<p><strong>ಸಿಡ್ನಿ:</strong> ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಅಸ್ಥಿರ ಕದನ ವಿರಾಮ ಜಾರಿಯಲ್ಲಿದ್ದರೂ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ.</p><p>ಹಾಗಾದರೆ ಈ ಸಂಘರ್ಷ ಎತ್ತ ಸಾಗುತ್ತಿದೆ? ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ ಇದು ಶೀತಲ ಸಂಘರ್ಷದತ್ತ (frozen conflict) ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. </p><p>'ಶೀತಲ ಸಂಘರ್ಷ' ಎಂದರೆ ಯುದ್ಧ ಸಂಪೂರ್ಣವಾಗಿ ಕೊನೆಗೊಂಡಿದೆ ಎಂದರ್ಥವಲ್ಲ. ಸಂಘರ್ಷ ಕೊನೆಗಾಣದೆ ತಳಮಟ್ಟದಲ್ಲಿ ಮುಂದುವರಿಯುವ ಅಥವಾ ಬಗೆಹರಿಯದ ಯುದ್ಧವಾಗಿದೆ. ಉದಾಹರಣೆಗೆ ಉಕ್ರೇನ್ನಲ್ಲಿ 2014 ರಿಂದ 2022ರವರೆಗೆ ನಡೆದ ಹೋರಾಟದಲ್ಲಿ ಸುಮಾರು 14,000 ಸಾವಿರ ಮತ್ತು ಜನರು ಮೃತಪಟ್ಟಿದ್ದರು. ಇದನ್ನು 'ಶೀತಲ ಸಂಘರ್ಷ' ಎಂದೇ ಪರಿಗಣಿಸಲಾಗಿತ್ತು.</p><p>ಈ ವಾರ ಪಾಕಿಸ್ತಾನದಲ್ಲಿ ಮಾತುಕತೆಗಳು ಪುನರಾರಂಭಗೊಂಡು ಒಪ್ಪಂದವಾದರೂ, ಇದು ಶಾಶ್ವತ ಶಾಂತಿಯತ್ತ ಸಾಗದೆ ಶೀತಲ ಸಂಘರ್ಷದತ್ತ ಸಾಗಲು ಈ ಕೆಳಗಿನ ಮೂರು ಕಾರಣಗಳಿವೆ...</p>.ಇರಾನ್ ಮೇಲಿನ ದಾಳಿ ನಿಲ್ಲಿಸುವ ಅಮೆರಿಕ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ: ನೆತನ್ಯಾಹು.ಅಮೆರಿಕ-ಇಸ್ರೇಲ್ vs ಇರಾನ್ ಯುದ್ಧಕ್ಕೆ ನಿಜಕ್ಕೂ ಶಾಂತಿ ತರಬಲ್ಲದೇ ಪಾಕಿಸ್ತಾನ?.<h2>1) ಟ್ರಂಪ್ ಪಾಲಿಗೆ ಕದನ ವಿರಾಮವೇ ಯುದ್ಧದ ಅಂತ್ಯ</h2><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯು ಕದನ ವಿರಾಮವನ್ನು ಕೇವಲ ಒಂದು ತಾತ್ಕಾಲಿಕ ವಿರಾಮವಾಗಿ ನೋಡುವುದಿಲ್ಲ. ಬದಲಿಗೆ, ಅವರು ಕದನ ವಿರಾಮ ಘೋಷಣೆಯಾದ ಕೂಡಲೇ ಅದನ್ನು ಅಮೆರಿಕದ ಯಶಸ್ಸು ಎಂದು ಘೋಷಿಸುವುದು ನಂತರ ಮುಂದಿನ ಜಾಗತಿಕ ವಿಷಯದತ್ತ ಗಮನ ಹರಿಸುವುದು ಅವರ ತಂತ್ರ.</p><p>ಇರಾನ್ ಮತ್ತು ಲೆಬನಾನ್ ಸಂಘರ್ಷ ಸೇರಿದಂತೆ ತಾವು 10 ಯುದ್ಧಗಳನ್ನು ಕೊನೆಗೊಳಿಸಿರುವುದಾಗಿ ಟ್ರಂಪ್ ಹೇಳಿಕೊಳ್ಳುತ್ತಾರೆ. ಆದರೆ ಈ ಪ್ರಕರಣಗಳಲ್ಲಿ ಮೂಲ ಸಮಸ್ಯೆಗಳು ಬಗೆಹರಿಯದೆ ಕೇವಲ ಮೇಲ್ನೋಟಕ್ಕೆ ಮಾತ್ರ ಕದನ ವಿರಾಮ ಏರ್ಪಟ್ಟಿದೆ.</p><p>ಇದು ಭಾರತ-ಪಾಕಿಸ್ತಾನ ಅಥವಾ ಥಾಯ್ಲೆಂಡ್-ಕಾಂಬೋಡಿಯಾ ನಡುವಿನ ಸಂಘರ್ಷಗಳಂತೆ ಯಾವಾಗ ಬೇಕಾದರೂ ಸಂಘರ್ಷ ಮತ್ತೆ ಭುಗಿಲೇಳುವ ಅಪಾಯವಿರುತ್ತದೆ.