<p>ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಜಾಗತಿಕ ಕಚ್ಚಾತೈಲ ಪೂರೈಕೆ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಹಲವು ರಾಷ್ಟ್ರಗಳ ನಿದ್ದೆಗೆಡಿಸಿದೆ. ತೈಲ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವೂ ರಷ್ಯಾದಿಂದ ತೈಲ ಖರೀದಿಸಲು ಮುಂದಾಗಿದೆ. ಇದಕ್ಕೆ ‘ಅನುಮತಿ’ ನೀಡಿರುವುದಾಗಿ ಅಮೆರಿಕ ಹೇಳಿದೆ. ಹಾಗಿದ್ದರೆ ಯುದ್ಧವಷ್ಟೇ ಈ ಸಂಕಷ್ಟಕ್ಕೆ ಕಾರಣವೇ ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ.</p><p>ಪಶ್ಚಿಮ ಏಷ್ಯಾದಿಂದ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪೂರೈಕೆ ಆಗುವ ಕಚ್ಚಾತೈಲವು ಹೊರ್ಮುಜ್ ಜಲಸಂಧಿ ಮೂಲಕವೇ ಸಾಗುತ್ತದೆ. ಈ ಜಲಸಂಧಿಗೆ ಹೊಂದಿಕೊಂಡಿರುವ ಇರಾನ್, ಅದನ್ನು ಮುಚ್ಚಲಿದೆ ಎಂಬ ವದಂತಿಯೇ ದಟ್ಟವಾಗಿದೆ. ಆದರೆ ಇದೇ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಲ್ಲಿ ಬಹುತೇಕವು ವಿಮೆ ಇಲ್ಲದೆ ಸಂಚರಿಸುತ್ತಿದ್ದು, ವಿಮಾ ಕಂಪನಿಗಳ ನಿರ್ಧಾರವೂ ಈ ಮಾರ್ಗದ ಮೂಲಕ ಹಡಗುಗಳ ಪ್ರಯಾಣಕ್ಕೆ ತಡೆಯೊಡ್ಡಿದೆ ಎಂಬುದೂ ಅಷ್ಟೇ ಸತ್ಯ ಎಂದು ವರದಿಗಳು ಹೇಳುತ್ತವೆ.</p><p>ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಸರಾಸರಿ 107 ಕಾರ್ಗೊ ಹಡಗುಗಳು ಸಾಗುತ್ತವೆ. ಹೀಗಾಗಿ ಇದನ್ನು ಜಾಗತಿಕ ಆರ್ಥಿಕತೆಯ ಇಂಧನ ಜೀವಸೆಲೆ ಎಂದೇ ಕರೆಯಲಾಗುತ್ತದೆ. ಆದರೆ ಈ ಯುದ್ಧ ಆರಂಭವಾದಾಗಿನಿಂದ 19 ಹಡಗುಗಳು ಮಾತ್ರ ಇಲ್ಲಿ ಸಾಗಿವೆ. ಯಾವುದೇ ಕ್ಷಿಪಣಿ ದಾಳಿ ಇಲ್ಲದೇ ಶೇ 81ರಷ್ಟು ಹಡಗುಗಳ ಸಂಚಾರ ಕುಸಿತಗೊಂಡಿದೆ. ಇದಕ್ಕೆ ಕಾರಣ ದುರಂತಕ್ಕೀಡಾದರೆ ವಿಮೆ ನೀಡಲಾಗದು ಎಂಬ ವಿಮಾ ಕಂಪನಿಗಳ ಒಂದು ಹೇಳಿಕೆಯಷ್ಟೇ. </p><p>ಪರ್ಷಿಯನ್ ಕೊಲ್ಲಿಯೊಂದಿಗೆ ಒಮಾನ್ ಕೊಲ್ಲಿ ಹಾಗೂ ಅರಬ್ಬೀ ಸಮುದ್ರವನ್ನು ಜೋಡಿಸುವ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಪ್ರಮಾಣವು ಜಗತ್ತಿನ 5ನೇ ಒಂದು ಭಾಗದಷ್ಟಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಎದುರಾದಾಗೆಲ್ಲಾ ಎದುರಾಗುವ ಏಕೈಕ ಪ್ರಶ್ನೆ, ‘ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಲಿದೆಯೇ?’ ಎಂಬುದು.</p><p>ಆದರೆ ಇತ್ತೀಚಿನ ಕೆಲ ಬೆಳವಣಿಗೆಯನ್ನು ಗಮನಿಸಿದಲ್ಲಿ ಈ ಜಲಸಂಧಿ ಮುಚ್ಚಲು ಯುದ್ಧವೇ ಆಗಬೇಕೆಂದೇನೂ ಇಲ್ಲ ಅಥವಾ ಸೇನೆಯೇ ಬೇಕು ಎಂದೂ ಇಲ್ಲ. ಕ್ಷಿಪಣಿ ಅಥವಾ ಯುದ್ಧನೌಕೆಯ ಬದಲು ವಿಮಾ ಕಂಪನಿಗಳ ನಿರ್ಧಾರವೂ ಈ ಜಲಸಂಧಿಯ ಹೆಸರಿನಲ್ಲಿ ಜಗತ್ತಿನ ಆರ್ಥಿಕ ಮಾರುಕಟ್ಟೆಯನ್ನು ನಿಯಂತ್ರಿಸುವಷ್ಟು ಶಕ್ತಿಶಾಲಿಯಾಗಿದೆ ಎಂಬುದು ಅಚ್ಚರಿ ಎನಿಸಿದರೂ ನಿಜ.</p><p>ಕಡಲ ವಿಮೆ ಹೇಗೆ ಕಾರ್ಯನಿರ್ವಹಿಸುತ್ತದೆ, ಜಾಗತಿಕ ಹಡಗುಗಳ ಸಂಚಾರವನ್ನು ವಿಮಾ ಕಂಪನಿಗಳು ಹೇಗೆ ನಿಯಂತ್ರಿಸುತ್ತವೆ ಮತ್ತು ಇವುಗಳಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳು ಈಗ ಬಹುಚರ್ಚಿತ ವಿಷಯವಾಗಿವೆ.</p>.ಹಿರಿಯಣ್ಣನ ರಕ್ಷಣೆಯ ನೆಪ: 80 ದೇಶಗಳಲ್ಲಿ ಅಮೆರಿಕದ 750ಕ್ಕೂ ಹೆಚ್ಚು ಸೇನಾನೆಲೆಗಳು.ಮುಂದೆಂದೂ ದಾಳಿ ಮಾಡಲ್ಲ: ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ.<h4>ವಿಮೆ ಇಲ್ಲದೆ ಏಕೆ ಹಡಗುಗಳು ಸಂಚರಿಸಲಾಗದು?