ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಮ್ ಆದ್ಮಿ ಸರ್ಕಾರವು ಮುಸ್ಲಿಂ ಓಲೈಕೆಯಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ. 1ರಿಂದ 10ನೇ ತರಗತಿಯ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ತುಂಬಿಕೊಡಲುಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಹೇಳಿದೆ. ಶಿಕ್ಷಣ ಇಲಾಖೆ ಹೊರಡಿಸಿದ್ದು ಎನ್ನಲಾದ ಸುತ್ತೋಲೆಯ ಪ್ರತಿಯನ್ನು ಹಲವು ಬಿಜೆಪಿ ಮುಖಂಡರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ಮುಸ್ಲಿಂ ವಿದ್ಯಾರ್ಥಿಗಳ ಶುಲ್ಕವನ್ನು ಮಾತ್ರ ಸರ್ಕಾರ ತುಂಬಿಕೊಡಲು ಮುಂದಾಗಿದೆ. ಹಿಂದೂ ಆಗಿ ಇರುವುದು ಅಪರಾಧವೇ’ ಎಂದು ಬಿಜೆಪಿ ಮುಖಂಡ ವಿಕ್ರಂ ಬಿಧೂರಿ ಎಂಬುವರು ಪ್ರಶ್ನಿಸಿದ್ದಾರೆ.
ಸರ್ಕಾರ ಹೊಡಿಸಿದ್ದ ಸುತ್ತೋಲೆಯ ಎಲ್ಲಿಯೂ, ಕೇವಲ ಮುಸ್ಲಿಂ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ತುಂಬಿಕೊಡಲಿದೆ ಎಂಬ ಉಲ್ಲೇಖವಿಲ್ಲ. ಶಾಲೆಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.