ಕೇರಳದಲ್ಲಿ ನರ್ಸ್ ಆಗಿದ್ದಅನೀಸ್ ಕಣ್ಮಣಿ ಜಾಯ್ ಅವರು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಪಾಸಾಗಿ, ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್ ಆಗಿ ಇದ್ದ ಅನುಭವವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ರಮಕ್ಕೆ ಅವರು ಬಳಸಿಕೊಂಡಿದ್ದರಿಂದ, ಕೊಡಗು ಜಿಲ್ಲೆ ಈಗ ಕೋವಿಡ್ ಮುಕ್ತವಾಗಿದೆ. ಜನರು ಅವರನ್ನು ಸನ್ಮಾನಿಸುತ್ತಿದ್ದಾರೆ ಎಂಬ ವಿವರ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಮಹಿಳೆಯೊಬ್ಬರಿಗೆ ಹೂಗುಚ್ಛ ನೀಡಿ ಸನ್ಮಾನಿಸುವ ವಿಡಿಯೊ ಇದಾಗಿದೆ.