</h4><p>ಆಧುನಿಕ ಜಗತ್ತಿನಲ್ಲಿ ಸರಕು ಸಾಗಣೆಯು ವಿಮೆ ಮೇಲೆ ತೀವ್ರವಾಗಿ ಅವಲಂಬಿತವಾಗಿವೆ. ಬಹುತೇಕ ಎಲ್ಲಾ ವಾಣಿಜ್ಯ ಸರಕು ಸಾಗಣೆ ಹಡಗುಗಳು ಅಂತರರಾಷ್ಟ್ರೀಯ ಜಲಮಾರ್ಗಕ್ಕೆ ಇಳಿಯುವ ಮುನ್ನ ಅಥವಾ ಬಂದರು ಸೇರುವ ಮುನ್ನ ವಿಮೆ ಹೊಂದುವುದು ಕಡ್ಡಾಯ ಎಂಬಂತಾಗಿದೆ.</p><p>ಹಡಗಿಗೆ ಹಾನಿಯಾದರೆ, ಸರಕು ನಷ್ಟವಾದರೆ, ಸಿಬ್ಬಂದಿ ಅಥವಾ ಮೂರನೇ ವ್ಯಕ್ತಿಗೆ ಹಾನಿಯಾದರೆ, ಯುದ್ಧ ಮತ್ತು ಸಂಘರ್ಷ ಸಂಬಂಧಿತ ಅಪಾಯಗಳಿಗೆ ಈ ಕಡಲ ವಿಮೆಯು ಅನ್ವಯಿಸುತ್ತದೆ. ವಿಮೆ ಇಲ್ಲವಾದರೆ ಶಿಪ್ಪಿಂಗ್ ಕಂಪನಿಗಳು ಹಡಗನ್ನು ಇಳಿಸಲು ನಿರಾಕರಿಸುತ್ತವೆ. ಹೀಗಾಗಿ ಒಂದು ತೈಲ ಟ್ಯಾಂಕರ್ನ ಒಟ್ಟು ಮೌಲ್ಯವು 10ರಿಂದ 15 ಕೋಟಿ ಅಮೆರಿಕನ್ ಡಾಲರ್ನಷ್ಟಿರುತ್ತದೆ. ಹೀಗಾಗಿ ವಿಮೆ ಇಲ್ಲದೆ ಹಡಗನ್ನು ಸಮುದ್ರಕ್ಕಿಳಿಸುವುದು ಯಾವುದೇ ಕಂಪನಿಗಾದರೂ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡಂತೆಯೇ.</p><p>ಈಗ ಪಶ್ಚಿಮ ಏಷ್ಯಾ ಸಂಘರ್ಷದ ವಿಷಯಕ್ಕೆ ಬಂದಲ್ಲಿ, ಯುದ್ಧದ ಸಂದರ್ಭದಲ್ಲಿ ಸಂಚರಿಸುವ ಹಡಗುಗಳಿಗೆ ಹಲವು ವಿಮಾ ಕಂಪನಿಗಳು ವಿಮೆ ನೀಡಲು ನಿರಾಕರಿಸಿದ್ದು ಮತ್ತು ಯುದ್ಧ ಅಪಾಯಕ್ಕಿದ್ದ ವಿಮೆಯ ರಕ್ಷೆಯನ್ನು ಹಿಂಪಡೆದಿದ್ದೇ ಕಾರಣ. ವಿಮಾ ಕಂಪನಿಗಳ ಈ ನಿರ್ಧಾರದಿಂದ ಕೆಲ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರೆ, ಇನ್ನೂ ಕೆಲವು ಮಾರ್ಗವನ್ನೇ ಬದಲಿಸಿದ್ದು ವರದಿಯಾಗಿದೆ.</p>.ಅಮೆರಿಕ, ಇಸ್ರೇಲ್ ವಿರುದ್ಧ ಪ್ರತೀಕಾರ: ದುಬೈ, ದೋಹಾ ಮೇಲೆ ಇರಾನ್ ದಾಳಿ.ಎಪ್ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!.<h4>ಜಾಗತಿಕ ಕಡಲ ವಿಮೆಯ ರಚನೆ ಹೇಗಿದೆ?</h4><p>ಜಾಗತಿಕ ಸರಕು ಸಾಗಣೆ ಉದ್ಯಮವು ರಕ್ಷಣೆ ಮತ್ತು ಪರಿಹಾರ ಕ್ಲಬ್ ಎಂಬ ಪರಿಣತ ವಿಮಾ ನೀಡುವ ಕಂಪನಿಗಳನ್ನು ಅವಲಂಬಿಸಿವೆ. ಜಗತ್ತಿನಲ್ಲಿರುವ ವಾಣಿಜ್ಯ ಹಡಗುಗಳಲ್ಲಿ ಶೇ 90ರಷ್ಟು ಬೆರಳೆಣಿಕೆಯಷ್ಟಿರುವ ಇಂಥ ಕ್ಲಬ್ಗಳ ಮೂಲಕ ವಿಮೆಯ ರಕ್ಷಣೆಯ ಪಡೆದಿವೆ. ಇವುಗಳು ಹಡಗುಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಉಂಟಾಗುವ ನಷ್ಟಕ್ಕೆ ರಕ್ಷಣೆ ನೀಡುವ ಹೊಣೆ ಹೊತ್ತಿವೆ.</p><p>ಆದಾಗ್ಯೂ, ಈ ವಿಮಾ ಕಂಪನಿಗಳು ಮರುವಿಮಾ ಮಾರುಕಟ್ಟೆ ಮೇಲೆ ಅವಲಂಬಿತವಾಗಿವೆ. ಇವುಗಳಲ್ಲಿ ಬಹುತೇಕವು ಲಂಡನ್ನಲ್ಲಿವೆ. ಲಾಯ್ಡ್ಸ್ ಆಫ್ ಲಂಡನ್ ಸೇರಿದಂತೆ ಹಲವು ಪ್ರಮುಖವು. </p><p>ಜಾಗತಿಕ ರಾಜಕೀಯ ಅಪಾಯಗಳು ಎದುರಾಗುತ್ತಲೇ, ಮರುವಿಮಾ ಕಂಪನಿಗಳು ಕೆಲ ಮಾರ್ಗಗಳನ್ನು ‘ಅಪಾಯಕಾರಿ’ ಎಂದು ಘೋಷಿಸುತ್ತವೆ. ಇಂಥ ಸಂದರ್ಭಗಳಲ್ಲಿ ಯುದ್ಧ ಅಪಾಯದ ವ್ಯಾಪ್ತಿಯನ್ನು ಅವು ಹಿಂಪಡೆಯಬಹುದು, ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಬಹುದು, ಹಡಗು ಕಂಪನಿಗಳೇ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು, ಜಲಮಾರ್ಗಗಳು ಭೌತಿಕವಾಗಿ ತೆರೆದಿದ್ದರೂ, ಹಣಕಾಸಿನ ಅಪಾಯ ನಿಯಂತ್ರಣಕ್ಕೆ ಹಡಗುಗಳ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಬಹುದು.</p><p>ಈ ಕಾರಣಗಳಿಂದಾಗಿ ಅಪಾಯ ಎದುರಾದಾಗೆಲ್ಲಾ ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರವು ತೀವ್ರವಾಗಿ ಕುಸಿಯಬಹುದು ಎಂದು ಹಡಗು ಸಾಗಣೆ ಉದ್ಯಮದ ವಿಶ್ಲೇಷಕರು ಹಾಗೂ ಸಾಗರ ಪಥದ ದತ್ತಾಂಶಗಳು ಹೇಳುತ್ತವೆ.