</p>.<h2>2) ಯುದ್ಧಗಳನ್ನು ಬಗೆಹರಿಸುವುದು ಕಷ್ಟ </h2><p>ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಶಕ್ತಿಗೆ ಹೋಲಿಸಿದರೆ ಇರಾನ್ ಅತ್ಯಂತ ದುರ್ಬಲವಾಗಿದೆ. ಈ ಅಂತರವನ್ನು ಸರಿಗಟ್ಟಲು ಇರಾನ್ ಉದ್ದೇಶಪೂರ್ವಕವಾಗಿ ವಿವಿಧ ಅಸಮರ್ಪಕ ತಂತ್ರಗಳನ್ನು ಬಳಸುತ್ತಿದೆ.</p><p>ನೇರ ಯುದ್ಧದ ಬದಲಿಗೆ ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡಲು ಹೋರ್ಮುಜ್ ಜಲಸಂಧಿಯನ್ನು ಮುಚ್ಚುವುದು ಅಥವಾ ಯುದ್ಧದಲ್ಲಿ ಭಾಗಿಯಾಗದ ದೇಶಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿರುವುದು ಇರಾನ್ ತಂತ್ರಗಳಾಗಿವೆ.</p><p>ಸಂಶೋಧನೆಗಳ ಪ್ರಕಾರ, ಇಂತಹ ಯುದ್ಧಗಳು ರಾಜಕೀಯ ಇತ್ಯರ್ಥಕ್ಕಿಂತ ಹೆಚ್ಚಾಗಿ 'ಶೀತಲ ಸಂಘರ್ಷ'ದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ದುರ್ಬಲ ರಾಷ್ಟ್ರವು ಪ್ರಬಲ ರಾಷ್ಟ್ರವನ್ನು ರಾಜಕೀಯ ಮತ್ತು ಆರ್ಥಿಕ ಒತ್ತಡದ ಮೂಲಕ ಮಣಿಸಿ ಅವರು ಅಲ್ಲಿಂದ ಹಿಂದಕ್ಕೆ ಹೋಗುವಂತೆ ಮಾಡುತ್ತವೆ. ಉದಾಹರಣೆಗೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ಗಳು ಅಮೆರಿಕ ವಿರುದ್ಧ ಮಾಡಿದ್ದು ಇದೇ ತಂತ್ರ.</p>.<h2>3) ಸಂಕೀರ್ಣ ಸಮಸ್ಯೆಗಳ ಬಗ್ಗೆ ಗಮನ ಹರಿಸದಿರುವುದು</h2><p>ಸಂಘರ್ಷಕ್ಕೆ ಮೂಲ ಕಾರಣವಾದ ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕ ಅಥವಾ ಇರಾನ್ ದೀರ್ಘಕಾಲದ ಪರಿಹಾರಕ್ಕೆ ಬದ್ಧವಾಗಿರುವಂತೆ ಕಾಣುತ್ತಿಲ್ಲ.</p><p>ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲವಾಗಲು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಿಟ್ಟುಕೊಡಲು ನಿರಾಕರಿಸಿದ್ದೇ ಕಾರಣ.</p><p>2015ರ ಪರಮಾಣು ಒಪ್ಪಂದದಿಂದ ಟ್ರಂಪ್ ಹೊರಬಂದ ನಂತರ, ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವಾಗಿದೆ. ಇರಾನ್ ಈಗಾಗಲೇ ಹೋರ್ಮುಜ್ ಜಲಸಂಧಿ ಮುಚ್ಚುವ ಮೂಲಕ ತನ್ನ ಕಠಿಣ ನಿಲುವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.</p>.<h2>ಈ ಶೀತಲ ಸಂಘರ್ಷದ ಪರಿಣಾಮಗಳೇನು?</h2><p>ಈ ಸಂಘರ್ಷವು ಶೀತಲ ಸಂಘರ್ಷವಾಗಿ ಉಳಿದರೆ, ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಅಸ್ಥಿರತೆ ಉಂಟಾಗುತ್ತದೆ. ಇದು ಇಸ್ರೇಲ್-ಇರಾನ್ ಅಥವಾ ಅಮೆರಿಕ-ಇರಾನ್ ನಡುವೆ ಕಾಲಕಾಲಕ್ಕೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳು ಹೆಚ್ಚಿವೆ.