‘ಮೆರವಣಿಗೆ ಹೋಗುತ್ತಿಲ್ಲ. ಮತ್ತೆ ನಿಮಗೇಕೆ ಸಿಟ್ಟು?’ ಎಂಬ ಒಕ್ಕಣೆ ಇರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 27 ಸೆಕೆಂಡ್ನ ಈ ವಿಡಿಯೊದಲ್ಲಿ ಕೆಲವರು ರೈಲಿನತ್ತ ಕಲ್ಲು ತೂರುತ್ತಿರುವ ದೃಶ್ಯಗಳಿವೆ. ರೈಲಿನ ಸದ್ದಿನಿಂದ ನಮಾಜ್ಗೆ ಅಡಚಣೆ ಆಯಿತು ಎಂಬ ಆಕ್ರೋಶದಲ್ಲಿ ಮುಸ್ಲಿಂ ಯುವಕರು ರೈಲಿನತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಈ ವಿಡಿಯೊವನ್ನು ಹಂಚಿಕೊಂಡ ಕೆಲವರು ಹೇಳಿಕೊಂಡಿದ್ದಾರೆ.