<p>ದೇಶದಲ್ಲಿ ಬೇಸಿಗೆ ಎಂದರೆ ಬಿಸಿಲು ಸಾಮಾನ್ಯ ಎನ್ನಲಾಗುತ್ತಿತ್ತು. ಆದರೀಗ ಸಾಮಾನ್ಯ ಋತುಮಾನದ ಬದಲಾವಣೆಯಾಗಿ ಬೇಸಿಗೆ ಉಳಿದಿಲ್ಲ. ಬದಲಾಗಿ ಹವಾಮಾನ ತುರ್ತುಪರಿಸ್ಥಿತಿಯಾಗಿರುವುದು ವಿಷಾದದ ಸಂಗತಿ.</p><p>ಯಾಕೆಂದರೆ ವಿಶ್ವದ ಅತಿ ಬಿಸಿಯಾದ 25 ನಗರಗಳ ಪೈಕಿ ಭಾರತದ 20 ನಗರಗಳಿರುವುದು ವಿಪರ್ಯಾಸ. ಆಫ್ರಿಕಾ ಅಥವಾ ಅರಬ್ ದೇಶಗಳು ಈ ಹಿಂದೆ ಗ್ಲೊಬಲ್ ಹಾಟ್ ಸ್ಪಾಟ್ ಆಗಿದ್ದವು. ಇದೀಗ ಭಾರತ ಈ ಸ್ಥಾನಪಡೆದುಕೊಳ್ಳುತ್ತಿದೆ.</p><p>ಇದಕ್ಕೆ ಮೂಲ ಕಾರಣ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಹಸಿರು ಹೊದಿಕೆಯ ನಾಶ, ವಿವಿಧ ಮಾಲೀನ್ಯದ ಪರಿಣಾಮ ನಾವು ಅತಿಯಾದ ಬಿಸಿಯನ್ನು ಅನುಭವಿಸುತ್ತಿದ್ದೇವೆ. </p>. <p><strong>ಪ್ರಾದೇಶಿಕ ತಾಪಮಾನದ ಅಸಮತೋಲನ...</strong></p><p>ದೇಶದ ವಿವಿಧ ಭಾಗಗಳಲ್ಲಿ ತಾಪಮಾ ಏರಿಕೆಯಾಗುತ್ತಿಲ್ಲ, ಬದಲಾಗಿ ದಾಖಲೆಗಳನ್ನು ಮುರಿಯುತ್ತಿದೆ. ವಾರಣಾಸಿ ಮತ್ತು ಪ್ರಯಾಗ್ರಾಜ್ ನಂತಹ ನಗರಗಳು 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿರುವುದು ಉತ್ತರ ಭಾರತದ ಬಯಲು ಸೀಮೆಗಳು ಹೇಗೆ ಕಾದ ಕೆಂಡವಾಗುತ್ತಿವೆ ಎಂಬುದಕ್ಕೆ ಸಾಕ್ಷಿ.</p><p>ವಿದರ್ಭ ಮತ್ತು ಮರಾಠವಾಡ ಭಾಗಗಳಲ್ಲಿ 44 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿರುವುದು ಕೃಷಿ ಮತ್ತು ಜಲಮೂಲಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಪೂರ್ವ ಕರಾವಳಿಯ ಒಡಿಶಾದಲ್ಲಿ ಬಿಸಿಗಾಳಿಗೆ ಶಾಲೆಗಳನ್ನು ಮುಚ್ಚಲಾಗಿದೆ. ಪ್ರತಿಕೂಲ ಹವಾಮಾನವು ಶಿಕ್ಷಣ ಮತ್ತು ದೈನಂದಿನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ.</p>.ಬಿಸಿಗಾಳಿ ನಡುವೆ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದ IMD.ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ, ಮಳೆಯ ಮುನ್ಸೂಚನೆ.<p><strong>ಹೀಟ್ ಡೋಮ್ ಮತ್ತು ಆರ್ದ್ರತೆ...