</p><p>ಸಾಮಾನ್ಯ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಸರಾಸರಿ 100 ಅಥವಾ ಅದಕ್ಕಿಂತ ಹೆಚ್ಚು ಹಡಗುಗಳು ಸಂಚರಿಸುತ್ತವೆ. ಆದರೆ ಸಂಘರ್ಷ ಎದುರಾದಾಗ ಹಡಗುಗಳು ಯುದ್ಧ ಪ್ರದೇಶದಿಂದ ದೂರದಲ್ಲಿ ಲಂಗರು ಹಾಕುತ್ತವೆ ಅಥವಾ ತಮ್ಮ ಮಾರ್ಗವನ್ನು ಬದಲಿಸುತ್ತವೆ. ಇವುಗಳಿಗೆ ಬಹುಮುಖ್ಯ ಕಾರಣ ವಿಮಾ ಕಂಪನಿಗಳಿಂದ ಬಾರದ ಸ್ಪಷ್ಟ ಸಂದೇಶ ಅಥವಾ ಭದ್ರತಾ ಖಾತ್ರಿಯಾಗಿರುತ್ತದೆ ಎಂದು ದಿ ಗಾರ್ಡಿಯನ್ ಮತ್ತು ರಾಯಿಟರ್ಸ್ ವರದಿಗಳು ಹೇಳಿವೆ.</p><p>ಜಾಗತಿಕ ಸರಕು ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಶೇ 20ರಷ್ಟು ಈ ಕಿರು ಜಲಸಂಧಿಯ ಮೂಲಕವೇ ನಡೆಯುವುದರಿಂದ ಕೆಲವೊಮ್ಮೆ ತಾತ್ಕಾಲಿಕ ಅಡೆತಡೆಗಳೂ ದೊಡ್ಡ ಮಟ್ಟದ ನಷ್ಟವನ್ನು ಉಂಟುಮಾಡುತ್ತವೆ.</p>.Fact Check: ಇರಾನ್ ವಿರುದ್ಧ ದಾಳಿಗೆ ಅಮೆರಿಕದಿಂದ ಭಾರತದ ನೌಕಾ ನೆಲೆಗಳ ಬಳಕೆ?.ಆಳ ಅಗಲ: ಅಮೆರಿಕದ ಅಂಕೆಗೆ ಸಿಗದ ಇರಾನ್.<h4>ಯುದ್ಧ ಅಪಾಯ ವಿಮೆಯು ದುಬಾರಿ</h4><p>ಹಡಗುಗಳಿಗೆ ವಿಮೆಯ ರಕ್ಷೆ ಇದ್ದರೂ, ಸಂಘರ್ಷದ ಸಂದರ್ಭದಲ್ಲಿ ಅದು ಏಕಾಏಕಿ ದುಬಾರಿಯಾಗುತ್ತದೆ. ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಉದ್ಯಮದ ವಿಶ್ಲೇಷಕರು ನೀಡಿರುವ ಮಾಹಿತಿಯನ್ವಯ, ಯುದ್ಧ ಅಪಾಯ ಪ್ರೀಮಿಯಂ ಮೊತ್ತವು ಹಡಗಿನ ಒಟ್ಟು ಮೌಲ್ಯದ ಶೇ 0.2ರಿಂದ ಶೇ 1ರಷ್ಟು ಏರಿಕೆಯಾಗುತ್ತದೆ. ಅಂದರೆ ₹919 ಕೋಟಿಯ ಒಂದು ಹಡಗಿಗೆ ₹19 ಕೋಟಿಯಷ್ಟು ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಬೇಕು. ಇದರಿಂದಾಗಿ ಲಾಭಾಂಶ ಕಡಿಮೆಯಾಗುವ ಭಯದಿಂದ ಬಹಳಷ್ಟು ಹಡಗು ಕಂಪನಿಗಳು ವಿಳಂಬ ನೀತಿ ಅಥವಾ ಪ್ರಯಾಣವನ್ನೇ ರದ್ದುಪಡಿಸುವ ನಿರ್ಧಾರಕ್ಕೆ ತಲುಪುತ್ತವೆ ಎಂದು ವಿಶ್ಲೇಷಿಸಲಾಗಿದೆ.</p>.<h4>ಕೆಲವೊಮ್ಮೆ ಸರ್ಕಾರಗಳ ಮಧ್ಯಪ್ರವೇಶ</h4><p>ಇಂಧನ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿರುವುದರಿಂದ ಕೆಲವೊಮ್ಮೆ ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುತ್ತದೆ. ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಹಡಗು ಸಾಗಲು ವಿಮಾ ಕಂಪನಿಗಳಿಗೆ ಸರ್ಕಾರಗಳು ತಮ್ಮ ಹಿತಾಸಕ್ತಿಗಾಗಿ ಆಧಾರ ನೀಡಿದ ಉದಾಹರಣೆಗಳೂ ಇವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದರಿಂದಾಗಿ ಕೆಲ ಕಂಪನಿಗಳು ಹಡಗುಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುತ್ತವೆ.</p>.<h4>ಇಂಥ ಅಡಚಣೆಗಳಿಂದ ಯಾರಿಗೆ ಹೆಚ್ಚು ಹಾನಿ?</h4><p>ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾದರೆ ಅಥವಾ ವಿಳಂಬವಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ತೊಂದರೆ ಉಂಟಾಗಲಿದೆ.</p><p><strong>ಅವುಗಳಲ್ಲಿ ಪ್ರಮುಖವು...</strong></p><p><strong>ಇರಾನ್:</strong> ಕಚ್ಚಾತೈಲ ರಫ್ತು ಮಾಡುವ ಪ್ರಮುಖ ರಾಷ್ಟ್ರವಾದ ಇರಾನ್ ಈ ಹೊರ್ಮುಜ್ ಜಲಸಂಧಿಯನ್ನೇ ಅವಲಂಬಿಸಿದೆ. ಒಂದೊಮ್ಮೆ ಈ ಮಾರ್ಗದಲ್ಲಿ ಹಡಗುಗಳ ಕಾರ್ಯಾಚರಣೆ ಕುಸಿದರೆ, ಇರಾನ್ ರಫ್ತು ಪ್ರಮಾಣ ಕುಗ್ಗುತ್ತದೆ ಮತ್ತು ಆದಾಯವೂ ಇಳಿಮುಖವಾಗುತ್ತದೆ.