</p><p>ಗಾಜಾದಲ್ಲಿ ಕದನ ವಿರಾಮ ಏರ್ಪಟ್ಟರೂ, ಹಮಾಸ್ನ ನಿಶ್ಯಸ್ತ್ರೀಕರಣ ಅಥವಾ ಯುದ್ಧ ನಂತರದಲ್ಲಿ ಆಡಳಿತದ ವಿಚಾರಗಳು ಬಗೆಹರಿಯದ ಕಾರಣ ಇಸ್ರೇಲ್ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿಲ್ಲ.</p><p>1953ರಿಂದ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಅಧಿಕೃತ ಶಾಂತಿ ಒಪ್ಪಂದವಾಗಿಲ್ಲ, ಇದು ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಲು ದಾರಿ ಮಾಡಿಕೊಟ್ಟಿತು.</p><p>ಭಾರತ-ಪಾಕಿಸ್ತಾನದ ನಡುವಿನ ಶೀತಲ ಸಂಘರ್ಷವು ದಕ್ಷಿಣ ಏಷ್ಯಾದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಗೆ ನೇರ ಕಾರಣವಾಗಿದೆ.</p><p>ಇದೀಗ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಶೀತಲ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಮತ್ತು ಶಸ್ತ್ರಾಸ್ತ್ರ ಸ್ಪರ್ಧೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಡ್ನಿ:</strong> ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಅಸ್ಥಿರ ಕದನ ವಿರಾಮ ಜಾರಿಯಲ್ಲಿದ್ದರೂ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ.</p><p>ಹಾಗಾದರೆ ಈ ಸಂಘರ್ಷ ಎತ್ತ ಸಾಗುತ್ತಿದೆ? ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ ಇದು ಶೀತಲ ಸಂಘರ್ಷದತ್ತ (frozen conflict) ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. </p><p>'ಶೀತಲ ಸಂಘರ್ಷ' ಎಂದರೆ ಯುದ್ಧ ಸಂಪೂರ್ಣವಾಗಿ ಕೊನೆಗೊಂಡಿದೆ ಎಂದರ್ಥವಲ್ಲ. ಸಂಘರ್ಷ ಕೊನೆಗಾಣದೆ ತಳಮಟ್ಟದಲ್ಲಿ ಮುಂದುವರಿಯುವ ಅಥವಾ ಬಗೆಹರಿಯದ ಯುದ್ಧವಾಗಿದೆ. ಉದಾಹರಣೆಗೆ ಉಕ್ರೇನ್ನಲ್ಲಿ 2014 ರಿಂದ 2022ರವರೆಗೆ ನಡೆದ ಹೋರಾಟದಲ್ಲಿ ಸುಮಾರು 14,000 ಸಾವಿರ ಮತ್ತು ಜನರು ಮೃತಪಟ್ಟಿದ್ದರು. ಇದನ್ನು 'ಶೀತಲ ಸಂಘರ್ಷ' ಎಂದೇ ಪರಿಗಣಿಸಲಾಗಿತ್ತು.</p><p>ಈ ವಾರ ಪಾಕಿಸ್ತಾನದಲ್ಲಿ ಮಾತುಕತೆಗಳು ಪುನರಾರಂಭಗೊಂಡು ಒಪ್ಪಂದವಾದರೂ, ಇದು ಶಾಶ್ವತ ಶಾಂತಿಯತ್ತ ಸಾಗದೆ ಶೀತಲ ಸಂಘರ್ಷದತ್ತ ಸಾಗಲು ಈ ಕೆಳಗಿನ ಮೂರು ಕಾರಣಗಳಿವೆ...