ್ಕಿಂತಲೂ ಇವೇ ದೊಡ್ಡ ಸುದ್ದಿಗಳಾಗುತ್ತವೆಯಲ್ಲವೇ? ಈ ತಿಂಗಳಾಂತ್ಯದಲ್ಲಿ ಟೂರ್ನಿ ಮುಗಿಯುವ ವೇಳೆಗೆ ಇನ್ನಷ್ಟು ಅಚ್ಚರಿಗಳು ದಾಖಲಾಗಬಹುದೇನೋ?</p>.<p><strong>ಡಗೌಟ್ನಲ್ಲಿ ಮೊಬೈಲ್ ವೀಕ್ಷಣೆ</strong></p>.<p>ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಬಿಂದರ್ ಅವರು ಗುವಾಹಟಿಯಲ್ಲಿ ನಡೆದಿದ್ದ ಆರ್ಸಿಬಿ ವಿರುದ್ಧದ (ಏ.10) ಪಂದ್ಯದ ವೇಳೆ ಡಗೌಟ್ನಲ್ಲಿ ಮೊಬೈಲ್ ಫೋನ್ ಬಳಸಿದ್ದು ವಿವಾದಕ್ಕೆ ಕಾರಣವಾಯಿತು.</p>.<p>ಡಗೌಟ್ನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದ ರೋಮಿ ಅವರು ಮೊಬೈಲ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಐಪಿಎಲ್ ನಿಯಮಗಳ ಪ್ರಕಾರ, ಡಗೌಟ್ ಮತ್ತು ಮೈದಾನದ ಆಸುಪಾಸಿನಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಸಂವಹನ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. </p>.<p>ಈ ಸಂಬಂಧ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವು ರೋಮಿ ಅವರಿಗೆ ಷೋಕಾಸ್ ನೋಟಿಸ್ ಜಾರಿ ನೀಡಿತ್ತು. ಶಿಷ್ಟಾಚಾರ ಉಲ್ಲಂಘನೆ ಬಗ್ಗೆ 48 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು.</p>.<p>ತಂಡಗಳ ಮ್ಯಾನೇಜರ್ಗಳಿಗೆ ಲಾಜಿಸ್ಟಿಕ್ಸ್ ಉದ್ದೇಶಗಳಿಗಾಗಿ ಫೋನ್ ಇಟ್ಟುಕೊಳ್ಳಲು ಅನುಮತಿ ಇದೆಯಾದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತ್ರ ಬಳಸಬೇಕು. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ರೀಡಾಂಗಣಕ್ಕೆ ಬಂದ ತಕ್ಷಣ ತಮ್ಮ ಫೋನ್ಗಳು ಮತ್ತು ಸ್ಮಾರ್ಟ್ವಾಚ್ಗಳನ್ನು ಭದ್ರತಾ ಅಧಿಕಾರಿಗೆ ಒಪ್ಪಿಸಬೇಕು.</p>.<p>ರೋಮಿ ಅವರು ತಪ್ಪು ಒಪ್ಪಿಕೊಂಡಿದ್ದರಿಂದ ಮತ್ತು ಇದು ಮೊದಲ ಬಾರಿಯ ತಪ್ಪು ಎಂದು ಪರಿಗಣಿಸಿ, ಅವರಿಗೆ ₹ 1 ಲಕ್ಷ ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು. ನೋಟಿಸ್ಗೆ ಅವರ ಉತ್ತರ ಸಮರ್ಪಕವಾಗಿಲ್ಲದ ಕಾರಣ ಎಚ್ಚರಿಕೆ ನೀಡಲಾಯಿತು. ಆದರೆ, ಈ ಪ್ರಕರಣದಲ್ಲಿ ಸೂರ್ಯವಂಶಿ ಅವರಿಗೆ ದಂಡ ಹಾಕಿಲ್ಲ. ಅವರಿಗೆ ನಿಯಮಗಳ ಬಗ್ಗೆ ತಂಡವು ಹೆಚ್ಚಿನ ತಿಳಿವಳಿಕೆ ನೀಡಬೇಕೆಂದು ಬಿಸಿಸಿಐ ಬಯಸಿತ್ತು.</p>.<p><strong>ಪೂರಕ ಮಾಹಿತಿ: ಪ್ರದೀಶ್ ಎಚ್.ಮರೋಡಿ</strong></p><p>–––––</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>