</p><p><strong>ಚೀನಾ:</strong> ದೇಶದ ಇಂಧನ ಭದ್ರತೆಗಾಗಿ ಚೀನಾ ಇದೇ ಮಾರ್ಗವನ್ನು ಹೆಚ್ಚಾಗಿ ಅವಲಂಬಿಸಿದೆ. ಚೀನಾ ಅತಿ ಹೆಚ್ಚು ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಜಲಸಂಧಿಯಲ್ಲಿನ ಸಂಘರ್ಷಗಳು ಅದಕ್ಕೆ ಹೆಚ್ಚು ನಷ್ಟವನ್ನುಂಟು ಮಾಡಿದೆ.</p><p><strong>ಕೊಲ್ಲಿ ರಾಷ್ಟ್ರದ ಉತ್ಪಾದಕರು:</strong> ಸೌದಿ ಅರೆಬಿಯಾ, ಸಂಯುಕ್ತ ಅರಬ್ ಸಂಸ್ಥಾನ, ಕತಾರ್, ಕುವೈತ್ ಮತ್ತು ಇರಾಕ್ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದಿಸುತ್ತಿದ್ದು, ಅವುಗಳ ರಫ್ತಿಗೆ ಈ ಮಾರ್ಗವನ್ನೇ ಅವಲಂಬಿಸಿವೆ. ಪ್ರತಿನಿತ್ಯ ಈ ಮಾರ್ಗದಲ್ಲಿ 2 ಕೋಟಿ ಬ್ಯಾರಲ್ ಕಚ್ಚಾತೈಲ ಸಾಗಣೆಯಾಗುತ್ತದೆ.</p>.ಆಯತೊಲ್ಲಾ ಅಲಿ ಖಮೇನಿ ಸಾವಿನ 6 ದಿನಗಳ ಬಳಿಕ ಭಾರತದ ಸಂತಾಪ ದಾಖಲು.ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಹತ್ಯೆ ಗ್ಯಾರಂಟಿ: ಇಸ್ರೇಲ್.<h4>ಭಾರತ ಹೇಗೆ ಬಾಧಿತ?</h4><p>ಭಾರತವು ತನ್ನ ಅಗತ್ಯದ ಶೇ 85ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಹೊರ್ಮುಜ್ ಜಲಸಂಧಿ ಮೂಲಕ ಬರುವ ಪ್ರಮಾಣ ಶೇ 30ರಷ್ಟು. ಇದರಲ್ಲಿ ಬಹುಪಾಲು ಮಧ್ಯ ಏಷ್ಯಾ ಭಾಗದಿಂದ ಪೂರೈಕೆಯಾಗುತ್ತಿದೆ. ಒಂದೊಮ್ಮೆ ಸಾಗಣೆ ವೆಚ್ಚ ಹೆಚ್ಚಾದರೆ, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.</p>.<h4>ಜಾಗತಿಕ ತೈಲ ಬೆಲೆ ಹೆಚ್ಚಳ ಸಾಧ್ಯತೆ</h4><p>ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಭಾರತದಲ್ಲಿ ಶನಿವಾರ ₹60ರಷ್ಟು ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಆಲೋಚಿಸುವುದಾದರೆ, ಹಡಗು ವಿಮಾ ಕಂತುಗಳೂ ಗಣನೀಯವಾಗಿ ಹೆಚ್ಚಳವಾಗಿದೆ. ಇದು ಹಣದುಬ್ಬರದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. </p><p>ಭಾರತವು ತನಗೆ ಕಚ್ಚಾತೈಲ ಪೂರೈಕೆ ಮಾಡಲು ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ, ರಷ್ಯಾವನ್ನೂ ಅವಲಂಬಿಸಿರುವುದರಿಂದ ಹಾನಿಯ ಪ್ರಮಾಣವನ್ನು ತಗ್ಗಿಸಿಕೊಂಡಿದೆ.</p><p>ಜಾಗತಿಕ ರಾಜಕೀಯ ಸಂಘರ್ಷಗಳನ್ನು ಸದಾ ಸೇನಾ ಬಲದ ಆಧಾರದಲ್ಲೇ ನೋಡಲಾಗುತ್ತಿತ್ತು. ಆಧುನಿಕ ಜಾಗತಿಕ ವ್ಯಾಪಾರದ ವಿಷಯದಲ್ಲಿ ಹಣಕಾಸು ಮತ್ತು ಅಪಾಯ ನಿರ್ವಹಣೆ ವ್ಯವಸ್ಥೆಯಿಂದಲೂ ನಿರ್ವಹಿಸಲ್ಪಡುತ್ತಿದೆ. ಕಡಲ ಸಾರಿಗೆ ವಿಷಯದಲ್ಲಿ ವಿಮಾ ಮಾರುಕಟ್ಟೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಒಂದೊಮ್ಮೆ ಅಪಾಯವು ತೀರಾ ಹೆಚ್ಚಾದಲ್ಲಿ ಮತ್ತು ವಿಮಾ ಕಂಪನಿಗಳು ರಕ್ಷಣೆಯನ್ನು ಹಿಂಪಡೆದಲ್ಲಿ ಕಡಲ ಸರಕು ಸಾಗಣೆ ಸಂಪೂರ್ಣ ಸ್ತಬ್ಧವಾಗುವ ಹಂತಕ್ಕೆ ತಲುಪುತ್ತದೆ.</p><p>ಇವೆಲ್ಲದರ ಪರಿಣಾಮ, ದಿಗ್ಬಂಧನವಿಲ್ಲದಿದ್ದರೂ ಜಾಗತಿಕ ವ್ಯಾಪಾರ ಮಾರ್ಗದಲ್ಲಿ ವಿಮೆ ಮತ್ತು ಮರುವಿಮಾ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವ ಸಣ್ಣ ವ್ಯತ್ಯಾಸವೂ ಜಾಗತಿಕ ಆರ್ಥಿಕ ಪರಿಸ್ಥಿತಿ ಮೇಲೆ ಗಣನೀಯ ಪರಿಣಾಮ ಬೀರುವುದು ಇಂದಿನ ವಾಸ್ತವ.