ಕೋವಿಡ್ತಗುಲಿರುವಕಾರಣಗೃಹ ಸಚಿವಅಮಿತ್ ಶಾ ಸತ್ತಿದ್ದಾರೆ ಎಂದು ಮುಸ್ಲಿಮರು ಸಂಭ್ರಮಿಸುತ್ತಿದ್ದಾರೆ ಎಂದು ದೆಹಲಿಯ ಬಿಜೆಪಿ ಸದಸ್ಯ ವಿನಯ್ ಚೌಧರಿ ಎಂಬುವವರು ಟ್ವೀಟ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಸ್ಲಿಂ ಯುವಕರು ಅಣಕು ಶವಯಾತ್ರೆ ನಡೆಸುತ್ತಿರುವುದು ಮತ್ತು ಮೋದಿ, ಶಾ ಸತ್ತರು ಎಂದು ಕೂಗುತ್ತಿರುವುದು ವಿಡಿಯೊದಲ್ಲಿ ಇದೆ. ‘ಕೋವಿಡ್ಬಂದ ಕಾರಣಕ್ಕೆ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸುತ್ತಿರುವ ಈ ಮುಸ್ಲಿಮರ ಮನಸ್ಥಿತಿ ಎಂಥದ್ದು ಇರಬಹುದು’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.