
ಹಕ್ಕಿಪಿಕ್ಕಿಗಳಿಗೆ ಮುಖ್ಯವಾಗಿ ಭೂಮಿ ಬೇಕು. ನಂತರ ಶಿಕ್ಷಣ ಹಾಗೂ ಆರೋಗ್ಯ ಸೌಕರ್ಯಕ್ಕೆ ಒತ್ತುಕೊಡಬೇಕು. ರಾಮನಗರ ಜಿಲ್ಲೆಯ ಬನ್ನೇರುಘಟ್ಟದ ಪ್ರದೇಶ ಹಾಗೂ ಶಿವಮೊಗ್ಗದಲ್ಲಿ ಭೂಮಿ ಪಡೆಯಲು ಸಿದ್ಧತೆ ನಡೆದಿವೆ. ಗಿಡಮೂಲಿಕೆ ಔಷಧಿ ಮಾರಲು ವಿದೇಶಗಳಿಗೆ ಹೋದ ಹಲವರು ಸಾಕಷ್ಟು ಸಾರಿ ಅಲ್ಲಿ ಸಿಕ್ಕಿಕೊಂಡಿದ್ದಾರೆ. ಅವರನ್ನು ಬಿಡಿಸಿಕೊಂಡು ಬಂದ ಉದಾಹರಣೆ ಇವೆ. ‘ಕ್ರಿಮಿನಲ್ ಟ್ರೈಬ್’ ಎಂಬ ಹಣೆಪಟ್ಟಿ ಅವರಿಗೆ ಬಿದ್ದಿದೆ. ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಯತ್ನ ಮಾಡಬೇಕು.-ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ
ಹಕ್ಕಿಪಿಕ್ಕಿಯವರನ್ನು ಒಂದೇ ಕಡೆ ಕರೆಯಿಸಿ, ಸಮೀಕ್ಷೆ ಮಾಡುತ್ತೇವೆ. ಮೂಲ ಹಕ್ಕಿಪಿಕ್ಕಿಗಳು ಯಾರೆಂದು ದಾಖಲೆ ಸಮೇತ ಪಟ್ಟಿ ಮಾಡಿದರೆ ಸರ್ಕಾರಿ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಅವರ ಸಮಸ್ಯೆ ಆಲಿಸಿದ್ದೇನೆ.-ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ
ಹಾರ್ದಿ ಜನರಿಗೆ ಶಾಶ್ವತ ನೆಲೆ ಕಲ್ಪಿಸುವಂತೆ ನೀಡಲಾದ ಮನವಿಗಳು ಕಸದ ಬುಟ್ಟಿ ಸೇರಿವೆ. ನಮ್ಮ ಜನರಿಗೆ ಅರಿವಿನ ಕೊರತೆಯಿಂದಾಗಿ ಸಾಲಸೌಲಭ್ಯಗಳ ಮಾಹಿತಿಯೂ ಇಲ್ಲ. ಪ್ರಯೋಜನ ಪಡೆಯಲು ಬೇಕಾದ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಯೂ ಇಲ್ಲ.-ಶಾಮಸಿಂಗ್ ಖೇಮಲಿಂಗ ಕಾಳೆ, ಬುಡಕಟ್ಟು ಮಹಾಸಭಾದ ಮುಖಂಡ, ಕಲಬುರಗಿ
ಹಕ್ಕಿಪಿಕ್ಕಿ ಹಾಗೂ ಕಾತ್ಕರಿ ಜನರ ಬದುಕು ದಯನೀಯವಾಗಿದೆ. ಹಕ್ಕಿಗಾಗಿ, ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಸ್ಪಂದನೆ ಸಿಕ್ಕಿಲ್ಲ. ಈಚೆಗೆ ಕೆಲವರಿಗೆ ಪಡಿತರ ಧಾನ್ಯ ಮಾತ್ರ ನೀಡುತ್ತಿದ್ದಾರೆ.-ರಾಜಶೇಖರ ಹಿಂಡಲಗಿ, ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
ದಿನವೂ ಪ್ಲಾಸ್ಟಿಕ್ ಮುಖವಾಡ, ಗೊಂಬೆಗಳನ್ನು ಮಾರಲು ನಡೆದು ಹಳ್ಳಿಗಳಿಗೆ ಹೋಗುತ್ತೇನೆ. ಏನೂ ಮಾರಾಟವಾಗದಿದ್ದರೆ ಭಿಕ್ಷೆ ಬೇಡುತ್ತೇನೆ. ನಮ್ಮ ಬದುಕೇ ಹೀಗೆ. ಮಕ್ಕಳಿಗಾದರೂ ಒಂದು ಹೊತ್ತಿನ ಊಟ ಸಿಗಲಿ ಎಂಬುದೇ ನನ್ನಾಸೆ.-ಕಾವ್ಯಶ್ರೀ ಸಿಂಹದಮರಿ, ಹಕ್ಕಿಪಿಕ್ಕಿ ಮಹಿಳೆ, ಖಾನಾಪುರ
ದಕ್ಷಿಣ ಕರ್ನಾಟಕ ಭಾಗದಲ್ಲಿ ನಮ್ಮ ಸಮುದಾಯದ ಹಲವರು ಹಣ ಗಳಿಸಿದ್ದಾರೆ. ಆದರೆ, ನಾವು ಇನ್ನೂ ಭಿಕ್ಷೆ ಬೇಡುತ್ತಿದ್ದೇವೆ. ಸರ್ಕಾರ ನೆಲೆ ಕಲ್ಪಿಸಿದರೆ ದುಡಿದು ಬದುಕುತ್ತೇವೆ.-ದಯಾನಂದ ಜಯಂತ, ಹಕ್ಕಿಪಿಕ್ಕಿ ಆದಿವಾಸಿ, ಖಾನಾಪುರ
ಹಕ್ಕಿಪಿಕ್ಕಿ ಜನರಿಗಾಗಿ ನಿರ್ಮಿಸಿದ ಊರು ಪಕ್ಷಿರಾಜಪುರ. ಅನೇಕರು ಶಾಲಾ ಶಿಕ್ಷಣ ಹಂತಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಇಷ್ಟು ವರ್ಷದಲ್ಲಿ ಒಬ್ಬರಿಗೆ ಮಾತ್ರ ಕಾನ್ಸ್ಟೆಬಲ್ ಹುದ್ದೆ ಸಿಕ್ಕಿದೆ.-ನಂಜುಂಡಸ್ವಾಮಿ, ಸೋನಿ, ಹಕ್ಕಿಪಿಕ್ಕಿ ಮುಖಂಡರು, ಮೈಸೂರು
ಶಿಕ್ಷಣದ ಜಾಗೃತಿ ಅಗತ್ಯವಿದೆ.



















ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.