</p><p><strong>ಆಧಾರ: ರಾಯಿಟರ್ಸ್, ದಿ ಗಾರ್ಡಿಯನ್, ದಿ ವಾಲ್ಸ್ಟ್ರೀಟ್ ಜರ್ನಲ್ ವರದಿ, ಕಡಲ ಸಾರಿಗೆ ವಿಮಾ ಉದ್ಯಮದ ವಿಶ್ಲೇಷಣೆ ಮತ್ತು ಸರಕು ಸಾಗಣೆ ಕ್ಷೇತ್ರದ ಮಾಹಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಜಾಗತಿಕ ಕಚ್ಚಾತೈಲ ಪೂರೈಕೆ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಹಲವು ರಾಷ್ಟ್ರಗಳ ನಿದ್ದೆಗೆಡಿಸಿದೆ. ತೈಲ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವೂ ರಷ್ಯಾದಿಂದ ತೈಲ ಖರೀದಿಸಲು ಮುಂದಾಗಿದೆ. ಇದಕ್ಕೆ ‘ಅನುಮತಿ’ ನೀಡಿರುವುದಾಗಿ ಅಮೆರಿಕ ಹೇಳಿದೆ. ಹಾಗಿದ್ದರೆ ಯುದ್ಧವಷ್ಟೇ ಈ ಸಂಕಷ್ಟಕ್ಕೆ ಕಾರಣವೇ ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ.</p><p>ಪಶ್ಚಿಮ ಏಷ್ಯಾದಿಂದ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪೂರೈಕೆ ಆಗುವ ಕಚ್ಚಾತೈಲವು ಹೊರ್ಮುಜ್ ಜಲಸಂಧಿ ಮೂಲಕವೇ ಸಾಗುತ್ತದೆ. ಈ ಜಲಸಂಧಿಗೆ ಹೊಂದಿಕೊಂಡಿರುವ ಇರಾನ್, ಅದನ್ನು ಮುಚ್ಚಲಿದೆ ಎಂಬ ವದಂತಿಯೇ ದಟ್ಟವಾಗಿದೆ. ಆದರೆ ಇದೇ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಲ್ಲಿ ಬಹುತೇಕವು ವಿಮೆ ಇಲ್ಲದೆ ಸಂಚರಿಸುತ್ತಿದ್ದು, ವಿಮಾ ಕಂಪನಿಗಳ ನಿರ್ಧಾರವೂ ಈ ಮಾರ್ಗದ ಮೂಲಕ ಹಡಗುಗಳ ಪ್ರಯಾಣಕ್ಕೆ ತಡೆಯೊಡ್ಡಿದೆ ಎಂಬುದೂ ಅಷ್ಟೇ ಸತ್ಯ ಎಂದು ವರದಿಗಳು ಹೇಳುತ್ತವೆ.</p><p>ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಸರಾಸರಿ 107 ಕಾರ್ಗೊ ಹಡಗುಗಳು ಸಾಗುತ್ತವೆ. ಹೀಗಾಗಿ ಇದನ್ನು ಜಾಗತಿಕ ಆರ್ಥಿಕತೆಯ ಇಂಧನ ಜೀವಸೆಲೆ ಎಂದೇ ಕರೆಯಲಾಗುತ್ತದೆ. ಆದರೆ ಈ ಯುದ್ಧ ಆರಂಭವಾದಾಗಿನಿಂದ 19 ಹಡಗುಗಳು ಮಾತ್ರ ಇಲ್ಲಿ ಸಾಗಿವೆ. ಯಾವುದೇ ಕ್ಷಿಪಣಿ ದಾಳಿ ಇಲ್ಲದೇ ಶೇ 81ರಷ್ಟು ಹಡಗುಗಳ ಸಂಚಾರ ಕುಸಿತಗೊಂಡಿದೆ. ಇದಕ್ಕೆ ಕಾರಣ ದುರಂತಕ್ಕೀಡಾದರೆ ವಿಮೆ ನೀಡಲಾಗದು ಎಂಬ ವಿಮಾ ಕಂಪನಿಗಳ ಒಂದು ಹೇಳಿಕೆಯಷ್ಟೇ. </p><p>ಪರ್ಷಿಯನ್ ಕೊಲ್ಲಿಯೊಂದಿಗೆ ಒಮಾನ್ ಕೊಲ್ಲಿ ಹಾಗೂ ಅರಬ್ಬೀ ಸಮುದ್ರವನ್ನು ಜೋಡಿಸುವ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಪ್ರಮಾಣವು ಜಗತ್ತಿನ 5ನೇ ಒಂದು ಭಾಗದಷ್ಟಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಎದುರಾದಾಗೆಲ್ಲಾ ಎದುರಾಗುವ ಏಕೈಕ ಪ್ರಶ್ನೆ, ‘ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಲಿದೆಯೇ?’ ಎಂಬುದು.</p><p>ಆದರೆ ಇತ್ತೀಚಿನ ಕೆಲ ಬೆಳವಣಿಗೆಯನ್ನು ಗಮನಿಸಿದಲ್ಲಿ ಈ ಜಲಸಂಧಿ ಮುಚ್ಚಲು ಯುದ್ಧವೇ ಆಗಬೇಕೆಂದೇನೂ ಇಲ್ಲ ಅಥವಾ ಸೇನೆಯೇ ಬೇಕು ಎಂದೂ ಇಲ್ಲ. ಕ್ಷಿಪಣಿ ಅಥವಾ ಯುದ್ಧನೌಕೆಯ ಬದಲು ವಿಮಾ ಕಂಪನಿಗಳ ನಿರ್ಧಾರವೂ ಈ ಜಲಸಂಧಿಯ ಹೆಸರಿನಲ್ಲಿ ಜಗತ್ತಿನ ಆರ್ಥಿಕ ಮಾರುಕಟ್ಟೆಯನ್ನು ನಿಯಂತ್ರಿಸುವಷ್ಟು ಶಕ್ತಿಶಾಲಿಯಾಗಿದೆ ಎಂಬುದು ಅಚ್ಚರಿ ಎನಿಸಿದರೂ ನಿಜ.</p><p>ಕಡಲ ವಿಮೆ ಹೇಗೆ ಕಾರ್ಯನಿರ್ವಹಿಸುತ್ತದೆ, ಜಾಗತಿಕ ಹಡಗುಗಳ ಸಂಚಾರವನ್ನು ವಿಮಾ ಕಂಪನಿಗಳು ಹೇಗೆ ನಿಯಂತ್ರಿಸುತ್ತವೆ ಮತ್ತು ಇವುಗಳಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳು ಈಗ ಬಹುಚರ್ಚಿತ ವಿಷಯವಾಗಿವೆ.</p>.ಹಿರಿಯಣ್ಣನ ರಕ್ಷಣೆಯ ನೆಪ: 80 ದೇಶಗಳಲ್ಲಿ ಅಮೆರಿಕದ 750ಕ್ಕೂ ಹೆಚ್ಚು ಸೇನಾನೆಲೆಗಳು.ಮುಂದೆಂದೂ ದಾಳಿ ಮಾಡಲ್ಲ: ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ.<h4>ವಿಮೆ ಇಲ್ಲದೆ ಏಕೆ ಹಡಗುಗಳು ಸಂಚರಿಸಲಾಗದು?