‘ಲವ್ಜಿಹಾದ್’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ. ಜೈಪುರದಿಂದ ಅಜ್ಮೇರ್ಗೆಸಾಗುತ್ತಿದ್ದ ರೈಲಿನಲ್ಲಿ ಮುಸ್ಲಿಂ ಪುರುಷನ ಜೊತೆ ಹಿಂದೂ ಯುವತಿಯೊಬ್ಬಳು ಪ್ರಯಾಣಿಸುತ್ತಿರುವ ಕುರಿತು ಸುಳಿವು ಸಿಗುತ್ತಲೇ ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡು ರೈಲ್ವೇ ಪೊಲೀಸ್ ಠಾಣೆಗೆ (ಜಿಆರ್ಪಿಎಫ್) ಒಪ್ಪಿಸಿರುವುದಾಗಿ ಬಜರಂಗದಳದ ಸದಸ್ಯರು ಹೇಳಿದ್ದಾರೆ.ಆ ಕುರಿತ ವರದಿಯನ್ನು ಹಲವಾರು ಸ್ಥಳೀಯ ಪತ್ರಿಕಾ ವೆಬ್ಸೈಟ್ಗಳ ಪ್ರಕಟಿಸಿವೆ. ಈ ವರದಿಯನ್ನು ಸಾಕಷ್ಟು ಫಾಲೋಯರ್ಗಳನ್ನು ಹೊಂದಿರುವ ಟ್ವಿಟರ್ ಮತ್ತು ಫೇಸ್ಬುಕ್ ಪುಟಗಳು ಹಂಚಿಕೊಂಡಿವೆ.