</strong></p><p>ಈ ಬೇಸಿಗೆಯ ತಾಪಮಾನ ಏರಿಕೆಗೆ ಕೇವಲ ಸೂರ್ಯ ರಶ್ಮಿಗಳಲ್ಲ, ಬದಲಾಗಿ ಕೆಲವು ವೈಜ್ಞಾನಿಕ ಸಂಕೀರ್ಣ ಪ್ರಕ್ರಿಯೆಗಳು ಕಾರಣವಾಗಿವೆ.</p><p>ದೇಶದ ವಾಯುಮಂಡಲದ ಮೇಲೆ ಸೃಷ್ಟಿಯಾಗಿರುವ ಅಧಿಕ ಒತ್ತಡದ ವ್ಯವಸ್ಥೆ ಬಿಸಿ ಗಾಳಿಯನ್ನು ಹೊರ ಹೋಗದಂತೆ ತಡೆ ಹಿಡಿದಿದೆ. ಇದು ಕುಕ್ಕರ್ನಂತೆ ಶಾಖವನ್ನು ಒಳಗೆಯೇ ಕುದಿಸುತ್ತಿದೆ.</p><p>ಕರಾವಳಿ ರಾಜ್ಯಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ಆರ್ದ್ರತೆ ಹೆಚ್ಚಿರುವ ಕಾರಣ ಮನಗೆ ಅದು 48 ಡಿಗ್ರಿ ಸೆಲ್ಸಿಯಸ್ ನಂತೆ ಭಾಸವಾಗುತ್ತಿದೆ. ಆರ್ದ್ರ ಬಿಸಿಯ ಪರಿಣಾಮ ಈಗಾಗುತ್ತಿದೆ. ಇದು ನಮ್ಮ ದೇಹದ ಬೆವರುವಿಕೆ ಶಕ್ತಿಯನ್ನು ಕುಂದಿಸಿ ಬಿಸಿಲಾಘತಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.</p>.<p><strong>ಬೆಂಗಳೂರಿನ ಹವಾಮಾನ ಸ್ಥಿತ್ಯಂತರ...</strong></p><p>ಒಂದು ಕಾಲದಲ್ಲಿ 'ಹವಾನಿಯಂತ್ರಿತ ನಗರ' ಎಂದು ಕರೆಯಲಾಗುತ್ತಿದ್ದ ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವುದು ಆತಂಕಕಾರಿ. ವಾತಾವರಣದಲ್ಲಿನ ಕ್ರಯಾನ್ಗಳು ಕರಗುತ್ತಿದ್ದು ನಗರದ ಹಸಿರು ಹೊದಿಕೆ ನಾಶವಾಗುತ್ತಿದೆ. ಅತಿಯಾದ ಸಿಮೆಂಟ್ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಇದಕ್ಕೆ ಕಾರಣ.</p><p>ಚಳಿಗಾಲ ಮುಗಿದ ತಕ್ಷಣವೇ ಬೇಸಿಗೆ ಆರಂಭವಾಗುತ್ತಿದ್ದು ಫೆಬ್ರವರಿ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವುದು ಪರಿಸರ ಅಸಮತೋಲನದ ಸ್ಪಷ್ಟ ಉದಾಹರಣೆ. ಈ ಬದಲಾವಣೆ ವಾತಾವರಣ, ಆಹಾರ ಉತ್ಪಾದನೆ ಮತ್ತು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. </p><p>ಹಸಿರು ವಲಯಗಳನ್ನು ಹೆಚ್ಚಿಸುವುದು ಮತ್ತು ಕೆರೆಗಳನ್ನು ಪುನಶ್ಚೇತನಗೊಳಿಸುವುದು ಇನ್ನು ಮುಂದೆ ಆಯ್ಕೆಯಲ್ಲ ನಮಗೆ ಅನಿವಾರ್ಯತೆಯಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.</p>.ದೆಹಲಿಯಲ್ಲಿ ಬಿಸಿಗಾಳಿ: ರೆಡ್ ಅಲರ್ಟ್ ಘೋಷಣೆ.ಬಿಸಿಗಾಳಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದಲ್ಲಿ ಬೇಸಿಗೆ ಎಂದರೆ ಬಿಸಿಲು ಸಾಮಾನ್ಯ ಎನ್ನಲಾಗುತ್ತಿತ್ತು. ಆದರೀಗ ಸಾಮಾನ್ಯ ಋತುಮಾನದ ಬದಲಾವಣೆಯಾಗಿ ಬೇಸಿಗೆ ಉಳಿದಿಲ್ಲ. ಬದಲಾಗಿ ಹವಾಮಾನ ತುರ್ತುಪರಿಸ್ಥಿತಿಯಾಗಿರುವುದು ವಿಷಾದದ ಸಂಗತಿ.</p><p>ಯಾಕೆಂದರೆ ವಿಶ್ವದ ಅತಿ ಬಿಸಿಯಾದ 25 ನಗರಗಳ ಪೈಕಿ ಭಾರತದ 20 ನಗರಗಳಿರುವುದು ವಿಪರ್ಯಾಸ. ಆಫ್ರಿಕಾ ಅಥವಾ ಅರಬ್ ದೇಶಗಳು ಈ ಹಿಂದೆ ಗ್ಲೊಬಲ್ ಹಾಟ್ ಸ್ಪಾಟ್ ಆಗಿದ್ದವು. ಇದೀಗ ಭಾರತ ಈ ಸ್ಥಾನಪಡೆದುಕೊಳ್ಳುತ್ತಿದೆ.</p><p>ಇದಕ್ಕೆ ಮೂಲ ಕಾರಣ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಹಸಿರು ಹೊದಿಕೆಯ ನಾಶ, ವಿವಿಧ ಮಾಲೀನ್ಯದ ಪರಿಣಾಮ ನಾವು ಅತಿಯಾದ ಬಿಸಿಯನ್ನು ಅನುಭವಿಸುತ್ತಿದ್ದೇವೆ. </p>. <p><strong>ಪ್ರಾದೇಶಿಕ ತಾಪಮಾನದ ಅಸಮತೋಲನ...</strong></p><p>ದೇಶದ ವಿವಿಧ ಭಾಗಗಳಲ್ಲಿ ತಾಪಮಾ ಏರಿಕೆಯಾಗುತ್ತಿಲ್ಲ, ಬದಲಾಗಿ ದಾಖಲೆಗಳನ್ನು ಮುರಿಯುತ್ತಿದೆ. ವಾರಣಾಸಿ ಮತ್ತು ಪ್ರಯಾಗ್ರಾಜ್ ನಂತಹ ನಗರಗಳು 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿರುವುದು ಉತ್ತರ ಭಾರತದ ಬಯಲು ಸೀಮೆಗಳು ಹೇಗೆ ಕಾದ ಕೆಂಡವಾಗುತ್ತಿವೆ ಎಂಬುದಕ್ಕೆ ಸಾಕ್ಷಿ.</p><p>ವಿದರ್ಭ ಮತ್ತು ಮರಾಠವಾಡ ಭಾಗಗಳಲ್ಲಿ 44 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿರುವುದು ಕೃಷಿ ಮತ್ತು ಜಲಮೂಲಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಪೂರ್ವ ಕರಾವಳಿಯ ಒಡಿಶಾದಲ್ಲಿ ಬಿಸಿಗಾಳಿಗೆ ಶಾಲೆಗಳನ್ನು ಮುಚ್ಚಲಾಗಿದೆ. ಪ್ರತಿಕೂಲ ಹವಾಮಾನವು ಶಿಕ್ಷಣ ಮತ್ತು ದೈನಂದಿನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ.</p>.ಬಿಸಿಗಾಳಿ ನಡುವೆ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದ IMD.ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ, ಮಳೆಯ ಮುನ್ಸೂಚನೆ.<p><strong>ಹೀಟ್ ಡೋಮ್ ಮತ್ತು ಆರ್ದ್ರತೆ...