</h4><p>ಆಧುನಿಕ ಜಗತ್ತಿನಲ್ಲಿ ಸರಕು ಸಾಗಣೆಯು ವಿಮೆ ಮೇಲೆ ತೀವ್ರವಾಗಿ ಅವಲಂಬಿತವಾಗಿವೆ. ಬಹುತೇಕ ಎಲ್ಲಾ ವಾಣಿಜ್ಯ ಸರಕು ಸಾಗಣೆ ಹಡಗುಗಳು ಅಂತರರಾಷ್ಟ್ರೀಯ ಜಲಮಾರ್ಗಕ್ಕೆ ಇಳಿಯುವ ಮುನ್ನ ಅಥವಾ ಬಂದರು ಸೇರುವ ಮುನ್ನ ವಿಮೆ ಹೊಂದುವುದು ಕಡ್ಡಾಯ ಎಂಬಂತಾಗಿದೆ.</p><p>ಹಡಗಿಗೆ ಹಾನಿಯಾದರೆ, ಸರಕು ನಷ್ಟವಾದರೆ, ಸಿಬ್ಬಂದಿ ಅಥವಾ ಮೂರನೇ ವ್ಯಕ್ತಿಗೆ ಹಾನಿಯಾದರೆ, ಯುದ್ಧ ಮತ್ತು ಸಂಘರ್ಷ ಸಂಬಂಧಿತ ಅಪಾಯಗಳಿಗೆ ಈ ಕಡಲ ವಿಮೆಯು ಅನ್ವಯಿಸುತ್ತದೆ. ವಿಮೆ ಇಲ್ಲವಾದರೆ ಶಿಪ್ಪಿಂಗ್ ಕಂಪನಿಗಳು ಹಡಗನ್ನು ಇಳಿಸಲು ನಿರಾಕರಿಸುತ್ತವೆ. ಹೀಗಾಗಿ ಒಂದು ತೈಲ ಟ್ಯಾಂಕರ್ನ ಒಟ್ಟು ಮೌಲ್ಯವು 10ರಿಂದ 15 ಕೋಟಿ ಅಮೆರಿಕನ್ ಡಾಲರ್ನಷ್ಟಿರುತ್ತದೆ. ಹೀಗಾಗಿ ವಿಮೆ ಇಲ್ಲದೆ ಹಡಗನ್ನು ಸಮುದ್ರಕ್ಕಿಳಿಸುವುದು ಯಾವುದೇ ಕಂಪನಿಗಾದರೂ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡಂತೆಯೇ.</p><p>ಈಗ ಪಶ್ಚಿಮ ಏಷ್ಯಾ ಸಂಘರ್ಷದ ವಿಷಯಕ್ಕೆ ಬಂದಲ್ಲಿ, ಯುದ್ಧದ ಸಂದರ್ಭದಲ್ಲಿ ಸಂಚರಿಸುವ ಹಡಗುಗಳಿಗೆ ಹಲವು ವಿಮಾ ಕಂಪನಿಗಳು ವಿಮೆ ನೀಡಲು ನಿರಾಕರಿಸಿದ್ದು ಮತ್ತು ಯುದ್ಧ ಅಪಾಯಕ್ಕಿದ್ದ ವಿಮೆಯ ರಕ್ಷೆಯನ್ನು ಹಿಂಪಡೆದಿದ್ದೇ ಕಾರಣ. ವಿಮಾ ಕಂಪನಿಗಳ ಈ ನಿರ್ಧಾರದಿಂದ ಕೆಲ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರೆ, ಇನ್ನೂ ಕೆಲವು ಮಾರ್ಗವನ್ನೇ ಬದಲಿಸಿದ್ದು ವರದಿಯಾಗಿದೆ.</p>.ಅಮೆರಿಕ, ಇಸ್ರೇಲ್ ವಿರುದ್ಧ ಪ್ರತೀಕಾರ: ದುಬೈ, ದೋಹಾ ಮೇಲೆ ಇರಾನ್ ದಾಳಿ.ಎಪ್ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!.<h4>ಜಾಗತಿಕ ಕಡಲ ವಿಮೆಯ ರಚನೆ ಹೇಗಿದೆ?</h4><p>ಜಾಗತಿಕ ಸರಕು ಸಾಗಣೆ ಉದ್ಯಮವು ರಕ್ಷಣೆ ಮತ್ತು ಪರಿಹಾರ ಕ್ಲಬ್ ಎಂಬ ಪರಿಣತ ವಿಮಾ ನೀಡುವ ಕಂಪನಿಗಳನ್ನು ಅವಲಂಬಿಸಿವೆ. ಜಗತ್ತಿನಲ್ಲಿರುವ ವಾಣಿಜ್ಯ ಹಡಗುಗಳಲ್ಲಿ ಶೇ 90ರಷ್ಟು ಬೆರಳೆಣಿಕೆಯಷ್ಟಿರುವ ಇಂಥ ಕ್ಲಬ್ಗಳ ಮೂಲಕ ವಿಮೆಯ ರಕ್ಷಣೆಯ ಪಡೆದಿವೆ. ಇವುಗಳು ಹಡಗುಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಉಂಟಾಗುವ ನಷ್ಟಕ್ಕೆ ರಕ್ಷಣೆ ನೀಡುವ ಹೊಣೆ ಹೊತ್ತಿವೆ.</p><p>ಆದಾಗ್ಯೂ, ಈ ವಿಮಾ ಕಂಪನಿಗಳು ಮರುವಿಮಾ ಮಾರುಕಟ್ಟೆ ಮೇಲೆ ಅವಲಂಬಿತವಾಗಿವೆ. ಇವುಗಳಲ್ಲಿ ಬಹುತೇಕವು ಲಂಡನ್ನಲ್ಲಿವೆ. ಲಾಯ್ಡ್ಸ್ ಆಫ್ ಲಂಡನ್ ಸೇರಿದಂತೆ ಹಲವು ಪ್ರಮುಖವು. </p><p>ಜಾಗತಿಕ ರಾಜಕೀಯ ಅಪಾಯಗಳು ಎದುರಾಗುತ್ತಲೇ, ಮರುವಿಮಾ ಕಂಪನಿಗಳು ಕೆಲ ಮಾರ್ಗಗಳನ್ನು ‘ಅಪಾಯಕಾರಿ’ ಎಂದು ಘೋಷಿಸುತ್ತವೆ. ಇಂಥ ಸಂದರ್ಭಗಳಲ್ಲಿ ಯುದ್ಧ ಅಪಾಯದ ವ್ಯಾಪ್ತಿಯನ್ನು ಅವು ಹಿಂಪಡೆಯಬಹುದು, ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಬಹುದು, ಹಡಗು ಕಂಪನಿಗಳೇ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು, ಜಲಮಾರ್ಗಗಳು ಭೌತಿಕವಾಗಿ ತೆರೆದಿದ್ದರೂ, ಹಣಕಾಸಿನ ಅಪಾಯ ನಿಯಂತ್ರಣಕ್ಕೆ ಹಡಗುಗಳ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಬಹುದು.</p><p>ಈ ಕಾರಣಗಳಿಂದಾಗಿ ಅಪಾಯ ಎದುರಾದಾಗೆಲ್ಲಾ ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರವು ತೀವ್ರವಾಗಿ ಕುಸಿಯಬಹುದು ಎಂದು ಹಡಗು ಸಾಗಣೆ ಉದ್ಯಮದ ವಿಶ್ಲೇಷಕರು ಹಾಗೂ ಸಾಗರ ಪಥದ ದತ್ತಾಂಶಗಳು ಹೇಳುತ್ತವೆ.