</p>.ಇರಾನ್ ಮೇಲಿನ ದಾಳಿ ನಿಲ್ಲಿಸುವ ಅಮೆರಿಕ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ: ನೆತನ್ಯಾಹು.ಅಮೆರಿಕ-ಇಸ್ರೇಲ್ vs ಇರಾನ್ ಯುದ್ಧಕ್ಕೆ ನಿಜಕ್ಕೂ ಶಾಂತಿ ತರಬಲ್ಲದೇ ಪಾಕಿಸ್ತಾನ?.<h2>1) ಟ್ರಂಪ್ ಪಾಲಿಗೆ ಕದನ ವಿರಾಮವೇ ಯುದ್ಧದ ಅಂತ್ಯ</h2><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯು ಕದನ ವಿರಾಮವನ್ನು ಕೇವಲ ಒಂದು ತಾತ್ಕಾಲಿಕ ವಿರಾಮವಾಗಿ ನೋಡುವುದಿಲ್ಲ. ಬದಲಿಗೆ, ಅವರು ಕದನ ವಿರಾಮ ಘೋಷಣೆಯಾದ ಕೂಡಲೇ ಅದನ್ನು ಅಮೆರಿಕದ ಯಶಸ್ಸು ಎಂದು ಘೋಷಿಸುವುದು ನಂತರ ಮುಂದಿನ ಜಾಗತಿಕ ವಿಷಯದತ್ತ ಗಮನ ಹರಿಸುವುದು ಅವರ ತಂತ್ರ.</p><p>ಇರಾನ್ ಮತ್ತು ಲೆಬನಾನ್ ಸಂಘರ್ಷ ಸೇರಿದಂತೆ ತಾವು 10 ಯುದ್ಧಗಳನ್ನು ಕೊನೆಗೊಳಿಸಿರುವುದಾಗಿ ಟ್ರಂಪ್ ಹೇಳಿಕೊಳ್ಳುತ್ತಾರೆ. ಆದರೆ ಈ ಪ್ರಕರಣಗಳಲ್ಲಿ ಮೂಲ ಸಮಸ್ಯೆಗಳು ಬಗೆಹರಿಯದೆ ಕೇವಲ ಮೇಲ್ನೋಟಕ್ಕೆ ಮಾತ್ರ ಕದನ ವಿರಾಮ ಏರ್ಪಟ್ಟಿದೆ.</p><p>ಇದು ಭಾರತ-ಪಾಕಿಸ್ತಾನ ಅಥವಾ ಥಾಯ್ಲೆಂಡ್-ಕಾಂಬೋಡಿಯಾ ನಡುವಿನ ಸಂಘರ್ಷಗಳಂತೆ ಯಾವಾಗ ಬೇಕಾದರೂ ಸಂಘರ್ಷ ಮತ್ತೆ ಭುಗಿಲೇಳುವ ಅಪಾಯವಿರುತ್ತದೆ.</p>.<h2>2) ಯುದ್ಧಗಳನ್ನು ಬಗೆಹರಿಸುವುದು ಕಷ್ಟ </h2><p>ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಶಕ್ತಿಗೆ ಹೋಲಿಸಿದರೆ ಇರಾನ್ ಅತ್ಯಂತ ದುರ್ಬಲವಾಗಿದೆ. ಈ ಅಂತರವನ್ನು ಸರಿಗಟ್ಟಲು ಇರಾನ್ ಉದ್ದೇಶಪೂರ್ವಕವಾಗಿ ವಿವಿಧ ಅಸಮರ್ಪಕ ತಂತ್ರಗಳನ್ನು ಬಳಸುತ್ತಿದೆ.</p><p>ನೇರ ಯುದ್ಧದ ಬದಲಿಗೆ ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡಲು ಹೋರ್ಮುಜ್ ಜಲಸಂಧಿಯನ್ನು ಮುಚ್ಚುವುದು ಅಥವಾ ಯುದ್ಧದಲ್ಲಿ ಭಾಗಿಯಾಗದ ದೇಶಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿರುವುದು ಇರಾನ್ ತಂತ್ರಗಳಾಗಿವೆ.</p><p>ಸಂಶೋಧನೆಗಳ ಪ್ರಕಾರ, ಇಂತಹ ಯುದ್ಧಗಳು ರಾಜಕೀಯ ಇತ್ಯರ್ಥಕ್ಕಿಂತ ಹೆಚ್ಚಾಗಿ 'ಶೀತಲ ಸಂಘರ್ಷ'ದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ದುರ್ಬಲ ರಾಷ್ಟ್ರವು ಪ್ರಬಲ ರಾಷ್ಟ್ರವನ್ನು ರಾಜಕೀಯ ಮತ್ತು ಆರ್ಥಿಕ ಒತ್ತಡದ ಮೂಲಕ ಮಣಿಸಿ ಅವರು ಅಲ್ಲಿಂದ ಹಿಂದಕ್ಕೆ ಹೋಗುವಂತೆ ಮಾಡುತ್ತವೆ. ಉದಾಹರಣೆಗೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ಗಳು ಅಮೆರಿಕ ವಿರುದ್ಧ ಮಾಡಿದ್ದು ಇದೇ ತಂತ್ರ.