ಒಂದು ಸಾಲಿನಲ್ಲಿ
ಕರ್ನಾಟಕದಲ್ಲಿ ಕೈಗೊಂಡಿರುವ ಬೃಹತ್ ಅಭಿವೃದ್ಧಿ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದ್ದರೂ, ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯಕ್ಕೆ ತೀವ್ರ ಸವಾಲಾಗಿ ಪರಿಣಮಿಸಿವೆ.


ಪ್ರವಾಸೋದ್ಯಮ, ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ) ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಇನ್ನೂ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಿವೆ. ಆದರೆ, ಬಹುಪಾಲು ಯೋಜನೆಗಳು ಸೂಕ್ಷ್ಮವಾದ ಪರಿಸರಕ್ಕೆ ಹಾನಿ ಉಂಟು ಮಾಡಲಿವೆ ಎಂದು ಆರೋಪಿಸುತ್ತಿರುವ ಸ್ಥಳೀಯ ರೈತರು, ಪರಿಸರವಾದಿಗಳು, ಸಾರ್ವಜನಿಕರು ಈ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಪ್ರತಿರೋಧದ ನಡುವೆಯೂ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಗಳು ಪಣ ತೊಟ್ಟಿವೆ. ಇಂತಹ ಪ್ರಮುಖ ಯೋಜನೆಗಳು, ಅವುಗಳನ್ನು ಜನರು ವಿರೋಧಿಸಲು ಕಾರಣವೇನು ಎನ್ನುವ ವಿವರಗಳು ಇಲ್ಲಿವೆ.


ಶರಾವತಿ ಕಣಿವೆಯ ನೋಟ


ತುಮಕೂರಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ

ನಂದಿ ಬೆಟ್ಟ

ಕೇಣಿಯಲ್ಲಿ ಸರ್ವಋತು ಆಳಸಮುದ್ರ ಬಂದರು ಸ್ಥಾಪನೆಯಾಗಲಿರುವ ಪ್ರದೇಶದ ಗ್ರಾಫಿಕ್ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.