</p><p>ಸಾಮಾನ್ಯ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಸರಾಸರಿ 100 ಅಥವಾ ಅದಕ್ಕಿಂತ ಹೆಚ್ಚು ಹಡಗುಗಳು ಸಂಚರಿಸುತ್ತವೆ. ಆದರೆ ಸಂಘರ್ಷ ಎದುರಾದಾಗ ಹಡಗುಗಳು ಯುದ್ಧ ಪ್ರದೇಶದಿಂದ ದೂರದಲ್ಲಿ ಲಂಗರು ಹಾಕುತ್ತವೆ ಅಥವಾ ತಮ್ಮ ಮಾರ್ಗವನ್ನು ಬದಲಿಸುತ್ತವೆ. ಇವುಗಳಿಗೆ ಬಹುಮುಖ್ಯ ಕಾರಣ ವಿಮಾ ಕಂಪನಿಗಳಿಂದ ಬಾರದ ಸ್ಪಷ್ಟ ಸಂದೇಶ ಅಥವಾ ಭದ್ರತಾ ಖಾತ್ರಿಯಾಗಿರುತ್ತದೆ ಎಂದು ದಿ ಗಾರ್ಡಿಯನ್ ಮತ್ತು ರಾಯಿಟರ್ಸ್ ವರದಿಗಳು ಹೇಳಿವೆ.</p><p>ಜಾಗತಿಕ ಸರಕು ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಶೇ 20ರಷ್ಟು ಈ ಕಿರು ಜಲಸಂಧಿಯ ಮೂಲಕವೇ ನಡೆಯುವುದರಿಂದ ಕೆಲವೊಮ್ಮೆ ತಾತ್ಕಾಲಿಕ ಅಡೆತಡೆಗಳೂ ದೊಡ್ಡ ಮಟ್ಟದ ನಷ್ಟವನ್ನು ಉಂಟುಮಾಡುತ್ತವೆ.</p>.Fact Check: ಇರಾನ್ ವಿರುದ್ಧ ದಾಳಿಗೆ ಅಮೆರಿಕದಿಂದ ಭಾರತದ ನೌಕಾ ನೆಲೆಗಳ ಬಳಕೆ?.ಆಳ ಅಗಲ: ಅಮೆರಿಕದ ಅಂಕೆಗೆ ಸಿಗದ ಇರಾನ್.<h4>ಯುದ್ಧ ಅಪಾಯ ವಿಮೆಯು ದುಬಾರಿ</h4><p>ಹಡಗುಗಳಿಗೆ ವಿಮೆಯ ರಕ್ಷೆ ಇದ್ದರೂ, ಸಂಘರ್ಷದ ಸಂದರ್ಭದಲ್ಲಿ ಅದು ಏಕಾಏಕಿ ದುಬಾರಿಯಾಗುತ್ತದೆ. ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಉದ್ಯಮದ ವಿಶ್ಲೇಷಕರು ನೀಡಿರುವ ಮಾಹಿತಿಯನ್ವಯ, ಯುದ್ಧ ಅಪಾಯ ಪ್ರೀಮಿಯಂ ಮೊತ್ತವು ಹಡಗಿನ ಒಟ್ಟು ಮೌಲ್ಯದ ಶೇ 0.2ರಿಂದ ಶೇ 1ರಷ್ಟು ಏರಿಕೆಯಾಗುತ್ತದೆ. ಅಂದರೆ ₹919 ಕೋಟಿಯ ಒಂದು ಹಡಗಿಗೆ ₹19 ಕೋಟಿಯಷ್ಟು ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಬೇಕು. ಇದರಿಂದಾಗಿ ಲಾಭಾಂಶ ಕಡಿಮೆಯಾಗುವ ಭಯದಿಂದ ಬಹಳಷ್ಟು ಹಡಗು ಕಂಪನಿಗಳು ವಿಳಂಬ ನೀತಿ ಅಥವಾ ಪ್ರಯಾಣವನ್ನೇ ರದ್ದುಪಡಿಸುವ ನಿರ್ಧಾರಕ್ಕೆ ತಲುಪುತ್ತವೆ ಎಂದು ವಿಶ್ಲೇಷಿಸಲಾಗಿದೆ.</p>.<h4>ಕೆಲವೊಮ್ಮೆ ಸರ್ಕಾರಗಳ ಮಧ್ಯಪ್ರವೇಶ</h4><p>ಇಂಧನ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿರುವುದರಿಂದ ಕೆಲವೊಮ್ಮೆ ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುತ್ತದೆ. ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಹಡಗು ಸಾಗಲು ವಿಮಾ ಕಂಪನಿಗಳಿಗೆ ಸರ್ಕಾರಗಳು ತಮ್ಮ ಹಿತಾಸಕ್ತಿಗಾಗಿ ಆಧಾರ ನೀಡಿದ ಉದಾಹರಣೆಗಳೂ ಇವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದರಿಂದಾಗಿ ಕೆಲ ಕಂಪನಿಗಳು ಹಡಗುಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುತ್ತವೆ.</p>.<h4>ಇಂಥ ಅಡಚಣೆಗಳಿಂದ ಯಾರಿಗೆ ಹೆಚ್ಚು ಹಾನಿ?</h4><p>ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾದರೆ ಅಥವಾ ವಿಳಂಬವಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ತೊಂದರೆ ಉಂಟಾಗಲಿದೆ.</p><p><strong>ಅವುಗಳಲ್ಲಿ ಪ್ರಮುಖವು...</strong></p><p><strong>ಇರಾನ್:</strong> ಕಚ್ಚಾತೈಲ ರಫ್ತು ಮಾಡುವ ಪ್ರಮುಖ ರಾಷ್ಟ್ರವಾದ ಇರಾನ್ ಈ ಹೊರ್ಮುಜ್ ಜಲಸಂಧಿಯನ್ನೇ ಅವಲಂಬಿಸಿದೆ. ಒಂದೊಮ್ಮೆ ಈ ಮಾರ್ಗದಲ್ಲಿ ಹಡಗುಗಳ ಕಾರ್ಯಾಚರಣೆ ಕುಸಿದರೆ, ಇರಾನ್ ರಫ್ತು ಪ್ರಮಾಣ ಕುಗ್ಗುತ್ತದೆ ಮತ್ತು ಆದಾಯವೂ ಇಳಿಮುಖವಾಗುತ್ತದೆ.