</strong></p><p>ಈ ಬೇಸಿಗೆಯ ತಾಪಮಾನ ಏರಿಕೆಗೆ ಕೇವಲ ಸೂರ್ಯ ರಶ್ಮಿಗಳಲ್ಲ, ಬದಲಾಗಿ ಕೆಲವು ವೈಜ್ಞಾನಿಕ ಸಂಕೀರ್ಣ ಪ್ರಕ್ರಿಯೆಗಳು ಕಾರಣವಾಗಿವೆ.</p><p>ದೇಶದ ವಾಯುಮಂಡಲದ ಮೇಲೆ ಸೃಷ್ಟಿಯಾಗಿರುವ ಅಧಿಕ ಒತ್ತಡದ ವ್ಯವಸ್ಥೆ ಬಿಸಿ ಗಾಳಿಯನ್ನು ಹೊರ ಹೋಗದಂತೆ ತಡೆ ಹಿಡಿದಿದೆ. ಇದು ಕುಕ್ಕರ್ನಂತೆ ಶಾಖವನ್ನು ಒಳಗೆಯೇ ಕುದಿಸುತ್ತಿದೆ.</p><p>ಕರಾವಳಿ ರಾಜ್ಯಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ಆರ್ದ್ರತೆ ಹೆಚ್ಚಿರುವ ಕಾರಣ ಮನಗೆ ಅದು 48 ಡಿಗ್ರಿ ಸೆಲ್ಸಿಯಸ್ ನಂತೆ ಭಾಸವಾಗುತ್ತಿದೆ. ಆರ್ದ್ರ ಬಿಸಿಯ ಪರಿಣಾಮ ಈಗಾಗುತ್ತಿದೆ. ಇದು ನಮ್ಮ ದೇಹದ ಬೆವರುವಿಕೆ ಶಕ್ತಿಯನ್ನು ಕುಂದಿಸಿ ಬಿಸಿಲಾಘತಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.</p>.<p><strong>ಬೆಂಗಳೂರಿನ ಹವಾಮಾನ ಸ್ಥಿತ್ಯಂತರ...</strong></p><p>ಒಂದು ಕಾಲದಲ್ಲಿ 'ಹವಾನಿಯಂತ್ರಿತ ನಗರ' ಎಂದು ಕರೆಯಲಾಗುತ್ತಿದ್ದ ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವುದು ಆತಂಕಕಾರಿ. ವಾತಾವರಣದಲ್ಲಿನ ಕ್ರಯಾನ್ಗಳು ಕರಗುತ್ತಿದ್ದು ನಗರದ ಹಸಿರು ಹೊದಿಕೆ ನಾಶವಾಗುತ್ತಿದೆ. ಅತಿಯಾದ ಸಿಮೆಂಟ್ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಇದಕ್ಕೆ ಕಾರಣ.</p><p>ಚಳಿಗಾಲ ಮುಗಿದ ತಕ್ಷಣವೇ ಬೇಸಿಗೆ ಆರಂಭವಾಗುತ್ತಿದ್ದು ಫೆಬ್ರವರಿ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವುದು ಪರಿಸರ ಅಸಮತೋಲನದ ಸ್ಪಷ್ಟ ಉದಾಹರಣೆ. ಈ ಬದಲಾವಣೆ ವಾತಾವರಣ, ಆಹಾರ ಉತ್ಪಾದನೆ ಮತ್ತು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. </p><p>ಹಸಿರು ವಲಯಗಳನ್ನು ಹೆಚ್ಚಿಸುವುದು ಮತ್ತು ಕೆರೆಗಳನ್ನು ಪುನಶ್ಚೇತನಗೊಳಿಸುವುದು ಇನ್ನು ಮುಂದೆ ಆಯ್ಕೆಯಲ್ಲ ನಮಗೆ ಅನಿವಾರ್ಯತೆಯಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.</p>.ದೆಹಲಿಯಲ್ಲಿ ಬಿಸಿಗಾಳಿ: ರೆಡ್ ಅಲರ್ಟ್ ಘೋಷಣೆ.ಬಿಸಿಗಾಳಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>