ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ. ‘ಬಿತ್ನೂರ್ನಲ್ಲಿ ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ‘ಸೈಕಲ್ ದಬಾಕೆ, ಮಾತಿ ಚೋರ್ ಬಗಾನಾ ಹೇ’ ಎಂದು (ಸೈಕಲ್ ಚಿಹ್ನೆ ಒತ್ತಿ, ಭೂಗಳ್ಳನನ್ನು ಓಡಿಸಬೇಕು) ಎಂದು ಘೋಷಣೆ ಕೂಗಿದ್ದಾರೆ. ಬಿತ್ನೂರ್ನ ಬಿಜೆಪಿ ಶಾಸಕ ಅಭಿಜಿತ್ ಸಿಂಗ್ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪಗಳಿದ್ದು, ಅದನ್ನು ಗುರಿ ಮಾಡಿ ಈ ಘೋಷಣೆ ಕೂಗಲಾಗಿದೆ. ಬಿಜೆಪಿ ನಾಯಕರು ವಿಡಿಯೊವನ್ನು ತಿರುಚಿ, ಸುಳ್ಳುಸುದ್ದಿ ಹರಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಗೊತ್ತಾದ ತಕ್ಷಣ ಸಂಬಿತ್ ಪಾತ್ರಾ ಅವರು ತಮ್ಮ ಟ್ವೀಟ್ ಅಳಿಸಿದ್ದಾರೆ’ ಎಂದು ದಿ ಲಾಜಿಕಲ್ ಇಂಡಿಯನ್ ತನ್ನ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.