</p><p><strong>ಚೀನಾ:</strong> ದೇಶದ ಇಂಧನ ಭದ್ರತೆಗಾಗಿ ಚೀನಾ ಇದೇ ಮಾರ್ಗವನ್ನು ಹೆಚ್ಚಾಗಿ ಅವಲಂಬಿಸಿದೆ. ಚೀನಾ ಅತಿ ಹೆಚ್ಚು ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಜಲಸಂಧಿಯಲ್ಲಿನ ಸಂಘರ್ಷಗಳು ಅದಕ್ಕೆ ಹೆಚ್ಚು ನಷ್ಟವನ್ನುಂಟು ಮಾಡಿದೆ.</p><p><strong>ಕೊಲ್ಲಿ ರಾಷ್ಟ್ರದ ಉತ್ಪಾದಕರು:</strong> ಸೌದಿ ಅರೆಬಿಯಾ, ಸಂಯುಕ್ತ ಅರಬ್ ಸಂಸ್ಥಾನ, ಕತಾರ್, ಕುವೈತ್ ಮತ್ತು ಇರಾಕ್ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದಿಸುತ್ತಿದ್ದು, ಅವುಗಳ ರಫ್ತಿಗೆ ಈ ಮಾರ್ಗವನ್ನೇ ಅವಲಂಬಿಸಿವೆ. ಪ್ರತಿನಿತ್ಯ ಈ ಮಾರ್ಗದಲ್ಲಿ 2 ಕೋಟಿ ಬ್ಯಾರಲ್ ಕಚ್ಚಾತೈಲ ಸಾಗಣೆಯಾಗುತ್ತದೆ.</p>.ಆಯತೊಲ್ಲಾ ಅಲಿ ಖಮೇನಿ ಸಾವಿನ 6 ದಿನಗಳ ಬಳಿಕ ಭಾರತದ ಸಂತಾಪ ದಾಖಲು.ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಹತ್ಯೆ ಗ್ಯಾರಂಟಿ: ಇಸ್ರೇಲ್.<h4>ಭಾರತ ಹೇಗೆ ಬಾಧಿತ?</h4><p>ಭಾರತವು ತನ್ನ ಅಗತ್ಯದ ಶೇ 85ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಹೊರ್ಮುಜ್ ಜಲಸಂಧಿ ಮೂಲಕ ಬರುವ ಪ್ರಮಾಣ ಶೇ 30ರಷ್ಟು. ಇದರಲ್ಲಿ ಬಹುಪಾಲು ಮಧ್ಯ ಏಷ್ಯಾ ಭಾಗದಿಂದ ಪೂರೈಕೆಯಾಗುತ್ತಿದೆ. ಒಂದೊಮ್ಮೆ ಸಾಗಣೆ ವೆಚ್ಚ ಹೆಚ್ಚಾದರೆ, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.</p>.<h4>ಜಾಗತಿಕ ತೈಲ ಬೆಲೆ ಹೆಚ್ಚಳ ಸಾಧ್ಯತೆ</h4><p>ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಭಾರತದಲ್ಲಿ ಶನಿವಾರ ₹60ರಷ್ಟು ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಆಲೋಚಿಸುವುದಾದರೆ, ಹಡಗು ವಿಮಾ ಕಂತುಗಳೂ ಗಣನೀಯವಾಗಿ ಹೆಚ್ಚಳವಾಗಿದೆ. ಇದು ಹಣದುಬ್ಬರದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. </p><p>ಭಾರತವು ತನಗೆ ಕಚ್ಚಾತೈಲ ಪೂರೈಕೆ ಮಾಡಲು ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ, ರಷ್ಯಾವನ್ನೂ ಅವಲಂಬಿಸಿರುವುದರಿಂದ ಹಾನಿಯ ಪ್ರಮಾಣವನ್ನು ತಗ್ಗಿಸಿಕೊಂಡಿದೆ.</p><p>ಜಾಗತಿಕ ರಾಜಕೀಯ ಸಂಘರ್ಷಗಳನ್ನು ಸದಾ ಸೇನಾ ಬಲದ ಆಧಾರದಲ್ಲೇ ನೋಡಲಾಗುತ್ತಿತ್ತು. ಆಧುನಿಕ ಜಾಗತಿಕ ವ್ಯಾಪಾರದ ವಿಷಯದಲ್ಲಿ ಹಣಕಾಸು ಮತ್ತು ಅಪಾಯ ನಿರ್ವಹಣೆ ವ್ಯವಸ್ಥೆಯಿಂದಲೂ ನಿರ್ವಹಿಸಲ್ಪಡುತ್ತಿದೆ. ಕಡಲ ಸಾರಿಗೆ ವಿಷಯದಲ್ಲಿ ವಿಮಾ ಮಾರುಕಟ್ಟೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಒಂದೊಮ್ಮೆ ಅಪಾಯವು ತೀರಾ ಹೆಚ್ಚಾದಲ್ಲಿ ಮತ್ತು ವಿಮಾ ಕಂಪನಿಗಳು ರಕ್ಷಣೆಯನ್ನು ಹಿಂಪಡೆದಲ್ಲಿ ಕಡಲ ಸರಕು ಸಾಗಣೆ ಸಂಪೂರ್ಣ ಸ್ತಬ್ಧವಾಗುವ ಹಂತಕ್ಕೆ ತಲುಪುತ್ತದೆ.</p><p>ಇವೆಲ್ಲದರ ಪರಿಣಾಮ, ದಿಗ್ಬಂಧನವಿಲ್ಲದಿದ್ದರೂ ಜಾಗತಿಕ ವ್ಯಾಪಾರ ಮಾರ್ಗದಲ್ಲಿ ವಿಮೆ ಮತ್ತು ಮರುವಿಮಾ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವ ಸಣ್ಣ ವ್ಯತ್ಯಾಸವೂ ಜಾಗತಿಕ ಆರ್ಥಿಕ ಪರಿಸ್ಥಿತಿ ಮೇಲೆ ಗಣನೀಯ ಪರಿಣಾಮ ಬೀರುವುದು ಇಂದಿನ ವಾಸ್ತವ.</p><p><strong>ಆಧಾರ: ರಾಯಿಟರ್ಸ್, ದಿ ಗಾರ್ಡಿಯನ್, ದಿ ವಾಲ್ಸ್ಟ್ರೀಟ್ ಜರ್ನಲ್ ವರದಿ, ಕಡಲ ಸಾರಿಗೆ ವಿಮಾ ಉದ್ಯಮದ ವಿಶ್ಲೇಷಣೆ ಮತ್ತು ಸರಕು ಸಾಗಣೆ ಕ್ಷೇತ್ರದ ಮಾಹಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>