</p>.<h2>3) ಸಂಕೀರ್ಣ ಸಮಸ್ಯೆಗಳ ಬಗ್ಗೆ ಗಮನ ಹರಿಸದಿರುವುದು</h2><p>ಸಂಘರ್ಷಕ್ಕೆ ಮೂಲ ಕಾರಣವಾದ ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕ ಅಥವಾ ಇರಾನ್ ದೀರ್ಘಕಾಲದ ಪರಿಹಾರಕ್ಕೆ ಬದ್ಧವಾಗಿರುವಂತೆ ಕಾಣುತ್ತಿಲ್ಲ.</p><p>ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲವಾಗಲು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಿಟ್ಟುಕೊಡಲು ನಿರಾಕರಿಸಿದ್ದೇ ಕಾರಣ.</p><p>2015ರ ಪರಮಾಣು ಒಪ್ಪಂದದಿಂದ ಟ್ರಂಪ್ ಹೊರಬಂದ ನಂತರ, ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವಾಗಿದೆ. ಇರಾನ್ ಈಗಾಗಲೇ ಹೋರ್ಮುಜ್ ಜಲಸಂಧಿ ಮುಚ್ಚುವ ಮೂಲಕ ತನ್ನ ಕಠಿಣ ನಿಲುವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.</p>.<h2>ಈ ಶೀತಲ ಸಂಘರ್ಷದ ಪರಿಣಾಮಗಳೇನು?</h2><p>ಈ ಸಂಘರ್ಷವು ಶೀತಲ ಸಂಘರ್ಷವಾಗಿ ಉಳಿದರೆ, ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಅಸ್ಥಿರತೆ ಉಂಟಾಗುತ್ತದೆ. ಇದು ಇಸ್ರೇಲ್-ಇರಾನ್ ಅಥವಾ ಅಮೆರಿಕ-ಇರಾನ್ ನಡುವೆ ಕಾಲಕಾಲಕ್ಕೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳು ಹೆಚ್ಚಿವೆ.</p><p>ಗಾಜಾದಲ್ಲಿ ಕದನ ವಿರಾಮ ಏರ್ಪಟ್ಟರೂ, ಹಮಾಸ್ನ ನಿಶ್ಯಸ್ತ್ರೀಕರಣ ಅಥವಾ ಯುದ್ಧ ನಂತರದಲ್ಲಿ ಆಡಳಿತದ ವಿಚಾರಗಳು ಬಗೆಹರಿಯದ ಕಾರಣ ಇಸ್ರೇಲ್ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿಲ್ಲ.</p><p>1953ರಿಂದ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಅಧಿಕೃತ ಶಾಂತಿ ಒಪ್ಪಂದವಾಗಿಲ್ಲ, ಇದು ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಲು ದಾರಿ ಮಾಡಿಕೊಟ್ಟಿತು.</p><p>ಭಾರತ-ಪಾಕಿಸ್ತಾನದ ನಡುವಿನ ಶೀತಲ ಸಂಘರ್ಷವು ದಕ್ಷಿಣ ಏಷ್ಯಾದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಗೆ ನೇರ ಕಾರಣವಾಗಿದೆ.</p><p>ಇದೀಗ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಶೀತಲ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಮತ್ತು ಶಸ್ತ್ರಾಸ್ತ್ರ ಸ್ಪರ್ಧೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>